<p><strong>ಕನ್ನೆಳಲು</strong></p><p>‘ಕನ್ನೆ’ ಆದ ಚಿತ್ರಾಂಗದೆ ‘ಕನ್ನೆಲ’ ಅರ್ಥಾತ್ ಹೊಸಭೂಮಿ, ಫಲವತ್ತಾದ ಭೂಮಿ. ಅವಳ ಕನ್ಯಾ ಭಾವದ ಹರ್ಷ ಮಿನುಗನ್ನು ಕುವೆಂಪು ಪ್ರಕೃತಿಯ ‘ಕನ್ನೆಳಲ’ ನಲಿವಿನಲ್ಲಿ ಬಣ್ಣಿಸಿರುವ ರೀತಿ ಮನೋಜ್ಞವಾಗಿದೆ. ಅವರಿಂದ ರೂಪುಗೊಂಡ ಪದ ‘ಕನ್ನೆಳಲು’ ಕನ್ನೆ ಚಿತ್ರಾಂಗದೆಯಂತೆ ಹೊಸತಾದ ನೆಳಲು.</p><p>‘ಕನ್ನೆಳಲ ಪಸಲೆಯಲಿ</p><p>ಹೊನ್ನೀರ ಮಳೆಹೊಯ್ಯಲಲ್ಲಲ್ಲಿ ನೀರುಗಳ್</p><p>ಸಣ್ಣಸಣ್ಣಗೆ ತಂಗಿ ಮಿನುಗುವಂತೆ.’</p>. <p>ಕಲಿಧನ್ವಿ</p><p>ಕಲಿಧನ್ವಿ (ನಾ). ಶೂರ ಬಿಲ್ಲುಗಾರ</p><p>ಮಾಯಾ ಜಿಂಕೆಯನ್ನು ಹಿಡಿದು ತರಲು ಹೊರಟ ಶೂರ ಧನುರ್ಧರ ರಾಮನನ್ನು ‘ಕಲಿಧನ್ವಿ’ ಪದದಿಂದ ಕುವೆಂಪು ಹೀಗೆ ಚಿತ್ರಿಸಿದ್ದಾರೆ:</p><p>‘ಸದೃಢ ಜಂಘೆಯ ನಡೆಯ ಕಲಿಧನ್ವಿ’ </p>.<p>ರವಶವ</p><p>ರವಶವ (ನಾ). ಶಬ್ದದ ಹೆಣ</p><p>ಸೀತೆಯನ್ನು ರಾವಣನು ಅಪಹರಿಸಿಕೊಂಡು ಹೋದಮೇಲೆ ರಾಮಲಕ್ಷ್ಮಣರು ನಿರಾಶೆಯಿಂದ ಪಂಚವಟಿಯನ್ನು ಬಿಟ್ಟು ಹೋಗುವರು. ನಿಬಿಡ ಕಾಡಿನಲ್ಲಿ ನಡೆಯುವ ರಾಮನಿಗೆ ನೋವು, ಸಂಕಟ, ವ್ಯಸನದಿಂದಾಗಿ ಆ ನಿರ್ಜನ ಮೌನ ವಾತಾವರಣವು ನೇತ್ಯಾತ್ಮಕವಾಗಿ ಕಾಣುತ್ತದೆ. ಅದನ್ನು ಮನಃಶಾಸ್ತ್ರಜ್ಞನಂತೆ ಪರಿಭಾವಿಸಿ ಕುವೆಂಪು ‘ರಣಶವಂ’ ನುಡಿ ರೂಪಿಸಿ ಹೀಗೆ ಬಣ್ಣಿಸಿದ್ದಾರೆ:</p>.<p>‘ಇದು ನಿರ್ಜನತೆಯಲ್ತು:</p><p>ನೈರಾಶ್ಯದಾಕಳಿಕೆ! ಇದು ಮೌನಮಲ್ತಲ್ತು:</p><p>ರವಶವಂ! </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನ್ನೆಳಲು</strong></p><p>‘ಕನ್ನೆ’ ಆದ ಚಿತ್ರಾಂಗದೆ ‘ಕನ್ನೆಲ’ ಅರ್ಥಾತ್ ಹೊಸಭೂಮಿ, ಫಲವತ್ತಾದ ಭೂಮಿ. ಅವಳ ಕನ್ಯಾ ಭಾವದ ಹರ್ಷ ಮಿನುಗನ್ನು ಕುವೆಂಪು ಪ್ರಕೃತಿಯ ‘ಕನ್ನೆಳಲ’ ನಲಿವಿನಲ್ಲಿ ಬಣ್ಣಿಸಿರುವ ರೀತಿ ಮನೋಜ್ಞವಾಗಿದೆ. ಅವರಿಂದ ರೂಪುಗೊಂಡ ಪದ ‘ಕನ್ನೆಳಲು’ ಕನ್ನೆ ಚಿತ್ರಾಂಗದೆಯಂತೆ ಹೊಸತಾದ ನೆಳಲು.</p><p>‘ಕನ್ನೆಳಲ ಪಸಲೆಯಲಿ</p><p>ಹೊನ್ನೀರ ಮಳೆಹೊಯ್ಯಲಲ್ಲಲ್ಲಿ ನೀರುಗಳ್</p><p>ಸಣ್ಣಸಣ್ಣಗೆ ತಂಗಿ ಮಿನುಗುವಂತೆ.’</p>. <p>ಕಲಿಧನ್ವಿ</p><p>ಕಲಿಧನ್ವಿ (ನಾ). ಶೂರ ಬಿಲ್ಲುಗಾರ</p><p>ಮಾಯಾ ಜಿಂಕೆಯನ್ನು ಹಿಡಿದು ತರಲು ಹೊರಟ ಶೂರ ಧನುರ್ಧರ ರಾಮನನ್ನು ‘ಕಲಿಧನ್ವಿ’ ಪದದಿಂದ ಕುವೆಂಪು ಹೀಗೆ ಚಿತ್ರಿಸಿದ್ದಾರೆ:</p><p>‘ಸದೃಢ ಜಂಘೆಯ ನಡೆಯ ಕಲಿಧನ್ವಿ’ </p>.<p>ರವಶವ</p><p>ರವಶವ (ನಾ). ಶಬ್ದದ ಹೆಣ</p><p>ಸೀತೆಯನ್ನು ರಾವಣನು ಅಪಹರಿಸಿಕೊಂಡು ಹೋದಮೇಲೆ ರಾಮಲಕ್ಷ್ಮಣರು ನಿರಾಶೆಯಿಂದ ಪಂಚವಟಿಯನ್ನು ಬಿಟ್ಟು ಹೋಗುವರು. ನಿಬಿಡ ಕಾಡಿನಲ್ಲಿ ನಡೆಯುವ ರಾಮನಿಗೆ ನೋವು, ಸಂಕಟ, ವ್ಯಸನದಿಂದಾಗಿ ಆ ನಿರ್ಜನ ಮೌನ ವಾತಾವರಣವು ನೇತ್ಯಾತ್ಮಕವಾಗಿ ಕಾಣುತ್ತದೆ. ಅದನ್ನು ಮನಃಶಾಸ್ತ್ರಜ್ಞನಂತೆ ಪರಿಭಾವಿಸಿ ಕುವೆಂಪು ‘ರಣಶವಂ’ ನುಡಿ ರೂಪಿಸಿ ಹೀಗೆ ಬಣ್ಣಿಸಿದ್ದಾರೆ:</p>.<p>‘ಇದು ನಿರ್ಜನತೆಯಲ್ತು:</p><p>ನೈರಾಶ್ಯದಾಕಳಿಕೆ! ಇದು ಮೌನಮಲ್ತಲ್ತು:</p><p>ರವಶವಂ! </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>