<p>ನಾಗಪ್ಪ ಬ್ಲಾಕ್ ಸುರಕ್ಷಾ ಟ್ಯೂಷನ್ ಸೆಂಟರ್ನಲ್ಲಿ ಇತ್ತೀಚೆಗೆ ನಡೆದ ಇಂಚರ-2 ಕಾರ್ಯಕ್ರಮದಲ್ಲಿ ಭಕ್ತಿಗೀತೆ, ದೇಶಭಕ್ತಿಗೀತೆ, ಭಾವಗೀತೆಗಳ ಗಾಯನ ಪ್ರೇಕ್ಷಕರನ್ನು ಮುದಗೊಳಿಸಿತು.<br /> <br /> ಗಣೇಶನಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸುರಕ್ಷಾ ಮತ್ತು ವೀಕ್ಷಾ ಅವರು ಹಾಡಿದ `ಶರಣು ಹೇಳಿವ್ರಿ ಸ್ವಾಮಿ ನಾವು ನಿಮಗಾ~ ಎಂಬ ರಂಗ ಗೀತೆ, `ಐಕ್ಯವೊಂದೇ ಮಂತ್ರ ಐಕ್ಯವೇ ಸ್ವಾತಂತ್ರ್ಯ~ ದೇಶಭಕ್ತಿ ಗೀತೆ ಶ್ರೋತೃ ವರ್ಗವನ್ನು ಸಂಗೀತದ ಲೋಕಕ್ಕೆ ಕರೆದೊಯ್ದಿತ್ತು.<br /> <br /> ಸುರಕ್ಷಾ ಹಾಡಿದ ಕೆ.ಎಸ್. ನರಸಿಂಹಸ್ವಾಮಿ ಅವರ ಭಾವಗೀತೆ ಮತ್ತು ಜಾನಪದ ಗೀತೆಗಳು ಇಂಪಾಗಿದ್ದವು. ಹಿರಿಯ ಗಾಯಕ ಪಾರ್ವತೀಸುತ ಅವರ ಗಾಯನ ಕಾರ್ಯಕ್ರಮದ ಮತ್ತೊಂದು ಆಕರ್ಷಣೆಯಾಗಿತ್ತು. <br /> <br /> ಎಸ್. ಅಭಿಜಿತ್ ಹಾರ್ಮೋನಿಯಂ, ಎ.ಎನ್. ಗುರುನಂದನ್ ತಬಲಾ, ರವಿ ವಿಶೇಷ ಲಯವಾದ್ಯದಲ್ಲಿ ಸಹಕರಿಸಿದರು. ಸಂಸ್ಕೃತ ವಿದ್ವಾಂಸ ಪಾರ್ಥಸಾರಥಿ,ಪ್ರಾಂಶುಪಾಲ ಬಿ.ಪಿ. ಚಂದ್ರಶೇಖರ್, ಸಂಸ್ಥೆಯ ಪೋಷಕ ದಿನೇಶ್ರಾವ್, ಸ್ಥಾಪಕಿ ಗಾಯತ್ರಿ ಕೇಶವ್, ಮಹೇಶ್, ಆರತಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾಗಪ್ಪ ಬ್ಲಾಕ್ ಸುರಕ್ಷಾ ಟ್ಯೂಷನ್ ಸೆಂಟರ್ನಲ್ಲಿ ಇತ್ತೀಚೆಗೆ ನಡೆದ ಇಂಚರ-2 ಕಾರ್ಯಕ್ರಮದಲ್ಲಿ ಭಕ್ತಿಗೀತೆ, ದೇಶಭಕ್ತಿಗೀತೆ, ಭಾವಗೀತೆಗಳ ಗಾಯನ ಪ್ರೇಕ್ಷಕರನ್ನು ಮುದಗೊಳಿಸಿತು.<br /> <br /> ಗಣೇಶನಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸುರಕ್ಷಾ ಮತ್ತು ವೀಕ್ಷಾ ಅವರು ಹಾಡಿದ `ಶರಣು ಹೇಳಿವ್ರಿ ಸ್ವಾಮಿ ನಾವು ನಿಮಗಾ~ ಎಂಬ ರಂಗ ಗೀತೆ, `ಐಕ್ಯವೊಂದೇ ಮಂತ್ರ ಐಕ್ಯವೇ ಸ್ವಾತಂತ್ರ್ಯ~ ದೇಶಭಕ್ತಿ ಗೀತೆ ಶ್ರೋತೃ ವರ್ಗವನ್ನು ಸಂಗೀತದ ಲೋಕಕ್ಕೆ ಕರೆದೊಯ್ದಿತ್ತು.<br /> <br /> ಸುರಕ್ಷಾ ಹಾಡಿದ ಕೆ.ಎಸ್. ನರಸಿಂಹಸ್ವಾಮಿ ಅವರ ಭಾವಗೀತೆ ಮತ್ತು ಜಾನಪದ ಗೀತೆಗಳು ಇಂಪಾಗಿದ್ದವು. ಹಿರಿಯ ಗಾಯಕ ಪಾರ್ವತೀಸುತ ಅವರ ಗಾಯನ ಕಾರ್ಯಕ್ರಮದ ಮತ್ತೊಂದು ಆಕರ್ಷಣೆಯಾಗಿತ್ತು. <br /> <br /> ಎಸ್. ಅಭಿಜಿತ್ ಹಾರ್ಮೋನಿಯಂ, ಎ.ಎನ್. ಗುರುನಂದನ್ ತಬಲಾ, ರವಿ ವಿಶೇಷ ಲಯವಾದ್ಯದಲ್ಲಿ ಸಹಕರಿಸಿದರು. ಸಂಸ್ಕೃತ ವಿದ್ವಾಂಸ ಪಾರ್ಥಸಾರಥಿ,ಪ್ರಾಂಶುಪಾಲ ಬಿ.ಪಿ. ಚಂದ್ರಶೇಖರ್, ಸಂಸ್ಥೆಯ ಪೋಷಕ ದಿನೇಶ್ರಾವ್, ಸ್ಥಾಪಕಿ ಗಾಯತ್ರಿ ಕೇಶವ್, ಮಹೇಶ್, ಆರತಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>