<p>ಮಲೆನಾಡಿನ ವಿಶಿಷ್ಟ ರುಚಿಯ ಬಗೆಬಗೆ ಹಪ್ಪಳ, ಉಪ್ಪಿನಕಾಯಿ, ಚೆನ್ನಪಟ್ಟಣದ ಗೊಂಬೆಗಳು, ಲಾವಂಚ ಬೇರಿನ ಗೃಹಾಲಂಕಾರಿಕ ವಸ್ತುಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಕರಕುಶಲಕರ್ಮಿಗಳು ತಯಾರಿಸಿದ ಕಲಾಕೃತಿಗಳನ್ನು ಒಂದೇ ಸೂರಿನಡಿ ಒದಗಿಸುತ್ತಿದೆ `ಗ್ರಾಮೀಣ ಅಂಗಡಿ~ ಆಯೋಜಿಸಿದ ಕರಕುಶಲ ಮೇಳ.</p>.<p>ಗ್ರಾಮೀಣ ಭಾಗದ ಮಹಿಳೆಯರು ಮಳೆಗಾಲ ಆರಂಭವಾಗುತ್ತಿದ್ದಂತೆ ಊಟದ ಜೊತೆಗೆ ಬೇಕಾಗುವ ಹಪ್ಪಳ, ಉಪ್ಪಿನಕಾಯಿ, ಕುರುಕಲು ತಿಂಡಿಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಆದರೆ ನಗರದ ಮಂದಿ ಶಾಪಿಂಗ್ ಮಾಲ್ಗಳಿಗೋ, ಅಂಗಡಿಗಳಿಗೋ ಹೋಗಿ ಹೆಚ್ಚು ಹಣ ಕೊಟ್ಟು ತರುತ್ತಾರೆ. ಈ ತೊಂದರೆ ತಪ್ಪಿಸುವುದೇ `ಗ್ರಾಮೀಣ ಅಂಗಡಿ~ ಉದ್ದೇಶ ಎನ್ನುತ್ತಾರೆ ಇದರ ಸಂಘಟಕ ಬಿ.ರಾಜಶೇಖರಮೂರ್ತಿ.</p>.<p>ಇಲ್ಲಿ ಬಿದಿರಿನ ಬೊಂಬಿನ ಮೇಲೆ ಹಸೆಕಲೆ, ಚಿತ್ತಾರಗಳ ಹೂದಾನಿ, ಫ್ಯಾನ್ಸಿ ಆಭರಣಗಳು, ಗದಗ, ಉಡುಪಿ, ಇಳಕಲ್ ಹಾಗೂ ಧಾರವಾಡದ ಹತ್ತಿ ಸೀರೆಗಳು , ರಾಜ್ಯದ ನಾನಾ ಜಿಲ್ಲೆಗಳ ಗುಡಿಕೈಗಾರಿಕೆಗಳ ವಿಶೇಷ ಉತ್ಪನ್ನಗಳು ಕಣ್ಮನ ಸೆಳೆಯುತ್ತಿವೆ.</p>.<p>ಸುಟ್ಟಾವೆ ಮಣ್ಣಿನಿಂದ ಸಿದ್ಧಪಡಿಸಿದ ದೇವರ ಮೂರ್ತಿಗಳು, ದೀಪ, ಗೋಡೆಗೆ ನೇತು ಹಾಕುವ ಅಲಂಕಾರಿಕ ವಸ್ತುಗಳು ಗ್ರಾಮೀಣ ಸೊಗಡನ್ನು ನೆನಪಿಸುತ್ತವೆ. ಕುಶಲಕರ್ಮಿಗಳಿಂದ ನೇರವಾಗಿ ಗ್ರಾಹಕರಿಗೆ ವಸ್ತುಗಳು ದೊರೆಯುವುದರಿಂದ ಬೆಲೆ ಕೂಡ ತೀರಾ ದುಬಾರಿಯಾಗೇನಿಲ್ಲ.</p>.<p>ಶಿಲ್ಪಕಲಾ ಅಕಾಡೆಮಿ ಮತ್ತು ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಪ್ರಶಸ್ತಿ ವಿಜೇತ ಖ್ಯಾತ ಕಲಾವಿದರು ಚಿತ್ರಿಸಿರುವ ಬೇಲೂರು, ಹಳೆಬೀಡಿನ ಹೊಯ್ಸಳ ಶಿಲ್ಪಕಲೆ ಹಾಗೂ ಸಮಕಾಲೀನ ಚಿತ್ರಕಲೆಗಳ ಪ್ರದರ್ಶನ ಇಲ್ಲಿನ ಇನ್ನೊಂದು ವಿಶೇಷ. ಇದು ಹೊಯ್ಸಳ ಕಾಲದ ಸಾಂಸ್ಕೃತಿಕ ವೈಭವವನ್ನು ನೆನಪಿಸುತ್ತದೆ.</p>.<p><strong>ಸ್ಥಳ:</strong> `ಗ್ರಾಮೀಣ ಅಂಗಡಿ, ಶಾಲಿನಿ ಮೈದಾನ ಎದುರು, ಜಯನಗರ ಟಿ ಬ್ಲಾಕ್. ಬೆಳಿಗ್ಗೆ10ರಿಂದ ರಾತ್ರಿ 9. ಮೇಳ ಭಾನುವಾರ ಮುಕ್ತಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಲೆನಾಡಿನ ವಿಶಿಷ್ಟ ರುಚಿಯ ಬಗೆಬಗೆ ಹಪ್ಪಳ, ಉಪ್ಪಿನಕಾಯಿ, ಚೆನ್ನಪಟ್ಟಣದ ಗೊಂಬೆಗಳು, ಲಾವಂಚ ಬೇರಿನ ಗೃಹಾಲಂಕಾರಿಕ ವಸ್ತುಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಕರಕುಶಲಕರ್ಮಿಗಳು ತಯಾರಿಸಿದ ಕಲಾಕೃತಿಗಳನ್ನು ಒಂದೇ ಸೂರಿನಡಿ ಒದಗಿಸುತ್ತಿದೆ `ಗ್ರಾಮೀಣ ಅಂಗಡಿ~ ಆಯೋಜಿಸಿದ ಕರಕುಶಲ ಮೇಳ.</p>.<p>ಗ್ರಾಮೀಣ ಭಾಗದ ಮಹಿಳೆಯರು ಮಳೆಗಾಲ ಆರಂಭವಾಗುತ್ತಿದ್ದಂತೆ ಊಟದ ಜೊತೆಗೆ ಬೇಕಾಗುವ ಹಪ್ಪಳ, ಉಪ್ಪಿನಕಾಯಿ, ಕುರುಕಲು ತಿಂಡಿಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಆದರೆ ನಗರದ ಮಂದಿ ಶಾಪಿಂಗ್ ಮಾಲ್ಗಳಿಗೋ, ಅಂಗಡಿಗಳಿಗೋ ಹೋಗಿ ಹೆಚ್ಚು ಹಣ ಕೊಟ್ಟು ತರುತ್ತಾರೆ. ಈ ತೊಂದರೆ ತಪ್ಪಿಸುವುದೇ `ಗ್ರಾಮೀಣ ಅಂಗಡಿ~ ಉದ್ದೇಶ ಎನ್ನುತ್ತಾರೆ ಇದರ ಸಂಘಟಕ ಬಿ.ರಾಜಶೇಖರಮೂರ್ತಿ.</p>.<p>ಇಲ್ಲಿ ಬಿದಿರಿನ ಬೊಂಬಿನ ಮೇಲೆ ಹಸೆಕಲೆ, ಚಿತ್ತಾರಗಳ ಹೂದಾನಿ, ಫ್ಯಾನ್ಸಿ ಆಭರಣಗಳು, ಗದಗ, ಉಡುಪಿ, ಇಳಕಲ್ ಹಾಗೂ ಧಾರವಾಡದ ಹತ್ತಿ ಸೀರೆಗಳು , ರಾಜ್ಯದ ನಾನಾ ಜಿಲ್ಲೆಗಳ ಗುಡಿಕೈಗಾರಿಕೆಗಳ ವಿಶೇಷ ಉತ್ಪನ್ನಗಳು ಕಣ್ಮನ ಸೆಳೆಯುತ್ತಿವೆ.</p>.<p>ಸುಟ್ಟಾವೆ ಮಣ್ಣಿನಿಂದ ಸಿದ್ಧಪಡಿಸಿದ ದೇವರ ಮೂರ್ತಿಗಳು, ದೀಪ, ಗೋಡೆಗೆ ನೇತು ಹಾಕುವ ಅಲಂಕಾರಿಕ ವಸ್ತುಗಳು ಗ್ರಾಮೀಣ ಸೊಗಡನ್ನು ನೆನಪಿಸುತ್ತವೆ. ಕುಶಲಕರ್ಮಿಗಳಿಂದ ನೇರವಾಗಿ ಗ್ರಾಹಕರಿಗೆ ವಸ್ತುಗಳು ದೊರೆಯುವುದರಿಂದ ಬೆಲೆ ಕೂಡ ತೀರಾ ದುಬಾರಿಯಾಗೇನಿಲ್ಲ.</p>.<p>ಶಿಲ್ಪಕಲಾ ಅಕಾಡೆಮಿ ಮತ್ತು ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಪ್ರಶಸ್ತಿ ವಿಜೇತ ಖ್ಯಾತ ಕಲಾವಿದರು ಚಿತ್ರಿಸಿರುವ ಬೇಲೂರು, ಹಳೆಬೀಡಿನ ಹೊಯ್ಸಳ ಶಿಲ್ಪಕಲೆ ಹಾಗೂ ಸಮಕಾಲೀನ ಚಿತ್ರಕಲೆಗಳ ಪ್ರದರ್ಶನ ಇಲ್ಲಿನ ಇನ್ನೊಂದು ವಿಶೇಷ. ಇದು ಹೊಯ್ಸಳ ಕಾಲದ ಸಾಂಸ್ಕೃತಿಕ ವೈಭವವನ್ನು ನೆನಪಿಸುತ್ತದೆ.</p>.<p><strong>ಸ್ಥಳ:</strong> `ಗ್ರಾಮೀಣ ಅಂಗಡಿ, ಶಾಲಿನಿ ಮೈದಾನ ಎದುರು, ಜಯನಗರ ಟಿ ಬ್ಲಾಕ್. ಬೆಳಿಗ್ಗೆ10ರಿಂದ ರಾತ್ರಿ 9. ಮೇಳ ಭಾನುವಾರ ಮುಕ್ತಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>