ಕಳೆದ ವರ್ಷ ಡಿಸೆಂಬರ್ 3ರಂದು ಸುಮಾರು 800 ಮಂದಿಯಿದ್ದ ಉದ್ರಿಕ್ತ ಗುಂಪು ಹಾಗೂ ಉಗ್ರ ಇಸ್ಲಾಮಿಕ್ ಪಕ್ಷಕ್ಕೆ ಸೇರಿದ ಸದಸ್ಯರು ಸಿಯಾಲ್ಕೋಟ್ ಜಿಲ್ಲೆಯ ಗಾರ್ಮೆಟ್ ಫ್ಯಾಕ್ಟರಿಗೆ ದಾಳಿ ನಡೆಸಿ, ಮುಖ್ಯಸ್ಥ ಪ್ರಿಯಾಂತ ಕುಮಾರ ಎಂಬುವವರ ಮೇಲೆ ಭೀಕರ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ನಂತರ ಮೃತ ದೇಹಕ್ಕೆ ಬೆಂಕಿ ಹಂಚಿದ್ದರು. 47 ವರ್ಷದ ಕುಮಾರ ಅವರು ದೈವನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.