<p>ಸಾಕಾಣಿಕೆ ಮಾಡಿರುವ ಅಥವಾ ಸಹಜವಾಗಿಯೇ ಪೊದೆಗಳಲ್ಲಿ ಕಟ್ಟಿರುವ ಜೇನುಗೂಡಿನಿಂದ ತುಪ್ಪ ಕಿತ್ತುಕೊಳ್ಳಲು ಹೋದರೆ ಹುಳುಗಳು ಕಚ್ಚುತ್ತವೆ. ಇದನ್ನು ತಪ್ಪಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಕುಂಟನಹಳ್ಳಿ ಗ್ರಾಮದ ಜೇನು ಕೃಷಿಕ ಲಕ್ಷ್ಮೇಗೌಡ ಹೊಸದಾಗಿ ಮುಖಪರದೆ ಸಿದ್ಧಪಡಿಸಿದ್ದಾರೆ.<br /> <br /> ಟೋಪಿ ಆಕಾರದಲ್ಲಿ ಇರುವ ಈ ಮುಖಪರದೆಯ ತಲೆಯ ಮೇಲ್ಭಾಗ ಹಾಗೂ ಕುತ್ತಿಗೆಯ ಭಾಗದಲ್ಲಿ ದಪ್ಪನೆಯ ಕಾಟನ್ ಬಟ್ಟೆಯನ್ನು ಬಳಸಲಾಗಿದೆ. ಮುಖದ ಭಾಗದಲ್ಲಿ ಕಣ್ಣು ಕಾಣಿಸಲು ಹಾಗೂ ಉಸಿರಾಟಕ್ಕೆ ತೊಂದರೆಯಾಗದಂತೆ ದಪ್ಪನೆಯ ಸೊಳ್ಳೆ ಪರದೆಯನ್ನು ಬಳಸಲಾಗಿದೆ. <br /> <br /> ಕೆಲವರು ಜೇನುಗೂಡಿನಿಂದ ತುಪ್ಪ ಪಡೆಯಲು ಹುಳುಗಳನ್ನು ಓಡಿಸಲು ಬೆಂಕಿ ಹಚ್ಚುತ್ತಾರೆ ಇಲ್ಲವೇ ಹೊಗೆ ಹಾಕುತ್ತಾರೆ. ಇದರಿಂದ ಹುಳುಗಳು ಸಾಯುತ್ತವೆ. ಕೃಷಿ ಹಾಗೂ ಪರಿಸರಕ್ಕೆ ಅತ್ಯಂತ ಉಪಯುಕ್ತವಾಗಿರುವ ಜೇನು ಹುಳುಗಳನ್ನು ಸಾಯಿಸದೆ ತುಪ್ಪ ಪಡೆಯಲು ಈ ಮುಖಪರದೆ ಅತ್ಯಂತ ಉಪಯುಕ್ತವಾಗಿದೆ ಎನ್ನುವ ಲಕ್ಷ್ಮೇಗೌಡ, ಇತ್ತೀಚೆಗೆ ತೋಟಗಾರಿಕೆ ಹಾಗೂ ಹಣ್ಣಿನ ಬೆಳೆಗಳಿಗೆ ರಾಸಾಯನಿಕ ಔಷಧಿ ಸಿಂಪರಣೆ ಮಾಡುತ್ತಿರುವುದರಿಂದ ಜೇನು ಹುಳುಗಳ ಸಂತತಿ ಕಣ್ಮರೆಯಾಗುತ್ತಿವೆ. ತುಪ್ಪ ಪಡೆಯುವ ಆಸೆಯಿಂದಾಗಿ ಹುಳುಗಳನ್ನು ಬೆಂಕಿ ಹಚ್ಚಿ ಸುಡುವುದನ್ನು ತಪ್ಪಿಸಲು ಮುಖಪರದೆಯನ್ನು ಸಿದ್ಧಪಡಿಸಲಾಗಿದೆ. ಮುಖಪರದೆ ಬೆಲೆ ₹ 350. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ–<strong>9844543335</strong>. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಕಾಣಿಕೆ ಮಾಡಿರುವ ಅಥವಾ ಸಹಜವಾಗಿಯೇ ಪೊದೆಗಳಲ್ಲಿ ಕಟ್ಟಿರುವ ಜೇನುಗೂಡಿನಿಂದ ತುಪ್ಪ ಕಿತ್ತುಕೊಳ್ಳಲು ಹೋದರೆ ಹುಳುಗಳು ಕಚ್ಚುತ್ತವೆ. ಇದನ್ನು ತಪ್ಪಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಕುಂಟನಹಳ್ಳಿ ಗ್ರಾಮದ ಜೇನು ಕೃಷಿಕ ಲಕ್ಷ್ಮೇಗೌಡ ಹೊಸದಾಗಿ ಮುಖಪರದೆ ಸಿದ್ಧಪಡಿಸಿದ್ದಾರೆ.<br /> <br /> ಟೋಪಿ ಆಕಾರದಲ್ಲಿ ಇರುವ ಈ ಮುಖಪರದೆಯ ತಲೆಯ ಮೇಲ್ಭಾಗ ಹಾಗೂ ಕುತ್ತಿಗೆಯ ಭಾಗದಲ್ಲಿ ದಪ್ಪನೆಯ ಕಾಟನ್ ಬಟ್ಟೆಯನ್ನು ಬಳಸಲಾಗಿದೆ. ಮುಖದ ಭಾಗದಲ್ಲಿ ಕಣ್ಣು ಕಾಣಿಸಲು ಹಾಗೂ ಉಸಿರಾಟಕ್ಕೆ ತೊಂದರೆಯಾಗದಂತೆ ದಪ್ಪನೆಯ ಸೊಳ್ಳೆ ಪರದೆಯನ್ನು ಬಳಸಲಾಗಿದೆ. <br /> <br /> ಕೆಲವರು ಜೇನುಗೂಡಿನಿಂದ ತುಪ್ಪ ಪಡೆಯಲು ಹುಳುಗಳನ್ನು ಓಡಿಸಲು ಬೆಂಕಿ ಹಚ್ಚುತ್ತಾರೆ ಇಲ್ಲವೇ ಹೊಗೆ ಹಾಕುತ್ತಾರೆ. ಇದರಿಂದ ಹುಳುಗಳು ಸಾಯುತ್ತವೆ. ಕೃಷಿ ಹಾಗೂ ಪರಿಸರಕ್ಕೆ ಅತ್ಯಂತ ಉಪಯುಕ್ತವಾಗಿರುವ ಜೇನು ಹುಳುಗಳನ್ನು ಸಾಯಿಸದೆ ತುಪ್ಪ ಪಡೆಯಲು ಈ ಮುಖಪರದೆ ಅತ್ಯಂತ ಉಪಯುಕ್ತವಾಗಿದೆ ಎನ್ನುವ ಲಕ್ಷ್ಮೇಗೌಡ, ಇತ್ತೀಚೆಗೆ ತೋಟಗಾರಿಕೆ ಹಾಗೂ ಹಣ್ಣಿನ ಬೆಳೆಗಳಿಗೆ ರಾಸಾಯನಿಕ ಔಷಧಿ ಸಿಂಪರಣೆ ಮಾಡುತ್ತಿರುವುದರಿಂದ ಜೇನು ಹುಳುಗಳ ಸಂತತಿ ಕಣ್ಮರೆಯಾಗುತ್ತಿವೆ. ತುಪ್ಪ ಪಡೆಯುವ ಆಸೆಯಿಂದಾಗಿ ಹುಳುಗಳನ್ನು ಬೆಂಕಿ ಹಚ್ಚಿ ಸುಡುವುದನ್ನು ತಪ್ಪಿಸಲು ಮುಖಪರದೆಯನ್ನು ಸಿದ್ಧಪಡಿಸಲಾಗಿದೆ. ಮುಖಪರದೆ ಬೆಲೆ ₹ 350. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ–<strong>9844543335</strong>. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>