<p>ಬಾನ್ಬರೆಪ</p>.<p>ಬಾನ್ಬೆರಪ (ನಾ). (ಆಲಂ). ವಿಧಿಲಿಖಿತ; ದೈವಸಂಕಲ್ಪದ ಲಿಖಿತ.</p>.<p>ದೊರೆ ದಶರಥನು ಗಗನದಲ್ಲಿ ಧೂಮಕೇತುವಿನ ಭಯಂಕರ ಶಕುನವನ್ನು ನೋಡಿದನು. ಅದು ತನ್ನ ಕೊನೆಯ ದೈವಸಂಕಲ್ಪದ ಲಿಖಿತ ಎಂದು ತಿಳಿದನು. ಅದನ್ನು ಕುವೆಂಪು ‘ಬಾನ್ಬರೆಪ’ ನುಡಿಯಿಂದ ಹೀಗೆ ರೇಖಿಸಿದ್ದಾರೆ:</p>.<p>‘ಆ ಭಯಂಕರ ಗಗನಶಕುನಮಂ ನೋಡಿ, ದೊರೆ</p>.<p>ದಶರಥಂ ತನ್ನ ಕೊನೆಗದೆ ಬಾನ್ಬರೆಪಮೆಂದು</p>.<p>ಬಗೆದ’ </p>.<p>ಪಕ್ಕಿದೇರು</p>.<p>ಪಕ್ಕಿದೇರು (ನಾ). ಹಕ್ಕಿ ಆಕಾರದ ತೇರು</p>.<p>ರಾಮ ಲಕ್ಷ್ಮಣ ಸೀತೆಯರನ್ನು ಹೊತ್ತ ಪುಷ್ಪಕ ವಿಮಾನ ಅಯೋಧ್ಯೆಯ ಧರೆಗೆ ಇಳಿಯಿತು. ಅವರನ್ನು ಕಂಡು ಜನರು ಜಯಘೋಷ ಹಾಕಿ ಸಂಭ್ರಮಿಸಿದರು. ಆ ಸಂದರ್ಭದಲ್ಲಿ ಕುವೆಂಪು ಅಚ್ಚರಿಯ ವಿಮಾನವನ್ನು ‘ಪಕ್ಕಿದೇರು’ ಎಂಬ ಪದದಿಂದ ಕರೆದು, ಹೀಗೆ ಜನರ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.</p>.<p>‘ಲೆಕ್ಕಿಪರದಾರ್</p>.<p>ಬೆಕ್ಕಸದ ಪಕ್ಕಿದೇರಂ?’ </p>.<p>ನಿಲ್ಪಡು</p>.<p>ನಿಲ್ಪಡು (ಕ್ರಿ). ಸ್ತಂಭಿತನಾಗು</p>.<p>ಕುವೆಂಪು ಅವರು ಲಂಕೆಯನ್ನು ಪ್ರವೇಶಿಸಿದ ವಾಯುಪುತ್ರನು ಲಂಕಾಲಕ್ಷ್ಮಿಯ ಬಂಗಾರದ ಶಾಂತಿಯ ನಯ, ಸೌಂದರ್ಯ ಸಂಸ್ಕೃತಿ, ಕಲ್ಪನಾ ಕುಶಲತೆಯ ಶಿಲ್ಪವನ್ನು ಮೆಚ್ಚಿ ಸ್ತಂಭಿತನಾದನು ಎಂಬುದನ್ನು ವ್ಯಕ್ತಪಡಿಸುವಾಗ ‘ನಿಲ್ಪಟ್ಟು’ ಪದ ರೂಪಿಸಿ ಹೀಗೆ ಪ್ರಯೋಗಿಸಿದ್ದಾರೆ.</p>.<p>‘ಕಲ್ಪನಾಕುಶಲತೆಯ ಶಿಲ್ಪಕೆ ಮನಂ ಮೆಚ್ಚಿ</p>.<p>ನಿಲ್ಪಟ್ಟು ತಲೆತೊನೆದನು.’ </p>.<p>ಜೇನ್ಸೊಗ</p>.<p>ಜೇನ್ಸೊಗ (ನಾ). ಜೇನಿನಂತೆ ಮಧುರವಾದ ಸುಖ</p>.<p>ಸೀತೆಯು ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಲು ತೀರ್ಥವನ್ನು ಬೊಗಸೆಯಿಂದ ತೆಗೆದುಕೊಳ್ಳುವಳು. ಆಗ ಅವಳಿಗೆ ಒಂದು ಮರದ ಮೇಲೆ ಕುಳಿತು ಹೇಳಿದ</p>.<p>ಆಂಜನೇಯನ ಮಾತುಗಳು ಕರ್ಣಾನಂದವನ್ನುಂಟು ಮಾಡುವವು. ಅವಳಿಗೆ ಉಂಟಾದ ಸುಖದಾನಂದವನ್ನು ಕುವೆಂಪು ‘ಜೇನ್ಸೊಗ’ ನುಡಿಯಿಂದ ಹೀಗೆ</p>.<p>ವರ್ಣಿಸಿದ್ದಾರೆ:</p>.<p>‘ಜನಕಜೆಗೆ</p>.<p>ನಾಳನಾಳದಿ ದುಮುಕುತಿರೆ ಜೇನ್ಸೊಗಂ’ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾನ್ಬರೆಪ</p>.<p>ಬಾನ್ಬೆರಪ (ನಾ). (ಆಲಂ). ವಿಧಿಲಿಖಿತ; ದೈವಸಂಕಲ್ಪದ ಲಿಖಿತ.</p>.<p>ದೊರೆ ದಶರಥನು ಗಗನದಲ್ಲಿ ಧೂಮಕೇತುವಿನ ಭಯಂಕರ ಶಕುನವನ್ನು ನೋಡಿದನು. ಅದು ತನ್ನ ಕೊನೆಯ ದೈವಸಂಕಲ್ಪದ ಲಿಖಿತ ಎಂದು ತಿಳಿದನು. ಅದನ್ನು ಕುವೆಂಪು ‘ಬಾನ್ಬರೆಪ’ ನುಡಿಯಿಂದ ಹೀಗೆ ರೇಖಿಸಿದ್ದಾರೆ:</p>.<p>‘ಆ ಭಯಂಕರ ಗಗನಶಕುನಮಂ ನೋಡಿ, ದೊರೆ</p>.<p>ದಶರಥಂ ತನ್ನ ಕೊನೆಗದೆ ಬಾನ್ಬರೆಪಮೆಂದು</p>.<p>ಬಗೆದ’ </p>.<p>ಪಕ್ಕಿದೇರು</p>.<p>ಪಕ್ಕಿದೇರು (ನಾ). ಹಕ್ಕಿ ಆಕಾರದ ತೇರು</p>.<p>ರಾಮ ಲಕ್ಷ್ಮಣ ಸೀತೆಯರನ್ನು ಹೊತ್ತ ಪುಷ್ಪಕ ವಿಮಾನ ಅಯೋಧ್ಯೆಯ ಧರೆಗೆ ಇಳಿಯಿತು. ಅವರನ್ನು ಕಂಡು ಜನರು ಜಯಘೋಷ ಹಾಕಿ ಸಂಭ್ರಮಿಸಿದರು. ಆ ಸಂದರ್ಭದಲ್ಲಿ ಕುವೆಂಪು ಅಚ್ಚರಿಯ ವಿಮಾನವನ್ನು ‘ಪಕ್ಕಿದೇರು’ ಎಂಬ ಪದದಿಂದ ಕರೆದು, ಹೀಗೆ ಜನರ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.</p>.<p>‘ಲೆಕ್ಕಿಪರದಾರ್</p>.<p>ಬೆಕ್ಕಸದ ಪಕ್ಕಿದೇರಂ?’ </p>.<p>ನಿಲ್ಪಡು</p>.<p>ನಿಲ್ಪಡು (ಕ್ರಿ). ಸ್ತಂಭಿತನಾಗು</p>.<p>ಕುವೆಂಪು ಅವರು ಲಂಕೆಯನ್ನು ಪ್ರವೇಶಿಸಿದ ವಾಯುಪುತ್ರನು ಲಂಕಾಲಕ್ಷ್ಮಿಯ ಬಂಗಾರದ ಶಾಂತಿಯ ನಯ, ಸೌಂದರ್ಯ ಸಂಸ್ಕೃತಿ, ಕಲ್ಪನಾ ಕುಶಲತೆಯ ಶಿಲ್ಪವನ್ನು ಮೆಚ್ಚಿ ಸ್ತಂಭಿತನಾದನು ಎಂಬುದನ್ನು ವ್ಯಕ್ತಪಡಿಸುವಾಗ ‘ನಿಲ್ಪಟ್ಟು’ ಪದ ರೂಪಿಸಿ ಹೀಗೆ ಪ್ರಯೋಗಿಸಿದ್ದಾರೆ.</p>.<p>‘ಕಲ್ಪನಾಕುಶಲತೆಯ ಶಿಲ್ಪಕೆ ಮನಂ ಮೆಚ್ಚಿ</p>.<p>ನಿಲ್ಪಟ್ಟು ತಲೆತೊನೆದನು.’ </p>.<p>ಜೇನ್ಸೊಗ</p>.<p>ಜೇನ್ಸೊಗ (ನಾ). ಜೇನಿನಂತೆ ಮಧುರವಾದ ಸುಖ</p>.<p>ಸೀತೆಯು ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಲು ತೀರ್ಥವನ್ನು ಬೊಗಸೆಯಿಂದ ತೆಗೆದುಕೊಳ್ಳುವಳು. ಆಗ ಅವಳಿಗೆ ಒಂದು ಮರದ ಮೇಲೆ ಕುಳಿತು ಹೇಳಿದ</p>.<p>ಆಂಜನೇಯನ ಮಾತುಗಳು ಕರ್ಣಾನಂದವನ್ನುಂಟು ಮಾಡುವವು. ಅವಳಿಗೆ ಉಂಟಾದ ಸುಖದಾನಂದವನ್ನು ಕುವೆಂಪು ‘ಜೇನ್ಸೊಗ’ ನುಡಿಯಿಂದ ಹೀಗೆ</p>.<p>ವರ್ಣಿಸಿದ್ದಾರೆ:</p>.<p>‘ಜನಕಜೆಗೆ</p>.<p>ನಾಳನಾಳದಿ ದುಮುಕುತಿರೆ ಜೇನ್ಸೊಗಂ’ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>