‘ಶ್ರೀಲಂಕಾದ ಪ್ರವಾಸೋದ್ಯಮದ ನೂತನ ರಾಯಭಾರಿ, ಕ್ರಿಕೆಟ್ ದಂತಕಥೆ ಜಯಸೂರ್ಯ ಅವರು ಇಂದು ಹೈಕಮಿಷನರ್ ಅವರನ್ನು ಭೇಟಿ ಮಾಡಿದರು. ಭಾರತ ಮತ್ತು ಶ್ರೀಲಂಕಾದ ಜನರ ನಡುವಿನ ಸಂಬಂಧವನ್ನು ಬಲಪಡಿಸುವ ಮತ್ತು ಆರ್ಥಿಕ ಚೇತರಿಕೆಯ ಸಾಧನವಾಗಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು’ ಎಂದು ಭಾರತೀಯ ಹೈಕಮಿಷನ್ ಕಚೇರಿ ಟ್ವೀಟ್ ಮಾಡಿತ್ತು.