‘ಪ್ಲಾಸ್ಟಿಕ್ ಮಲ್ಚ್ ಹಾಕುವುದು, ಹನಿ ನೀರಾವರಿ, ಕಾಲಕಾಲಕ್ಕೆ ಗೊಬ್ಬರ ನೀಡುವಿಕೆ, ಐಐಎಚ್ಆರ್ ಅಭಿವೃದ್ಧಿಪಡಿಸಿದ ಪೋಲಿಯಾರ್ ಪೋಷಕಾಂಶ ಸಿಂಪಡಣೆ, ಬೇರುಗಳ ರಚನೆಗೆ ಸೂಕ್ಮಾಣು ಗೊಬ್ಬರ ನೀಡುತ್ತಿದ್ದರೆ ಈ ಇಳುವರಿ ನಿಶ್ಚಿತ. ಇದು ಹುಳಿಮಿಶ್ರಿತ ದುಂಡಗಿನ (ನಾಟಿ) ಟೊಮೆಟೊ ಆಗಿದ್ದು, ಡಾ.ಟಿ.ಟಿ.ಸದಾಶಿವ ಕಂಡುಹಿಡಿದಿದ್ದಾರೆ. ದೇಶದಲ್ಲಿ ಜೈವಿಕ ಸಂಶೋಧನೆಗೆ ಪೇಟೆಂಟ್ ನೀಡುವ ವ್ಯವಸ್ಥೆ ಇಲ್ಲದ ಕಾರಣ ಇದಕ್ಕೆ ಪೇಟೆಂಟ್ ಪಡೆಯಲು ಸಾಧ್ಯವಾಗಿಲ್ಲ’ ಎಂದು ಅವರು ವಿವರಿಸಿದರು.