ಅವಶೇಷಗಳಡಿ ಬದುಕುಳಿದವರನ್ನು ಪತ್ತೆ ಹಚ್ಚುವ, ಕಳ್ಳರು, ಕೊಲೆಗಾರರನ್ನು ಹುಡುಕಿಕೊಡುವ, ಪ್ರತಿಭಟನೆಗಳನ್ನು ನಿಯಂತ್ರಿಸಲು ಪೊಲೀಸ್ ಮತ್ತು ಇಲಾಖೆಯ ಅಧಿಕಾರಿಗಳಿಗೆ ನೆರವಾಗುವ ನಾಯಿ ಮತ್ತು ಕುದುರೆಗಳಿಗೆ, ನಿವೃತ್ತಿಯ ನಂತರ ರಕ್ಷಣೆ ಇರುವುದಿಲ್ಲ. ಇವುಗಳಿಗೆ ಭವಿಷ್ಯದಲ್ಲಿ ರಕ್ಷಣೆ ನೀಡುವ ಹಾಗೂ ಆರೈಕೆ ಮಾಡುವುದಕ್ಕಾಗಿ ಸರ್ಕಾರ ಈ ಪಿಂಚಣಿ ಯೋಜನೆ ಜಾರಿಗೆ ತರುವ ಪ್ರಸ್ತಾವವನ್ನು ಸಿದ್ಧಪಡಿಸಿದೆ.