<p class="title"><strong>ಕೀವ್</strong>: ಪೂರ್ವ ಉಕ್ರೇನ್ನ ಎರಡನೇ ನಗರಲೈಸಿಚಾನ್ಸ್ಕ್ ವಶಪಡಿಸಿಕೊಳ್ಳಲು ರಷ್ಯಾ ಪಡೆಗಳು ಪ್ರಯತ್ನಿಸುತ್ತಿದ್ದು,ವಾರಗಳ ಹೋರಾಟದ ನಂತರಉಕ್ರೇನ್ ಪಡೆಗಳು ಈ ನಗರದಿಂದ ವಾಪಸಾಗಲು ಪ್ರಾರಂಭಿಸಿವೆ ಎಂದು ಉಕ್ರೇನ್ನ ಪ್ರಾದೇಶಿಕ ಸೇನಾ ಗವರ್ನರ್ ಸೆರ್ಹಿಯ್ ಹೈಡೇ ತಿಳಿಸಿದ್ದಾರೆ.</p>.<p class="title">ನಗರದ ಹೃದಯಭಾಗದಿಂದ ದೂರವಿರುವ ಪ್ರದೇಶಗಳ ಮೇಲೆ ರಷ್ಯಾ ಕ್ಷಿಪಣಿ ದಾಳಿ ಆರಂಭಿಸಿದೆ. ದಕ್ಷಿಣದಿಂದ ಲೈಸಿಚಾನ್ಸ್ಕ್ ನಗರನಿರ್ಬಂಧಿಸಲು ಪ್ರಯತ್ನಿಸುತ್ತಿವೆ.</p>.<p class="title">ರಷ್ಯಾದ ಬಾಂಬ್ ದಾಳಿಯಿಂದ ಸೆವೆಯೆರೊಡೊನೆಟ್ಸ್ಕ್ ನ ಹೆಚ್ಚಿನ ಭಾಗ ಹಾನಿಗೊಂಡಿದೆ. ಉಕ್ರೇನ್ ಪಡೆಗಳ ನೂರಾರು ಸೈನಿಕರು ನಗರದ ಅಂಚಿನಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಸುಮಾರು 500 ನಾಗರಿಕರೊಂದಿಗೆ ಆಶ್ರಯ ಪಡೆದಿದ್ದಾರೆ.</p>.<p>ಶನಿವಾರ ಬೆಳಗ್ಗೆ ಮಧ್ಯ ಉಕ್ರೇನ್ನ ಝೈಟೊಮಿರ್ ಪ್ರದೇಶದ ಮೇಲೆ ಸುಮಾರು ರಷ್ಯಾದ ಸುಮಾರು 30 ರಾಕೆಟ್ಗಳನ್ನು ಹಾರಿಸಿದ್ದು, ಒಬ್ಬ ಉಕ್ರೇನ್ ಸೈನಿಕನ ಹತ್ಯೆಯಾಗಿದೆ ಎಂದು ಪ್ರಾದೇಶಿಕ ಗವರ್ನರ್ ವಿಟಾಲಿ ಬುಚೆಂಕೊ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಕೀವ್</strong>: ಪೂರ್ವ ಉಕ್ರೇನ್ನ ಎರಡನೇ ನಗರಲೈಸಿಚಾನ್ಸ್ಕ್ ವಶಪಡಿಸಿಕೊಳ್ಳಲು ರಷ್ಯಾ ಪಡೆಗಳು ಪ್ರಯತ್ನಿಸುತ್ತಿದ್ದು,ವಾರಗಳ ಹೋರಾಟದ ನಂತರಉಕ್ರೇನ್ ಪಡೆಗಳು ಈ ನಗರದಿಂದ ವಾಪಸಾಗಲು ಪ್ರಾರಂಭಿಸಿವೆ ಎಂದು ಉಕ್ರೇನ್ನ ಪ್ರಾದೇಶಿಕ ಸೇನಾ ಗವರ್ನರ್ ಸೆರ್ಹಿಯ್ ಹೈಡೇ ತಿಳಿಸಿದ್ದಾರೆ.</p>.<p class="title">ನಗರದ ಹೃದಯಭಾಗದಿಂದ ದೂರವಿರುವ ಪ್ರದೇಶಗಳ ಮೇಲೆ ರಷ್ಯಾ ಕ್ಷಿಪಣಿ ದಾಳಿ ಆರಂಭಿಸಿದೆ. ದಕ್ಷಿಣದಿಂದ ಲೈಸಿಚಾನ್ಸ್ಕ್ ನಗರನಿರ್ಬಂಧಿಸಲು ಪ್ರಯತ್ನಿಸುತ್ತಿವೆ.</p>.<p class="title">ರಷ್ಯಾದ ಬಾಂಬ್ ದಾಳಿಯಿಂದ ಸೆವೆಯೆರೊಡೊನೆಟ್ಸ್ಕ್ ನ ಹೆಚ್ಚಿನ ಭಾಗ ಹಾನಿಗೊಂಡಿದೆ. ಉಕ್ರೇನ್ ಪಡೆಗಳ ನೂರಾರು ಸೈನಿಕರು ನಗರದ ಅಂಚಿನಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಸುಮಾರು 500 ನಾಗರಿಕರೊಂದಿಗೆ ಆಶ್ರಯ ಪಡೆದಿದ್ದಾರೆ.</p>.<p>ಶನಿವಾರ ಬೆಳಗ್ಗೆ ಮಧ್ಯ ಉಕ್ರೇನ್ನ ಝೈಟೊಮಿರ್ ಪ್ರದೇಶದ ಮೇಲೆ ಸುಮಾರು ರಷ್ಯಾದ ಸುಮಾರು 30 ರಾಕೆಟ್ಗಳನ್ನು ಹಾರಿಸಿದ್ದು, ಒಬ್ಬ ಉಕ್ರೇನ್ ಸೈನಿಕನ ಹತ್ಯೆಯಾಗಿದೆ ಎಂದು ಪ್ರಾದೇಶಿಕ ಗವರ್ನರ್ ವಿಟಾಲಿ ಬುಚೆಂಕೊ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>