(ನವದೆಹಲಿ ವರದಿ): ಬೈಡನ್ ನೇತೃತ್ವದ ಸರ್ಕಾರದ ಜತೆಗೆ ಆರಂಭದಿಂದಲೇ ಸಮನ್ವಯದಿಂದ ಕೆಲಸ ಮಾಡಲು ಕೇಂದ್ರ ಸರ್ಕಾರ ಯೋಜಿಸಿದೆ. ಉಪಾಧ್ಯಕ್ಷೆಯಾಗಿ ಆಯ್ಕೆ ಆಗಿರುವ ಕಮಲಾ ಹ್ಯಾರಿಸ್ ಅವರು 2021ರ ಜನವರಿ 20ರಂದು ಅಧಿಕಾರ ವಹಿಸಿಕೊಂಡ ಬಳಿಕ ಅವರನ್ನು ಭಾರತಕ್ಕೆ ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.ಪ್ರಮಾಣ ವಚನ ಸ್ವೀಕಾರದ ನಂತರ,ಜಗತ್ತಿನ ಪ್ರಜಾತಂತ್ರ ದೇಶಗಳ ಮುಖ್ಯಸ್ಥರ ಸಮಾವೇಶಕ್ಕೆ ಬೈಡನ್ ಸಿದ್ಧತೆ ನಡೆಸಿದ್ದಾರೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಹ್ವಾನ ದೊರೆಯುವ ನಿರೀಕ್ಷೆ ಇದೆ. ಆಹ್ವಾನ ಬಂದರೆ ಅಮೆರಿಕದ ಹೊಸ ಅಧ್ಯಕ್ಷ ಮತ್ತು ಪ್ರಧಾನಿ ಮೋದಿಯ ಭೇಟಿಗೂ ಇದು ವೇದಿಕೆ ಒದಗಿಸಲಿದೆ.