<p><strong>ಕಠ್ಮಂಡು:</strong> ನೇಪಾಳದಲ್ಲಿ 2015ರಲ್ಲಿ ಸಂಭವಿಸಿದ್ದ ಪ್ರಬಲ ಭೂಕಂಪದಿಂದ ಹಾನಿಗೀಡಾಗಿದ್ದ 50 ಸಾವಿರ ಮನೆಗಳನ್ನು ಭಾರತವು ಯಶಸ್ವಿಯಾಗಿ ಮರು ನಿರ್ಮಾಣ ಮಾಡಿದೆ.</p>.<p>ಗೂರ್ಖಾ ಮತ್ತು ನುವಾಕೋಟ್ ಜಿಲ್ಲೆಗಳಲ್ಲಿ ಮನೆಗಳ ಮರು ನಿರ್ಮಾಣ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರ ಕಚೇರಿಯು, ರಾಷ್ಟ್ರೀಯ ಪುನರ್ ರ್ನಿರ್ಮಾಣ ಪ್ರಾಧಿಕಾರ (ಎನ್ಆರ್ಎ), ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ (ಯುಎನ್ಡಿಪಿ) ಮತ್ತು ವಿಶ್ವಸಂಸ್ಥೆಯ ಯೋಜನಾ ಸೇವೆಗಳ ಕಚೇರಿ (ಯುಎನ್ಒಪಿಎಸ್) ಸಹಯೋಗದಲ್ಲಿ ಕಠ್ಮಂಡುವಿನಲ್ಲಿ ಕಾರ್ಯಕ್ರಮ ಆಯೋಜಿಸಿತ್ತು.</p>.<p>‘ಭಾರತ ಸರ್ಕಾರವು 50,000 ಖಾಸಗಿ ಮನೆಗಳ ಮರುನಿರ್ಮಾಣವನ್ನು ಪೂರ್ಣಗೊಳಿಸಿದೆ,’ ಎಂದು ಭಾರತದ ಉಪ ಮುಖ್ಯ ರಾಯಭಾರ ಕಚೇರಿಯ ನಮ್ಗ್ಯಾ ಸಿ. ಖಂಪಾ ಅವರು ಕಾರ್ಯಕ್ರಮದಲ್ಲಿ ಘೋಷಿಸಿದರು.</p>.<p>ಗೂರ್ಖಾ ಮತ್ತು ನುವಾಕೋಟ್ ಜಿಲ್ಲೆಗಳ ನಾಲ್ಕು ನಗರ ಪುರಸಭೆಗಳು ಮತ್ತು 14 ಗ್ರಾಮೀಣ ಪುರಸಭೆಗಳಲ್ಲಿ ಭೂಕಂಪ ಪೀಡಿತ ಫಲಾನುಭವಿಗಳಿಗೆ ಸಾಮಾಜಿಕ-ತಾಂತ್ರಿಕ ಸೌಲಭ್ಯ ಮತ್ತು ಸಮಾಲೋಚನಾ (ಎಸ್ಟಿಎಫ್ಸಿ) ಸೇವೆಗಳನ್ನು ಒದಗಿಸಲು ಭಾರತ ಸರ್ಕಾರವು 2018ರ ಮಾರ್ಚ್ನಿಂದ ಯುಎನ್ಡಿಪಿ ಮತ್ತು ಯುಎನ್ಒಪಿಎಸ್ ಅನ್ನು ತೊಡಗಿಸಿದೆ.</p>.<p>ಭೂಕಂಪ ಪೀಡಿತ 50,000 ಫಲಾನುಭವಿಗಳಿಗೆ ಆರ್ಥಿಕ ಮತ್ತು ತಾಂತ್ರಿಕ ನೆರವು ಒದಗಿಸಲು, ಪುನರ್ ನಿರ್ಮಾಣ ಮಾಡಲು ಭಾರತ ಸರ್ಕಾರವು ವಸತಿ ವಲಯದ ಮೇಲೆ 150 ದಶಲಕ್ಷ ಡಾಲರ್ (₹1,116 ಕೋಟಿ)ಗಳನ್ನು ವಿನಿಯೋಗಿಸಿದೆ.</p>.<p>2015ರ ವಿನಾಶಕಾರಿ ಭೂಕಂಪದಲ್ಲಿ ಹೆಚ್ಚು ಹಾನಿ ಅನುಭವಿಸಿರುವ ನೇಪಾಳದ 11 ಜಿಲ್ಲೆಗಳ 71 ಶಿಕ್ಷಣ ಕ್ಷೇತ್ರದ ಯೋಜನೆಗಳು, 132 ಆರೋಗ್ಯ ಕಟ್ಟಡಗಳು ಮತ್ತು 28 ಪರಂಪರಿಕ ತಾಣಗಳ ಮರುಸ್ಥಾಪನೆ / ಮರುಹೊಂದಿಕೆಗಾಗಿ ಭಾರತ ಸರ್ಕಾರವು ಎನ್ಆರ್ಎ ಜೊತೆಗೆ ಕೆಲಸ ಮಾಡುತ್ತಿದೆ.</p>.<p>ಹಿಮಾಲಯ ನಾಡು ನೇಪಾಳದಲ್ಲಿ ಏಪ್ರಿಲ್ 2015ರಲ್ಲಿ ಸಂಭವಿಸಿದ್ದ ಭಾರಿ ಭೂಕಂಪದ ವೇಳೆ 9,000 ಕ್ಕೂ ಹೆಚ್ಚು ಅಧಿಕ ಮಂದಿ ಮೃತಪಟ್ಟಿದ್ದರು. 8,00,000 ಕ್ಕೂ ಹೆಚ್ಚು ಮನೆಗಳು ಮತ್ತು ಶಾಲೆಗಳು ಹಾನಿಗೀಡಾಗಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಠ್ಮಂಡು:</strong> ನೇಪಾಳದಲ್ಲಿ 2015ರಲ್ಲಿ ಸಂಭವಿಸಿದ್ದ ಪ್ರಬಲ ಭೂಕಂಪದಿಂದ ಹಾನಿಗೀಡಾಗಿದ್ದ 50 ಸಾವಿರ ಮನೆಗಳನ್ನು ಭಾರತವು ಯಶಸ್ವಿಯಾಗಿ ಮರು ನಿರ್ಮಾಣ ಮಾಡಿದೆ.</p>.<p>ಗೂರ್ಖಾ ಮತ್ತು ನುವಾಕೋಟ್ ಜಿಲ್ಲೆಗಳಲ್ಲಿ ಮನೆಗಳ ಮರು ನಿರ್ಮಾಣ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರ ಕಚೇರಿಯು, ರಾಷ್ಟ್ರೀಯ ಪುನರ್ ರ್ನಿರ್ಮಾಣ ಪ್ರಾಧಿಕಾರ (ಎನ್ಆರ್ಎ), ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ (ಯುಎನ್ಡಿಪಿ) ಮತ್ತು ವಿಶ್ವಸಂಸ್ಥೆಯ ಯೋಜನಾ ಸೇವೆಗಳ ಕಚೇರಿ (ಯುಎನ್ಒಪಿಎಸ್) ಸಹಯೋಗದಲ್ಲಿ ಕಠ್ಮಂಡುವಿನಲ್ಲಿ ಕಾರ್ಯಕ್ರಮ ಆಯೋಜಿಸಿತ್ತು.</p>.<p>‘ಭಾರತ ಸರ್ಕಾರವು 50,000 ಖಾಸಗಿ ಮನೆಗಳ ಮರುನಿರ್ಮಾಣವನ್ನು ಪೂರ್ಣಗೊಳಿಸಿದೆ,’ ಎಂದು ಭಾರತದ ಉಪ ಮುಖ್ಯ ರಾಯಭಾರ ಕಚೇರಿಯ ನಮ್ಗ್ಯಾ ಸಿ. ಖಂಪಾ ಅವರು ಕಾರ್ಯಕ್ರಮದಲ್ಲಿ ಘೋಷಿಸಿದರು.</p>.<p>ಗೂರ್ಖಾ ಮತ್ತು ನುವಾಕೋಟ್ ಜಿಲ್ಲೆಗಳ ನಾಲ್ಕು ನಗರ ಪುರಸಭೆಗಳು ಮತ್ತು 14 ಗ್ರಾಮೀಣ ಪುರಸಭೆಗಳಲ್ಲಿ ಭೂಕಂಪ ಪೀಡಿತ ಫಲಾನುಭವಿಗಳಿಗೆ ಸಾಮಾಜಿಕ-ತಾಂತ್ರಿಕ ಸೌಲಭ್ಯ ಮತ್ತು ಸಮಾಲೋಚನಾ (ಎಸ್ಟಿಎಫ್ಸಿ) ಸೇವೆಗಳನ್ನು ಒದಗಿಸಲು ಭಾರತ ಸರ್ಕಾರವು 2018ರ ಮಾರ್ಚ್ನಿಂದ ಯುಎನ್ಡಿಪಿ ಮತ್ತು ಯುಎನ್ಒಪಿಎಸ್ ಅನ್ನು ತೊಡಗಿಸಿದೆ.</p>.<p>ಭೂಕಂಪ ಪೀಡಿತ 50,000 ಫಲಾನುಭವಿಗಳಿಗೆ ಆರ್ಥಿಕ ಮತ್ತು ತಾಂತ್ರಿಕ ನೆರವು ಒದಗಿಸಲು, ಪುನರ್ ನಿರ್ಮಾಣ ಮಾಡಲು ಭಾರತ ಸರ್ಕಾರವು ವಸತಿ ವಲಯದ ಮೇಲೆ 150 ದಶಲಕ್ಷ ಡಾಲರ್ (₹1,116 ಕೋಟಿ)ಗಳನ್ನು ವಿನಿಯೋಗಿಸಿದೆ.</p>.<p>2015ರ ವಿನಾಶಕಾರಿ ಭೂಕಂಪದಲ್ಲಿ ಹೆಚ್ಚು ಹಾನಿ ಅನುಭವಿಸಿರುವ ನೇಪಾಳದ 11 ಜಿಲ್ಲೆಗಳ 71 ಶಿಕ್ಷಣ ಕ್ಷೇತ್ರದ ಯೋಜನೆಗಳು, 132 ಆರೋಗ್ಯ ಕಟ್ಟಡಗಳು ಮತ್ತು 28 ಪರಂಪರಿಕ ತಾಣಗಳ ಮರುಸ್ಥಾಪನೆ / ಮರುಹೊಂದಿಕೆಗಾಗಿ ಭಾರತ ಸರ್ಕಾರವು ಎನ್ಆರ್ಎ ಜೊತೆಗೆ ಕೆಲಸ ಮಾಡುತ್ತಿದೆ.</p>.<p>ಹಿಮಾಲಯ ನಾಡು ನೇಪಾಳದಲ್ಲಿ ಏಪ್ರಿಲ್ 2015ರಲ್ಲಿ ಸಂಭವಿಸಿದ್ದ ಭಾರಿ ಭೂಕಂಪದ ವೇಳೆ 9,000 ಕ್ಕೂ ಹೆಚ್ಚು ಅಧಿಕ ಮಂದಿ ಮೃತಪಟ್ಟಿದ್ದರು. 8,00,000 ಕ್ಕೂ ಹೆಚ್ಚು ಮನೆಗಳು ಮತ್ತು ಶಾಲೆಗಳು ಹಾನಿಗೀಡಾಗಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>