<p>ಮುಂಗಾರು ಭತ್ತದ ಕೊಯ್ಲು ಮುಗಿದಿದೆ. ಬೇಸಿಗೆಯಲ್ಲಿ ಭತ್ತದ ಕೃಷಿಗೆ ರೈತರು ಸಿದ್ಧರಾಗುತ್ತಿದ್ದಾರೆ. ಕೆಲವರು ಬಿತ್ತನೆ ಬೀಜಗಳನ್ನು ಸಂಗ್ರಹಿಸಿ, ಬೀಜೋಪಾಚರ ಮಾಡಿರಬಹುದು. ಇನ್ನೂ ಕೆಲವರು ಸಸಿ ಮಡಿ ತಯಾರಿಕೆಗೂ ಸಿದ್ಧತೆ ಮಾಡಿಕೊಂಡಿರಬಹುದು. ಈ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಭತ್ತ ಬೆಳೆದು, ಉತ್ತಮ ಇಳುವರಿ ಮತ್ತು ಆರೋಗ್ಯ ಪೂರ್ಣ ಫಸಲು ಪಡೆಯುವುದಕ್ಕಾಗಿ ಕೆಲವೊಂದು ಸಲಹೆಗಳನ್ನು ಇಲ್ಲಿ ಕೊಡಲಾಗಿದೆ. ಬೇಸಿಗೆ ಭತ್ತ ಮಾಡುವವರು ಈ ಅಂಶಗಳನ್ನು ಒಮ್ಮೆ ಗಮನಿಸಬಹುದು.</p>.<p>ಅಧಿಸೂಚಿತ, ಅನುಮೋದಿತ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯುವುದು ಸೂಕ್ತ.</p>.<p>ನಾಲೆ ನೀರು ಆಶ್ರಿತವಾಗಿರುವ, ನಾಲೆಯ ಕೊನೆ ಭಾಗದಲ್ಲಿರುವ ಜಮೀನಿರುವ ರೈತರು, ನೀರಿನ ಲಭ್ಯತೆ ನೋಡಿಕೊಂಡು, ಭತ್ತ ಬಿತ್ತನೆ ಮಾಡುವುದು ಸೂಕ್ತ.</p>.<p>ಚಳಿ ಇರುವುದರಿಂದ ಸಸಿ ಮಡಿಯಲ್ಲಿ ಭತ್ತದ ರೋಗಗಳ ಹತೋಟಿ ಕುರಿತು ಟ್ರೈಕೋಡರ್ಮಾ ಬೆರೆಸಿದ ಕಾಂಪೋಸ್ಟ್ ಬಳಕೆ ಅತ್ಯಗತ್ಯ.</p>.<p>ಮುಂಗಾರು ಭತ್ತ ಬೆಳೆದಲ್ಲಿಯೇ, ಬೇಸಿಗೆ ಪೈರು ಇಡುವುದಾದರೆ, ಬೆರಕೆ ಭತ್ತದ ಸಮಸ್ಯೆ ಬರುತ್ತದೆ. ಅದನ್ನು ತಡೆಯಲು ಸಸಿ ಮಡಿ ಮತ್ತು ಮುಖ್ಯ ಗದ್ದೆಗಳಲ್ಲಿ ಸಾಕಷ್ಟು ಅವಧಿಗೆ ನೀರು ನಿಲ್ಲಿಸಿ, ಕೆಸರು ಗದ್ದೆ ಕಾರ್ಯ ಸರಿಯಾಗಿ ಮಾಡಿದಲ್ಲಿ, ಕಳೆಗಳೊಂದಿಗೆ ಕಾರು (ಉದುರಿದ ) ಭತ್ತದ ಬೀಜಗಳನ್ನು ನಿಯಂತ್ರಿಸಬಹುದು.</p>.<p>ಬೇಸಿಗೆ ಭತ್ತದ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಲು ಡಿಸೆಂಬರ್ ಮೂರನೇ ವಾರದೊಳಗೆ ಸಸಿ ಮಡಿಯಲ್ಲಿ ಬಿತ್ತನೆ ಅಗತ್ಯ. ತಡವಾದಂತೆ ಇಳುವರಿ ಕಡಿಮೆಯಾಗುವುದು.</p>.<p>ಅತಿ ಮುಂಚಿತ, ಅತಿ ವಿಳಂಬವಾಗಿ ನಾಟಿ / ಬಿತ್ತನೆ ಮಾಡಿದರೆ, ಬೆಳೆಗಳಿಗೆ ಕಾಂಡಕೊರಕ ಬಾಧೆ ಬರುವ ಸಂಭವ ಇರುತ್ತದೆ. ಹಾಗಾಗಿ ಅಗತ್ಯ ಹತೋಟಿ ಕ್ರಮ ಕೈಗೊಳ್ಳಬೇಕು.</p>.<p>ಸವುಳು, ಚೌಳು ಭೂಮಿ / ನೀರು ಇದ್ದಲ್ಲಿ ಬಿಪಿಟಿ 5204 ತರಹದ ತಳಿಗಳನ್ನು ಬಳಸಬೇಕು. ಸವುಳು ನಿರೋಧಕವಲ್ಲದ ತಳಿ ಬಳಕೆ ಬೇಡ.</p>.<p>ಕೆಲ ಪಾರಂಪರಿಕ ಭತ್ತದ ಪ್ರದೇಶಗಳಲ್ಲಿ ಜಂತು ಹುಳು (Nematode) ಬಾಧೆ ಇದ್ದು ಅಂತಹ ಪ್ರದೇಶದ ಬೆಳೆಯ ಬೀಜ ಬಳಸಬಾರದು.</p>.<p>ಅನಧಿಕೃತ ಮೂಲಗಳಿಂದ ಬೀಜ ಖರೀದಿ ಮಾಡಬಾರದು.</p>.<p>ಚಳಿ ಅತಿಯಾದಾಗ, ಸಸಿ ಮಡಿಗಳಿಗೆ ತೆಂಗಿನ ಗರಿ, ಗೊಬ್ಬರ ಚೀಲ ಬಳಸಿ ರಾತ್ರಿ ಹೊತ್ತು ಚಪ್ಪರ ಹಾಕಿಸುವುದು ಸೂಕ್ತ.</p>.<p>ಟ್ರೈಕೋಡರ್ಮಾ ಬೆರೆಸಿದ ತಾಜಾ ಸಗಣಿರಾಡಿಯನ್ನು ಬೆರೆಸಿದ ನೀರನ್ನು ಪ್ರತಿ ಗದ್ದೆಗೆ ಪ್ರತ್ಯೇಕವಾಗಿ ಹಾಯಿಸುವುದರಿಂದ ರೋಗ ಬಾಧೆ ತಡೆಯಬಹುದು.</p>.<p>ಕೂರಿಗೆ ಬಿತ್ತನೆ, ಯಂತ್ರಗಳಿಂದ ನಾಟಿ ಮಾಡುವವರು ಕೈ ನಾಟಿಗಿಂತ ಮುಂಚಿತವಾಗಿ ಬಿತ್ತನೆ / ನಾಟಿ ಕಾರ್ಯ ಪೂರೈಸಬೇಕು.</p>.<p>ಬೆಳೆಯ ಆರೋಗ್ಯ ಕುರಿತು ಸಂದೇಹ ಬಂದ ತಕ್ಷಣ ಸಂಪನ್ಮೂಲ ತಜ್ಞರನ್ನು ತಕ್ಷಣ ಸಂಪರ್ಕಿಸಬೇಕು.</p>.<p><em><strong>(ಲೇಖಕರು ನಿವೃತ್ತ ಜಂಟಿ ಕೃಷಿ ನಿರ್ದೇಶಕರು)</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಂಗಾರು ಭತ್ತದ ಕೊಯ್ಲು ಮುಗಿದಿದೆ. ಬೇಸಿಗೆಯಲ್ಲಿ ಭತ್ತದ ಕೃಷಿಗೆ ರೈತರು ಸಿದ್ಧರಾಗುತ್ತಿದ್ದಾರೆ. ಕೆಲವರು ಬಿತ್ತನೆ ಬೀಜಗಳನ್ನು ಸಂಗ್ರಹಿಸಿ, ಬೀಜೋಪಾಚರ ಮಾಡಿರಬಹುದು. ಇನ್ನೂ ಕೆಲವರು ಸಸಿ ಮಡಿ ತಯಾರಿಕೆಗೂ ಸಿದ್ಧತೆ ಮಾಡಿಕೊಂಡಿರಬಹುದು. ಈ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಭತ್ತ ಬೆಳೆದು, ಉತ್ತಮ ಇಳುವರಿ ಮತ್ತು ಆರೋಗ್ಯ ಪೂರ್ಣ ಫಸಲು ಪಡೆಯುವುದಕ್ಕಾಗಿ ಕೆಲವೊಂದು ಸಲಹೆಗಳನ್ನು ಇಲ್ಲಿ ಕೊಡಲಾಗಿದೆ. ಬೇಸಿಗೆ ಭತ್ತ ಮಾಡುವವರು ಈ ಅಂಶಗಳನ್ನು ಒಮ್ಮೆ ಗಮನಿಸಬಹುದು.</p>.<p>ಅಧಿಸೂಚಿತ, ಅನುಮೋದಿತ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯುವುದು ಸೂಕ್ತ.</p>.<p>ನಾಲೆ ನೀರು ಆಶ್ರಿತವಾಗಿರುವ, ನಾಲೆಯ ಕೊನೆ ಭಾಗದಲ್ಲಿರುವ ಜಮೀನಿರುವ ರೈತರು, ನೀರಿನ ಲಭ್ಯತೆ ನೋಡಿಕೊಂಡು, ಭತ್ತ ಬಿತ್ತನೆ ಮಾಡುವುದು ಸೂಕ್ತ.</p>.<p>ಚಳಿ ಇರುವುದರಿಂದ ಸಸಿ ಮಡಿಯಲ್ಲಿ ಭತ್ತದ ರೋಗಗಳ ಹತೋಟಿ ಕುರಿತು ಟ್ರೈಕೋಡರ್ಮಾ ಬೆರೆಸಿದ ಕಾಂಪೋಸ್ಟ್ ಬಳಕೆ ಅತ್ಯಗತ್ಯ.</p>.<p>ಮುಂಗಾರು ಭತ್ತ ಬೆಳೆದಲ್ಲಿಯೇ, ಬೇಸಿಗೆ ಪೈರು ಇಡುವುದಾದರೆ, ಬೆರಕೆ ಭತ್ತದ ಸಮಸ್ಯೆ ಬರುತ್ತದೆ. ಅದನ್ನು ತಡೆಯಲು ಸಸಿ ಮಡಿ ಮತ್ತು ಮುಖ್ಯ ಗದ್ದೆಗಳಲ್ಲಿ ಸಾಕಷ್ಟು ಅವಧಿಗೆ ನೀರು ನಿಲ್ಲಿಸಿ, ಕೆಸರು ಗದ್ದೆ ಕಾರ್ಯ ಸರಿಯಾಗಿ ಮಾಡಿದಲ್ಲಿ, ಕಳೆಗಳೊಂದಿಗೆ ಕಾರು (ಉದುರಿದ ) ಭತ್ತದ ಬೀಜಗಳನ್ನು ನಿಯಂತ್ರಿಸಬಹುದು.</p>.<p>ಬೇಸಿಗೆ ಭತ್ತದ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಲು ಡಿಸೆಂಬರ್ ಮೂರನೇ ವಾರದೊಳಗೆ ಸಸಿ ಮಡಿಯಲ್ಲಿ ಬಿತ್ತನೆ ಅಗತ್ಯ. ತಡವಾದಂತೆ ಇಳುವರಿ ಕಡಿಮೆಯಾಗುವುದು.</p>.<p>ಅತಿ ಮುಂಚಿತ, ಅತಿ ವಿಳಂಬವಾಗಿ ನಾಟಿ / ಬಿತ್ತನೆ ಮಾಡಿದರೆ, ಬೆಳೆಗಳಿಗೆ ಕಾಂಡಕೊರಕ ಬಾಧೆ ಬರುವ ಸಂಭವ ಇರುತ್ತದೆ. ಹಾಗಾಗಿ ಅಗತ್ಯ ಹತೋಟಿ ಕ್ರಮ ಕೈಗೊಳ್ಳಬೇಕು.</p>.<p>ಸವುಳು, ಚೌಳು ಭೂಮಿ / ನೀರು ಇದ್ದಲ್ಲಿ ಬಿಪಿಟಿ 5204 ತರಹದ ತಳಿಗಳನ್ನು ಬಳಸಬೇಕು. ಸವುಳು ನಿರೋಧಕವಲ್ಲದ ತಳಿ ಬಳಕೆ ಬೇಡ.</p>.<p>ಕೆಲ ಪಾರಂಪರಿಕ ಭತ್ತದ ಪ್ರದೇಶಗಳಲ್ಲಿ ಜಂತು ಹುಳು (Nematode) ಬಾಧೆ ಇದ್ದು ಅಂತಹ ಪ್ರದೇಶದ ಬೆಳೆಯ ಬೀಜ ಬಳಸಬಾರದು.</p>.<p>ಅನಧಿಕೃತ ಮೂಲಗಳಿಂದ ಬೀಜ ಖರೀದಿ ಮಾಡಬಾರದು.</p>.<p>ಚಳಿ ಅತಿಯಾದಾಗ, ಸಸಿ ಮಡಿಗಳಿಗೆ ತೆಂಗಿನ ಗರಿ, ಗೊಬ್ಬರ ಚೀಲ ಬಳಸಿ ರಾತ್ರಿ ಹೊತ್ತು ಚಪ್ಪರ ಹಾಕಿಸುವುದು ಸೂಕ್ತ.</p>.<p>ಟ್ರೈಕೋಡರ್ಮಾ ಬೆರೆಸಿದ ತಾಜಾ ಸಗಣಿರಾಡಿಯನ್ನು ಬೆರೆಸಿದ ನೀರನ್ನು ಪ್ರತಿ ಗದ್ದೆಗೆ ಪ್ರತ್ಯೇಕವಾಗಿ ಹಾಯಿಸುವುದರಿಂದ ರೋಗ ಬಾಧೆ ತಡೆಯಬಹುದು.</p>.<p>ಕೂರಿಗೆ ಬಿತ್ತನೆ, ಯಂತ್ರಗಳಿಂದ ನಾಟಿ ಮಾಡುವವರು ಕೈ ನಾಟಿಗಿಂತ ಮುಂಚಿತವಾಗಿ ಬಿತ್ತನೆ / ನಾಟಿ ಕಾರ್ಯ ಪೂರೈಸಬೇಕು.</p>.<p>ಬೆಳೆಯ ಆರೋಗ್ಯ ಕುರಿತು ಸಂದೇಹ ಬಂದ ತಕ್ಷಣ ಸಂಪನ್ಮೂಲ ತಜ್ಞರನ್ನು ತಕ್ಷಣ ಸಂಪರ್ಕಿಸಬೇಕು.</p>.<p><em><strong>(ಲೇಖಕರು ನಿವೃತ್ತ ಜಂಟಿ ಕೃಷಿ ನಿರ್ದೇಶಕರು)</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>