<p>ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಬೇಸಿಗೆಯ ತೀವ್ರತೆ ದಿನೇದಿನೇ ಹೆಚ್ಚುತ್ತಿದೆ. ಈ ವರ್ಷ ಗರಿಷ್ಠ ಉಷ್ಣಾಂಶದಲ್ಲಿ ಹಿಂದೆಂದಿಗಿಂತಲೂ ಏರಿಕೆಯಾಗಿದೆ. ಆದರೆ ಈ ಉಷ್ಣಾಂಶ ಮುಂಗಾರಿಗೆ ವರವಾಗಿ ಪರಿಣಮಿಸಲಿದೆ.<br /> <br /> ಜೂನ್ನಿಂದ ಸೆಪ್ಟೆಂಬರ್ವರೆಗೂ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಈ ಬಾರಿಯ ಬೇಸಿಗೆ ಮಳೆ (ಪೂರ್ವ ಮುಂಗಾರು)ಯು ನಿಗದಿತ ಕಾಲಕ್ಕೆ ಸರಾಸರಿ ಪ್ರಮಾಣದಲ್ಲಿ ಬರುವ ಮುನ್ಸೂಚನೆಯಿದೆ. ಇಂತಹ ಸಂದರ್ಭದಲ್ಲಿ ರೈತರು ಸೂಕ್ತವಾದ ಬೇಸಾಯ ಕ್ರಮಗಳನ್ನು ಅನುಸರಿಸಬೇಕು ಮತ್ತು ಅದಕ್ಕೆ ತಕ್ಕಂತೆ ಕೃಷಿ ಪರಿಕರಗಳನ್ನು ಒದಗಿಸಿಕೊಳ್ಳಬೇಕು.<br /> <br /> ರೈತಾಪಿ ವರ್ಗದವರು ಹೇಳುವ ಹಾಗೆ ಭರಣಿ ಬಿಸಿಲು ಭರಿಸೋಕೆ ಆಗೋದಿಲ್ಲ ಆದರೆ ಅದೇ ಭರಣಿ ಮಳೆ ಹುಯ್ದರೆ ಧರಣಿಯೆಲ್ಲಾ ಬೆಳೆ ಎಂಬುದನ್ನೂ ಮರೆಯುವಂತಿಲ್ಲ. ದಕ್ಷಿಣ ಕರ್ನಾಟಕದ ಹಲವು ಭಾಗಗಳಲ್ಲಿ ಪೂರ್ವ ಮುಂಗಾರು ಮಳೆಯು ಬಿರುಸಾಗಿದ್ದು ಈ ತಿಂಗಳ ಕೊನೆ ವಾರದಿಂದ ಮಳೆಯು ಬೀಳತೊಡಗುತ್ತದೆ.<br /> <br /> ಇಂಥ ಪ್ರದೇಶಗಳಲ್ಲಿ ಎರಡು ಬೆಳೆ ಪದ್ಧತಿ ವಾಡಿಕೆಯಲ್ಲಿದೆ. ಎರಡು ಬೆಳೆ ಪದ್ಧತಿಯನ್ನು ಅನುಸರಿಸುವ ರೈತರು ಬೀಳುವ ಮಳೆಯನ್ನು ಸಂರಕ್ಷಣೆ ಮಾಡಿಕೊಂಡು ವರ್ಷದಲ್ಲಿ ಎರಡು ಬೆಳೆಗಳನ್ನು ಖುಷ್ಕಿ ಪ್ರದೇಶದಲ್ಲಿಯೂ ತೆಗೆದುಕೊಳ್ಳಬಹುದು.<br /> <br /> ಏಪ್ರಿಲ್–ಮೇ ತಿಂಗಳಿನಲ್ಲಿ ಬಿತ್ತಬಹುದಾದ ಮೊದಲ ಬೆಳೆ: ಮಧ್ಯದ ಒಣ ಪ್ರದೇಶ (ಕೃಷಿ ವಲಯ-4)ದಲ್ಲಿ ಮೊದಲನೇ ಬೆಳೆಯಾಗಿ ಹೈಬ್ರೀಡ್ ಸಜ್ಜೆ, ತೃಣ ಧಾನ್ಯಗಳು, ಹೆಸರು, ಅಲಸಂದೆ ಅಥವಾ ಉದ್ದು ಬೆಳೆಗಳನ್ನು ಬೆಳೆಯುವುದು ಲಾಭದಾಯಕ.<br /> <br /> ಪೂರ್ವ ಒಣ ಪ್ರದೇಶಗಳಲ್ಲಿ (ಕೃಷಿ ವಲಯ 5)ಮೊದಲ ಬೆಳೆಯಾಗಿ ಎಳ್ಳು, ಹುಚ್ಚೆಳ್ಳು, ಅಲಸಂದೆ, ಮೇವಿನ ಮುಸುಕಿನ ಜೋಳ ಅಥವಾ ನೆಲಗಡಲೆಯಂಥ ಅಲ್ಪಾವಧಿ ಬೆಳೆಗಳನ್ನು ಮೇ ತಿಂಗಳ ಎರಡನೇ ವಾರದಿಂದ ಜೂನ್ ಮೊದಲ ವಾರದವರೆಗೆ ಬಿತ್ತನೆ ಮಾಡುವುದು ಸೂಕ್ತವಾಗಿರುತ್ತದೆ. ಈ ಬೆಳೆಗಳು ಆಗಸ್ಟ್ ಎರಡನೇ ಅಥವಾ ಮೂರನೇ ವಾರದಲ್ಲಿ ಕಟಾವಿಗೆ ಬರುತ್ತವೆ.<br /> <br /> ಈ ಬೆಳೆಗಳನ್ನು ಕಟಾವು ಮಾಡಿದ ತಕ್ಷಣ ಸಸಿಮಡಿಯಲ್ಲಿ ಸಿದ್ಧವಾಗಿರುವ ರಾಗಿಯನ್ನು ನಾಟಿ ಮಾಡಬಹುದು. ಮಣ್ಣಿನ ಫಲವತ್ತತೆ ಹೆಚ್ಚಿಸಲು ಅಲಸಂದೆ, ಸೆಣಬು, ಇನ್ನಿತರೆ ದ್ವಿದಳ ಬೆಳೆಗಳನ್ನು ಹಸಿರೆಲೆ ಗೊಬ್ಬರದ ಬೆಳೆಯಾಗಿ ಬೆಳೆಯಬಹುದು.<br /> <br /> ಮೇ ತಿಂಗಳಲ್ಲಿ ದೀರ್ಘಾವಧಿ ಬೆಳೆಗಳಾದ ತೊಗರಿ ಮತ್ತು ಹರಳು ಬೆಳೆಗಳನ್ನು ಏಕಬೆಳೆಗಳಾಗಿ ಬೆಳೆದರೆ ಹೆಚ್ಚು ಲಾಭದಾಯಕ, ಮಣ್ಣಿನ ಫಲವತ್ತತೆ ಹಾಗೂ ಮಣ್ಣಿನ ಆಳ ಕಡಿಮೆ ಇರುವ ಕಡೆಯಲ್ಲಿ ತೊಗರಿ, ಹರಳಿನ ಬದಲಾಗಿ ಎಳ್ಳು, ಅಲಸಂದೆ ಅಥವಾ ನೆಲಗಡಲೆಯನ್ನು ಬೆಳೆಯವುದು ಅನುಕೂಲಕರವಾಗಿರುತ್ತದೆ.<br /> <br /> ದಕ್ಷಿಣ ಒಣ ಪ್ರದೇಶಗಳಲ್ಲಿ (ಕೃಷಿ ವಲಯ 6) ಹುರಳಿ, ಎಳ್ಳು, ಹೆಸರು, ಅಲಸಂದೆ, ಉದ್ದು ಹಾಗೂ ಹೆಚ್ಚು ತೇವಾಂಶ ಒದಗಿಸುವ ಗೋಡು ಮಣ್ಣಿನ ಪ್ರದೇಶಗಳಲ್ಲಿ ಸೂರ್ಯಕಾಂತಿ, ಹರಳು ಮತ್ತು ತೃಣ ಧಾನ್ಯಗಳನ್ನು ಮೊದಲನೇ ಬೆಳೆಯಾಗಿ ಬಿತ್ತನೆ ಮಾಡುವುದು ಒಳಿತು.</p>.<p>ಅರೆ ಮಲೆನಾಡು ಪ್ರದೇಶದಲ್ಲಿ (ಕೃಷಿ ವಲಯ 7) ಮಳೆ ವಿತರಣೆ ಚೆನ್ನಾಗಿ ಇರುವುದರಿಂದ ಸಾಮಾನ್ಯವಾಗಿ ಎರಡು ಬೆಳೆ ಪದ್ಧತಿಯು ವಾಡಿಕೆಯಲ್ಲಿದ್ದು ಏಪ್ರಿಲ್-ಮೇನಲ್ಲಿ ಮೊದಲ ಬೆಳೆಗಳಾಗಿ ಹೈಬ್ರೀಡ್ ಸಜ್ಜೆ, ಹೊಗೆಸೊಪ್ಪು, ಆಲೂಗಡ್ಡೆ, ಮೆಣಸಿನ ಕಾಯಿ,ಶೇಂಗಾ, ಎಳ್ಳು, ತೃಣ ಧಾನ್ಯಗಳು ಹಾಗೂ ಅಲ್ಪಾವಧಿ ಬೇಳೆ ಕಾಳುಗಳನ್ನು ಬೆಳೆಯುವುದು ಉತ್ತಮದಾಯಕವಾಗಿರುತ್ತದೆ.<br /> <br /> ಉತ್ತರ ಅರೆ ಮಲೆನಾಡು ಪ್ರದೇಶದಲ್ಲಿ(ಕೃಷಿ ವಲಯ 8) ಶೇಂಗಾ, ಸೋಯಾ ಅವರೆ, ಸೂರ್ಯಕಾಂತಿ, ಎಳ್ಳು, ಸಾಮೆ, ಸಜ್ಜೆ, ದ್ವಿದಳ ಧಾನ್ಯಗಳನ್ನು ಮೊದಲನೆ ಬೆಳೆಯಾಗಿ ಬೆಳೆಯಬಹುದು.<br /> <br /> ಸಾಮಾನ್ಯವಾಗಿ ದ್ವಿದಳ ಬೆಳೆಗಳು (ಅಲಸಂದೆ, ಉದ್ದು, ಹೆಸರು) ಹೆಕ್ಟೇರಿಗೆ20–30 ಕಿ.ಗ್ರಾಂ ಸಾರಜನಕವನ್ನು ಸ್ಥಿರೀಕರಿಸುವುದಲ್ಲದೇ ಮುಂಗಾರಿನಲ್ಲಿ ಹೊದಿಕೆ ಬೆಳೆಗಳಾಗಿ ಮಣ್ಣಿನ ಸಂರಕ್ಷಣೆ ಮಾಡುತ್ತವೆ.</p>.<p>ಮಳೆಯ ಮುನ್ಸೂಚನೆಯನ್ನು ಅನುಸರಿಸಿ ರೈತರುಸೂಕ್ತ ಬೆಳೆ ಪದ್ಧತಿ ಕೈಗೊಂಡರೆ ಉತ್ತಮ ಇಳುವರಿ ಪಡೆಯಬಹುದು ಹಾಗೂ ರೈತರ ಮೊಗದಲ್ಲಿ ಹರ್ಷದ ಹೊನಲು ಕಾಣಬಹುದು. ಲೇಖಕರು ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು, ಕೃಷಿ ಹವಾಮಾನ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಗಾಂಧಿ ಕೃಷಿ ವಿಜ್ಞಾನಕೇಂದ್ರ, ಬೆಂಗಳೂರು</p>.<p><br /> <strong>*ಪೂರ್ವ ಮುಂಗಾರಿನ ಮಳೆ</strong><br /> <b> </b>ಪೂರ್ವ ಮುಂಗಾರಿನಲ್ಲಿ ಕ್ರಮವಾಗಿ ಅಶ್ವಿನಿ<br /> (ಏ.14ರಿಂದ ಏ. 26– 32.4 ಮಿ.ಮೀ ಮಳೆ)<br /> ಭರಣಿ (ಏ. 27ರಿಂದ ಮೇ 10–26.0 ಮಿ.ಮೀ)<br /> ಕೃತ್ತಿಕ (ಮೇ 11ರಿಂದ ಮೇ 24– 46.6 ಮಿ.ಮೀ)<br /> ರೋಹಿಣಿ (ಮೇ 25ರಿಂದ ಜೂ 7– 55.2 ಮಿ.ಮೀ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಬೇಸಿಗೆಯ ತೀವ್ರತೆ ದಿನೇದಿನೇ ಹೆಚ್ಚುತ್ತಿದೆ. ಈ ವರ್ಷ ಗರಿಷ್ಠ ಉಷ್ಣಾಂಶದಲ್ಲಿ ಹಿಂದೆಂದಿಗಿಂತಲೂ ಏರಿಕೆಯಾಗಿದೆ. ಆದರೆ ಈ ಉಷ್ಣಾಂಶ ಮುಂಗಾರಿಗೆ ವರವಾಗಿ ಪರಿಣಮಿಸಲಿದೆ.<br /> <br /> ಜೂನ್ನಿಂದ ಸೆಪ್ಟೆಂಬರ್ವರೆಗೂ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಈ ಬಾರಿಯ ಬೇಸಿಗೆ ಮಳೆ (ಪೂರ್ವ ಮುಂಗಾರು)ಯು ನಿಗದಿತ ಕಾಲಕ್ಕೆ ಸರಾಸರಿ ಪ್ರಮಾಣದಲ್ಲಿ ಬರುವ ಮುನ್ಸೂಚನೆಯಿದೆ. ಇಂತಹ ಸಂದರ್ಭದಲ್ಲಿ ರೈತರು ಸೂಕ್ತವಾದ ಬೇಸಾಯ ಕ್ರಮಗಳನ್ನು ಅನುಸರಿಸಬೇಕು ಮತ್ತು ಅದಕ್ಕೆ ತಕ್ಕಂತೆ ಕೃಷಿ ಪರಿಕರಗಳನ್ನು ಒದಗಿಸಿಕೊಳ್ಳಬೇಕು.<br /> <br /> ರೈತಾಪಿ ವರ್ಗದವರು ಹೇಳುವ ಹಾಗೆ ಭರಣಿ ಬಿಸಿಲು ಭರಿಸೋಕೆ ಆಗೋದಿಲ್ಲ ಆದರೆ ಅದೇ ಭರಣಿ ಮಳೆ ಹುಯ್ದರೆ ಧರಣಿಯೆಲ್ಲಾ ಬೆಳೆ ಎಂಬುದನ್ನೂ ಮರೆಯುವಂತಿಲ್ಲ. ದಕ್ಷಿಣ ಕರ್ನಾಟಕದ ಹಲವು ಭಾಗಗಳಲ್ಲಿ ಪೂರ್ವ ಮುಂಗಾರು ಮಳೆಯು ಬಿರುಸಾಗಿದ್ದು ಈ ತಿಂಗಳ ಕೊನೆ ವಾರದಿಂದ ಮಳೆಯು ಬೀಳತೊಡಗುತ್ತದೆ.<br /> <br /> ಇಂಥ ಪ್ರದೇಶಗಳಲ್ಲಿ ಎರಡು ಬೆಳೆ ಪದ್ಧತಿ ವಾಡಿಕೆಯಲ್ಲಿದೆ. ಎರಡು ಬೆಳೆ ಪದ್ಧತಿಯನ್ನು ಅನುಸರಿಸುವ ರೈತರು ಬೀಳುವ ಮಳೆಯನ್ನು ಸಂರಕ್ಷಣೆ ಮಾಡಿಕೊಂಡು ವರ್ಷದಲ್ಲಿ ಎರಡು ಬೆಳೆಗಳನ್ನು ಖುಷ್ಕಿ ಪ್ರದೇಶದಲ್ಲಿಯೂ ತೆಗೆದುಕೊಳ್ಳಬಹುದು.<br /> <br /> ಏಪ್ರಿಲ್–ಮೇ ತಿಂಗಳಿನಲ್ಲಿ ಬಿತ್ತಬಹುದಾದ ಮೊದಲ ಬೆಳೆ: ಮಧ್ಯದ ಒಣ ಪ್ರದೇಶ (ಕೃಷಿ ವಲಯ-4)ದಲ್ಲಿ ಮೊದಲನೇ ಬೆಳೆಯಾಗಿ ಹೈಬ್ರೀಡ್ ಸಜ್ಜೆ, ತೃಣ ಧಾನ್ಯಗಳು, ಹೆಸರು, ಅಲಸಂದೆ ಅಥವಾ ಉದ್ದು ಬೆಳೆಗಳನ್ನು ಬೆಳೆಯುವುದು ಲಾಭದಾಯಕ.<br /> <br /> ಪೂರ್ವ ಒಣ ಪ್ರದೇಶಗಳಲ್ಲಿ (ಕೃಷಿ ವಲಯ 5)ಮೊದಲ ಬೆಳೆಯಾಗಿ ಎಳ್ಳು, ಹುಚ್ಚೆಳ್ಳು, ಅಲಸಂದೆ, ಮೇವಿನ ಮುಸುಕಿನ ಜೋಳ ಅಥವಾ ನೆಲಗಡಲೆಯಂಥ ಅಲ್ಪಾವಧಿ ಬೆಳೆಗಳನ್ನು ಮೇ ತಿಂಗಳ ಎರಡನೇ ವಾರದಿಂದ ಜೂನ್ ಮೊದಲ ವಾರದವರೆಗೆ ಬಿತ್ತನೆ ಮಾಡುವುದು ಸೂಕ್ತವಾಗಿರುತ್ತದೆ. ಈ ಬೆಳೆಗಳು ಆಗಸ್ಟ್ ಎರಡನೇ ಅಥವಾ ಮೂರನೇ ವಾರದಲ್ಲಿ ಕಟಾವಿಗೆ ಬರುತ್ತವೆ.<br /> <br /> ಈ ಬೆಳೆಗಳನ್ನು ಕಟಾವು ಮಾಡಿದ ತಕ್ಷಣ ಸಸಿಮಡಿಯಲ್ಲಿ ಸಿದ್ಧವಾಗಿರುವ ರಾಗಿಯನ್ನು ನಾಟಿ ಮಾಡಬಹುದು. ಮಣ್ಣಿನ ಫಲವತ್ತತೆ ಹೆಚ್ಚಿಸಲು ಅಲಸಂದೆ, ಸೆಣಬು, ಇನ್ನಿತರೆ ದ್ವಿದಳ ಬೆಳೆಗಳನ್ನು ಹಸಿರೆಲೆ ಗೊಬ್ಬರದ ಬೆಳೆಯಾಗಿ ಬೆಳೆಯಬಹುದು.<br /> <br /> ಮೇ ತಿಂಗಳಲ್ಲಿ ದೀರ್ಘಾವಧಿ ಬೆಳೆಗಳಾದ ತೊಗರಿ ಮತ್ತು ಹರಳು ಬೆಳೆಗಳನ್ನು ಏಕಬೆಳೆಗಳಾಗಿ ಬೆಳೆದರೆ ಹೆಚ್ಚು ಲಾಭದಾಯಕ, ಮಣ್ಣಿನ ಫಲವತ್ತತೆ ಹಾಗೂ ಮಣ್ಣಿನ ಆಳ ಕಡಿಮೆ ಇರುವ ಕಡೆಯಲ್ಲಿ ತೊಗರಿ, ಹರಳಿನ ಬದಲಾಗಿ ಎಳ್ಳು, ಅಲಸಂದೆ ಅಥವಾ ನೆಲಗಡಲೆಯನ್ನು ಬೆಳೆಯವುದು ಅನುಕೂಲಕರವಾಗಿರುತ್ತದೆ.<br /> <br /> ದಕ್ಷಿಣ ಒಣ ಪ್ರದೇಶಗಳಲ್ಲಿ (ಕೃಷಿ ವಲಯ 6) ಹುರಳಿ, ಎಳ್ಳು, ಹೆಸರು, ಅಲಸಂದೆ, ಉದ್ದು ಹಾಗೂ ಹೆಚ್ಚು ತೇವಾಂಶ ಒದಗಿಸುವ ಗೋಡು ಮಣ್ಣಿನ ಪ್ರದೇಶಗಳಲ್ಲಿ ಸೂರ್ಯಕಾಂತಿ, ಹರಳು ಮತ್ತು ತೃಣ ಧಾನ್ಯಗಳನ್ನು ಮೊದಲನೇ ಬೆಳೆಯಾಗಿ ಬಿತ್ತನೆ ಮಾಡುವುದು ಒಳಿತು.</p>.<p>ಅರೆ ಮಲೆನಾಡು ಪ್ರದೇಶದಲ್ಲಿ (ಕೃಷಿ ವಲಯ 7) ಮಳೆ ವಿತರಣೆ ಚೆನ್ನಾಗಿ ಇರುವುದರಿಂದ ಸಾಮಾನ್ಯವಾಗಿ ಎರಡು ಬೆಳೆ ಪದ್ಧತಿಯು ವಾಡಿಕೆಯಲ್ಲಿದ್ದು ಏಪ್ರಿಲ್-ಮೇನಲ್ಲಿ ಮೊದಲ ಬೆಳೆಗಳಾಗಿ ಹೈಬ್ರೀಡ್ ಸಜ್ಜೆ, ಹೊಗೆಸೊಪ್ಪು, ಆಲೂಗಡ್ಡೆ, ಮೆಣಸಿನ ಕಾಯಿ,ಶೇಂಗಾ, ಎಳ್ಳು, ತೃಣ ಧಾನ್ಯಗಳು ಹಾಗೂ ಅಲ್ಪಾವಧಿ ಬೇಳೆ ಕಾಳುಗಳನ್ನು ಬೆಳೆಯುವುದು ಉತ್ತಮದಾಯಕವಾಗಿರುತ್ತದೆ.<br /> <br /> ಉತ್ತರ ಅರೆ ಮಲೆನಾಡು ಪ್ರದೇಶದಲ್ಲಿ(ಕೃಷಿ ವಲಯ 8) ಶೇಂಗಾ, ಸೋಯಾ ಅವರೆ, ಸೂರ್ಯಕಾಂತಿ, ಎಳ್ಳು, ಸಾಮೆ, ಸಜ್ಜೆ, ದ್ವಿದಳ ಧಾನ್ಯಗಳನ್ನು ಮೊದಲನೆ ಬೆಳೆಯಾಗಿ ಬೆಳೆಯಬಹುದು.<br /> <br /> ಸಾಮಾನ್ಯವಾಗಿ ದ್ವಿದಳ ಬೆಳೆಗಳು (ಅಲಸಂದೆ, ಉದ್ದು, ಹೆಸರು) ಹೆಕ್ಟೇರಿಗೆ20–30 ಕಿ.ಗ್ರಾಂ ಸಾರಜನಕವನ್ನು ಸ್ಥಿರೀಕರಿಸುವುದಲ್ಲದೇ ಮುಂಗಾರಿನಲ್ಲಿ ಹೊದಿಕೆ ಬೆಳೆಗಳಾಗಿ ಮಣ್ಣಿನ ಸಂರಕ್ಷಣೆ ಮಾಡುತ್ತವೆ.</p>.<p>ಮಳೆಯ ಮುನ್ಸೂಚನೆಯನ್ನು ಅನುಸರಿಸಿ ರೈತರುಸೂಕ್ತ ಬೆಳೆ ಪದ್ಧತಿ ಕೈಗೊಂಡರೆ ಉತ್ತಮ ಇಳುವರಿ ಪಡೆಯಬಹುದು ಹಾಗೂ ರೈತರ ಮೊಗದಲ್ಲಿ ಹರ್ಷದ ಹೊನಲು ಕಾಣಬಹುದು. ಲೇಖಕರು ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು, ಕೃಷಿ ಹವಾಮಾನ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಗಾಂಧಿ ಕೃಷಿ ವಿಜ್ಞಾನಕೇಂದ್ರ, ಬೆಂಗಳೂರು</p>.<p><br /> <strong>*ಪೂರ್ವ ಮುಂಗಾರಿನ ಮಳೆ</strong><br /> <b> </b>ಪೂರ್ವ ಮುಂಗಾರಿನಲ್ಲಿ ಕ್ರಮವಾಗಿ ಅಶ್ವಿನಿ<br /> (ಏ.14ರಿಂದ ಏ. 26– 32.4 ಮಿ.ಮೀ ಮಳೆ)<br /> ಭರಣಿ (ಏ. 27ರಿಂದ ಮೇ 10–26.0 ಮಿ.ಮೀ)<br /> ಕೃತ್ತಿಕ (ಮೇ 11ರಿಂದ ಮೇ 24– 46.6 ಮಿ.ಮೀ)<br /> ರೋಹಿಣಿ (ಮೇ 25ರಿಂದ ಜೂ 7– 55.2 ಮಿ.ಮೀ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>