<p><strong>ಮಾತಿಲಿ</strong></p>.<p>ಮಾತಿಲಿ (ನಾ). ನುಡಿಯದೆ ಸುಮ್ಮನಿರುವ ವ್ಯಕ್ತಿ; ಮೌನಿ</p>.<p>ಬಭ್ರುವಾಹನನು ಧರ್ಮರಾಜನ ಯಜ್ಞ ಕುದುರೆಯ ಪಟ್ಟಲಿಖಿತ ಓದಿ ಉತ್ಸಾಹಗೊಂಡು ಯುದ್ಧ ಮಾಡಲು ನಿಶ್ಚಯಿಸುವನು. ತಾಯಿ ಚಿತ್ರಾಂಗದೆಯ ಬಳಿಗೆ ಬಂದು ರಾಜಕಾರ್ಯವನ್ನು ತಿಳಿಸಿ ಆರ್ಶೀರ್ವಾದವನ್ನು ಬೇಡುವನು. ಆಗಿನ ಅವಳ ಮನಸ್ಥಿತಿಯನ್ನು ಚಿತ್ರಿಸುವಾಗ ಕುವೆಂಪು ಅವರು ‘ಮಾತಿಲಿ’ ಪದವನ್ನು <strong>ಹೀಗೆ ಪ್ರಯೋಗಿಸಿದ್ದಾರೆ:</strong></p>.<p>‘ಹಮ್ಮೈಸಿ ಕುಳಿತಾ ಮಾತೆ</p><p>ಕಂಬನಿಯ ಕರೆದು ಮಾತಿಲಿಯಾಗಿ ರೋದಿಸಿರೆ,</p><p>ಬೆರಗು ಹೊಡೆದಂತಿರ್ದನಾ ಬಭ್ರುವಾಹನಂ.’ </p>.<p><strong>ಕಾವ್ಯಕೈತವ</strong></p>.<p>ಕಾವ್ಯಕೈತವ (ನಾ). ಕಾವ್ಯವಂಚನೆ</p>.<p>ಈ ಪದ ಪಾಶ್ಚಾತ್ಯ ಕಾವ್ಯಮೀಮಾಂಸೆಯಲ್ಲಿ ಬರುವ poetic injustice ಎಂಬ ಪರಿಕಲ್ಪನೆಯಿಂದ ಪ್ರೇರಿತವಾದುದು. ಈ ಪದವನ್ನು ಮೊದಲು ಥಾಮಸ್ ರೈಮರ್ ಎಂಬ ವಿಮರ್ಶಕ ಬಳಸಿದ್ದ. ಕಾವ್ಯ ನಾಟಕಗಳಲ್ಲಿ ಬರುವ ದುರಂತ ಪಾತ್ರಗಳ ಕುರಿತು ಅವನು ‘poetic injustice ’ ಎನ್ನುತ್ತಾನೆ. ಇದನ್ನೆ ಕುವೆಂಪು ಅನುವಾದಿಸಿರಬಹುದು. ಏಕೆಂದರೆ ಮೇಘನಾದನಿಗೆ ರಾಮಾಯಣದಲ್ಲಿ ಮೋಸವಾಗುತ್ತದೆ, ಅನ್ಯಾಯವಾಗುತ್ತದೆ.</p><p>ಕವಿ ಹಿರಣ್ಯಕೇಶಿಯ ಮಾತು ಆದ ನಂತರ ಮೇಘನಾದನು ತನ್ನ ಅಭಿಪ್ರಾಯ ಹೇಳುವನು. ಕುವೆಂಪು ಅವರು ಅವನಾಡುವ ನುಡಿಯಲ್ಲಿ ‘ಕಾವ್ಯಕೈತವ’ ಪದವನ್ನು <strong>ಹೀಗೆ ಪ್ರಯೋಗಿಸಿದ್ದಾರೆ:</strong></p>.<p>‘ಬುದ್ಧಿಯನ್</p><p>ಮಲಗಿಸಲ್ ಮೊದಲು ಜೋಗುಳವುಲಿದು, ತರ್ವಾಯ</p><p>ಭಾವಕೇನೊರೆದಡೇನಹಿತಮಪ್ಪುದೆ? ಕವಿಯ</p><p>ಕಾವ್ಯಕೈತವಮಂತುಟೆ ವಲಂ ಅಬೋಧಪೂರ್ವಂ</p><p>ಹೃದಯ ವಿಜಯಿ!’ </p>.<p><strong>ವಿಪಿನರತಿ</strong></p>.<p>ವಿಪಿನರತಿ (ನಾ). ಕಾಡಿನ ರತಿ</p>.<p>ರಾವಣೇಶ್ವರನು ಯುದ್ಧವನ್ನು ಕುರಿತು ಕರೆದ ಸಭೆಯಲ್ಲಿ ಜನಪ್ರತಿನಿಧಿಯಾದ ಕವಿ ಹಿರಣ್ಯಕೇಶಿ ಲಂಕೆಯ ಪ್ರಾಕೃತಿಕ ಸೊಬಗನ್ನು ವರ್ಣಿಸಿ, ಅದನ್ನು ಯುದ್ಧದಿಂದ ನಾಶಪಡಿಸಬೇಡಿ ಎಂದು ಕೇಳಿಕೊಳ್ಳುವಾಗ ಅಶೋಕಪುಷ್ಪಗಳ ಬಗ್ಗೆ <strong>ಹೀಗೆ ಹೇಳುವನು:</strong></p>.<p>‘ಬೆಂಕಿಯ ಗೊಂಚಲಾಗಿರುವ; ಹೂವಿನ ಓಕುಳಿಯ ಜೀರ್ಕೊವಿ (ಪಿಚಕಾರಿ)ಯಿಂದ ವಿಪಿನ ರತಿಯು ವಸಂತರಾಜ (ಮಧುನೃಪ)ನಿಗೆ ಸಂತೋಷವನ್ನುಂಟು ಮಾಡಲು ರಚಿಸಿದ ಹಾಗಿರುವ ಪುಷ್ಪಗಳನ್ನು ಕಂಡೆ.’</p><p>ಕುವೆಂಪು ಅವರ ಕುಪ್ಪಳಿಯ ಬಳಿ ಸಹಜವಾಗಿ ಬೆಳೆದಿರುವ ಅಶೋಕವನವಿದೆ. ಆ ಕಡುಕೆಂಪು ಅಶೋಕಪುಷ್ಪ ಲಕ್ಷಣ ಅವರ ಬೌದ್ಧಿಕ ಸೌಂದರ್ಯದಲ್ಲಿ ಪ್ರೇಮಕಂಪನ್ನು <strong>ಹೀಗೆ ಹರಿಸಿದೆ:</strong></p>.<p>‘ಕಿಚ್ಚು</p><p>ಕುಚ್ಚಾಯ್ತೊ, ಹೂವಿನೋಕುಳಿಯ ಜೀರ್ಕೋವಿಯಿಂ</p><p>ವಿಪಿನರತಿ ಮಧುನೃಪಂಗೊಸಗೆಯಂ ರಚಿಪೊದು</p><p>ಮಾಳ್ಕೆಯಚ್ಚಾಯ್ತೊ ಎನೆ, ಕಣ್ ಸೋತು ಶರಣಾಗೆ,</p><p>ಪೂತೆಸೆದುವಸುಗೆಗಳ್’ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾತಿಲಿ</strong></p>.<p>ಮಾತಿಲಿ (ನಾ). ನುಡಿಯದೆ ಸುಮ್ಮನಿರುವ ವ್ಯಕ್ತಿ; ಮೌನಿ</p>.<p>ಬಭ್ರುವಾಹನನು ಧರ್ಮರಾಜನ ಯಜ್ಞ ಕುದುರೆಯ ಪಟ್ಟಲಿಖಿತ ಓದಿ ಉತ್ಸಾಹಗೊಂಡು ಯುದ್ಧ ಮಾಡಲು ನಿಶ್ಚಯಿಸುವನು. ತಾಯಿ ಚಿತ್ರಾಂಗದೆಯ ಬಳಿಗೆ ಬಂದು ರಾಜಕಾರ್ಯವನ್ನು ತಿಳಿಸಿ ಆರ್ಶೀರ್ವಾದವನ್ನು ಬೇಡುವನು. ಆಗಿನ ಅವಳ ಮನಸ್ಥಿತಿಯನ್ನು ಚಿತ್ರಿಸುವಾಗ ಕುವೆಂಪು ಅವರು ‘ಮಾತಿಲಿ’ ಪದವನ್ನು <strong>ಹೀಗೆ ಪ್ರಯೋಗಿಸಿದ್ದಾರೆ:</strong></p>.<p>‘ಹಮ್ಮೈಸಿ ಕುಳಿತಾ ಮಾತೆ</p><p>ಕಂಬನಿಯ ಕರೆದು ಮಾತಿಲಿಯಾಗಿ ರೋದಿಸಿರೆ,</p><p>ಬೆರಗು ಹೊಡೆದಂತಿರ್ದನಾ ಬಭ್ರುವಾಹನಂ.’ </p>.<p><strong>ಕಾವ್ಯಕೈತವ</strong></p>.<p>ಕಾವ್ಯಕೈತವ (ನಾ). ಕಾವ್ಯವಂಚನೆ</p>.<p>ಈ ಪದ ಪಾಶ್ಚಾತ್ಯ ಕಾವ್ಯಮೀಮಾಂಸೆಯಲ್ಲಿ ಬರುವ poetic injustice ಎಂಬ ಪರಿಕಲ್ಪನೆಯಿಂದ ಪ್ರೇರಿತವಾದುದು. ಈ ಪದವನ್ನು ಮೊದಲು ಥಾಮಸ್ ರೈಮರ್ ಎಂಬ ವಿಮರ್ಶಕ ಬಳಸಿದ್ದ. ಕಾವ್ಯ ನಾಟಕಗಳಲ್ಲಿ ಬರುವ ದುರಂತ ಪಾತ್ರಗಳ ಕುರಿತು ಅವನು ‘poetic injustice ’ ಎನ್ನುತ್ತಾನೆ. ಇದನ್ನೆ ಕುವೆಂಪು ಅನುವಾದಿಸಿರಬಹುದು. ಏಕೆಂದರೆ ಮೇಘನಾದನಿಗೆ ರಾಮಾಯಣದಲ್ಲಿ ಮೋಸವಾಗುತ್ತದೆ, ಅನ್ಯಾಯವಾಗುತ್ತದೆ.</p><p>ಕವಿ ಹಿರಣ್ಯಕೇಶಿಯ ಮಾತು ಆದ ನಂತರ ಮೇಘನಾದನು ತನ್ನ ಅಭಿಪ್ರಾಯ ಹೇಳುವನು. ಕುವೆಂಪು ಅವರು ಅವನಾಡುವ ನುಡಿಯಲ್ಲಿ ‘ಕಾವ್ಯಕೈತವ’ ಪದವನ್ನು <strong>ಹೀಗೆ ಪ್ರಯೋಗಿಸಿದ್ದಾರೆ:</strong></p>.<p>‘ಬುದ್ಧಿಯನ್</p><p>ಮಲಗಿಸಲ್ ಮೊದಲು ಜೋಗುಳವುಲಿದು, ತರ್ವಾಯ</p><p>ಭಾವಕೇನೊರೆದಡೇನಹಿತಮಪ್ಪುದೆ? ಕವಿಯ</p><p>ಕಾವ್ಯಕೈತವಮಂತುಟೆ ವಲಂ ಅಬೋಧಪೂರ್ವಂ</p><p>ಹೃದಯ ವಿಜಯಿ!’ </p>.<p><strong>ವಿಪಿನರತಿ</strong></p>.<p>ವಿಪಿನರತಿ (ನಾ). ಕಾಡಿನ ರತಿ</p>.<p>ರಾವಣೇಶ್ವರನು ಯುದ್ಧವನ್ನು ಕುರಿತು ಕರೆದ ಸಭೆಯಲ್ಲಿ ಜನಪ್ರತಿನಿಧಿಯಾದ ಕವಿ ಹಿರಣ್ಯಕೇಶಿ ಲಂಕೆಯ ಪ್ರಾಕೃತಿಕ ಸೊಬಗನ್ನು ವರ್ಣಿಸಿ, ಅದನ್ನು ಯುದ್ಧದಿಂದ ನಾಶಪಡಿಸಬೇಡಿ ಎಂದು ಕೇಳಿಕೊಳ್ಳುವಾಗ ಅಶೋಕಪುಷ್ಪಗಳ ಬಗ್ಗೆ <strong>ಹೀಗೆ ಹೇಳುವನು:</strong></p>.<p>‘ಬೆಂಕಿಯ ಗೊಂಚಲಾಗಿರುವ; ಹೂವಿನ ಓಕುಳಿಯ ಜೀರ್ಕೊವಿ (ಪಿಚಕಾರಿ)ಯಿಂದ ವಿಪಿನ ರತಿಯು ವಸಂತರಾಜ (ಮಧುನೃಪ)ನಿಗೆ ಸಂತೋಷವನ್ನುಂಟು ಮಾಡಲು ರಚಿಸಿದ ಹಾಗಿರುವ ಪುಷ್ಪಗಳನ್ನು ಕಂಡೆ.’</p><p>ಕುವೆಂಪು ಅವರ ಕುಪ್ಪಳಿಯ ಬಳಿ ಸಹಜವಾಗಿ ಬೆಳೆದಿರುವ ಅಶೋಕವನವಿದೆ. ಆ ಕಡುಕೆಂಪು ಅಶೋಕಪುಷ್ಪ ಲಕ್ಷಣ ಅವರ ಬೌದ್ಧಿಕ ಸೌಂದರ್ಯದಲ್ಲಿ ಪ್ರೇಮಕಂಪನ್ನು <strong>ಹೀಗೆ ಹರಿಸಿದೆ:</strong></p>.<p>‘ಕಿಚ್ಚು</p><p>ಕುಚ್ಚಾಯ್ತೊ, ಹೂವಿನೋಕುಳಿಯ ಜೀರ್ಕೋವಿಯಿಂ</p><p>ವಿಪಿನರತಿ ಮಧುನೃಪಂಗೊಸಗೆಯಂ ರಚಿಪೊದು</p><p>ಮಾಳ್ಕೆಯಚ್ಚಾಯ್ತೊ ಎನೆ, ಕಣ್ ಸೋತು ಶರಣಾಗೆ,</p><p>ಪೂತೆಸೆದುವಸುಗೆಗಳ್’ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>