<p><strong>ಸಿಂಗಾರಸೊಗ</strong></p>.<p>ಸಿಂಗಾರಸೊಗ (ನಾ). ಪ್ರಣಯದ ಸುಖ</p>.<p>ಕುವೆಂಪು ಅವರು ಪರಸ್ಪರ ಒಲಿದು ಕೂಡಿದ ನಲ್ಲ ನಲ್ಲೆಯರ ಪ್ರಣಯದ ಸುಖವನ್ನು ‘ಸಿಂಗಾರಸೊಗ’ ಪದದಿಂದ ಹೀಗೆ ಶೃಂಗರಿಸಿದ್ದಾರೆ:</p>.<p>‘ಪೆಣ್ಣೊಲಿದ ನಲ್ಲನಿರೆ, ಗಂಡೊಲಿದ ನಲ್ಲೆಯಿರೆ,</p>.<p>ಸಿರಿಬಾಳ್ತೆ ಸಿಂಗಾರ ಸೊಗಕೆ ಹೊಯಿಕೈಯಿಹುದೆ ಪೇಳ್</p>.<p>ಬದುಕಿನಲಿ?’ </p>.<p>ವ್ಯಥೆತಿಮಿರ</p>.<p>ವ್ಯಥೆತಿಮಿರ (ನಾ). ಯಾತನೆಯ ಅಂಧಕಾರ</p>.<p>ಶತ್ರುಘ್ನನೊಡನೆ ಅಯೋಧ್ಯೆಗೆ ಬಂದ ಭರತನು ತಾಯಿ ಕೈಕೆಯನ್ನು ನೋಡುತ್ತಾನೆ. ಅವಳಿದ್ದ ಸ್ಥಿತಿಯನ್ನು ಕುವೆಂಪು ಅವರು ವ್ಯಥೆತಿಮಿರ ಪರಿವೃತೆಯೆಂದು ಚಿತ್ರಿಸಿದ್ದಾರೆ. ಅದು ಅವಳ ನೋವು ಬಾಧೆಗಳೊಡನೆ ದುಃಖದಿಂದೊಡಗೂಡಿದ ಕತ್ತಲೆಯಿಂದ ಸುತ್ತುವರಿದಂತಿದ್ದುದನ್ನು ಸಮರ್ಥವಾಗಿ ಧ್ವನಿಸಿದೆ.</p>.<p>‘ವ್ಯಥೆತಿಮಿರ ಪರಿವೃತೆಯನಳ್ಕಜದಿನೀಕ್ಷಿಸುತೆ</p>.<p>ಬೆದರದೆಯೆ ಕಂದನಮ್ಮನ ಕಾಲ ಮೇಲುರುಳಿದನ್. </p>.<p>ಚೈತನ್ಯಧುನಿ</p>.<p>ಚೈತನ್ಯಧುನಿ (ನಾ). ಜೀವಂತಿಕೆಯ ಹೊಳೆ</p>.<p>ಚೈತ್ರೋದಯದ ಕಾಡಿನ ಹೃದಯದಲ್ಲಿ ಮಾಧುರ್ಯದ ಹೊಳೆ ಹರಿಯುತ್ತ ಇಡೀ ಲೋಕದ ಸಸ್ಯ ಹಾಗೂ ಜೀವಸಂಕುಲಕ್ಕೆ ಜೀವ ನೀಡಿ ಪೋಷಿಸುತ್ತದೆ. ಕುವೆಂಪು ಅವರು ಆ ನದಿಯನ್ನು ‘ಚೈತನ್ಯಧುನಿ’ ಎಂದು ಕರೆದಿದ್ದಾರೆ. ‘ನೀರು’ ಪದದ ಇನ್ನೊಂದು ಅರ್ಥ ‘ಜೀವನ’. ಅದನ್ನು ಅವರು ಹೀಗೆ ಚಿತ್ರಿಸಿದ್ದಾರೆ.</p>.<p>‘ಚೈತ್ರೋದಯದ ವಿಪಿನ ಹೃದಯದೊಳ್ ಚೈತನ್ಯ</p>.<p>ಧುನಿಯಾಗಿ ಬೇರು ಬೇರುಗಳಲ್ಲಿ ಕೊಂಬೆಯಲಿ,</p>.<p>ಪರ್ಣ ಪರ್ಣಾಂತರಂಗದಿ, ಮುದ್ದು ಮೊಗ್ಗಿನಲಿ</p>.<p>ಸೌಂದರ್ಯಮೆ ಶರೀರಮಂ ತಾಳ್ದು’</p>.<p>ದನಿಹನಿ</p>.<p>ರಾಮಸೀತೆಯರು ಪಂಚವಟಿಯಲ್ಲಿ ಅಯೋಧ್ಯೆಯನ್ನು ನೆನಪಿಸಿಕೊಳ್ಳುತ್ತ ಸಂಭಾಷಿಸುವರು. ಅವರು ಕೇಳುವ ಕ್ರೌಂಚಪಕ್ಷಿಯ ಇಂಪಾದ ಇಂಚರವನ್ನು ಕುರಿತು ರಾಮ ಹೇಳುವಾಗ, ಅದನ್ನು ಕುವೆಂಪು ಅವರು ‘ನ’ ಕಾರದ ಒಳಪ್ರಾಸದ ‘ದನಿಹನಿ’ ಪದದಿಂದ ಬಣ್ಣಿಸಿರುವರು.</p>.<p>‘ಆಹಾ!</p>.<p>ನಮ್ಮರಮನೆಯ ತೋಂಟದೊಳ್ ಕುಳಿತು ನಲಿವಂದು</p>.<p>ಈ ತೆರನ ದನಿಹನಿಯ ಸೋನೆಗಿಂತುಟೆವಲಂ</p>.<p>ಕಿವಿ ತಣಿದೆವಲ್ತೆ?’</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂಗಾರಸೊಗ</strong></p>.<p>ಸಿಂಗಾರಸೊಗ (ನಾ). ಪ್ರಣಯದ ಸುಖ</p>.<p>ಕುವೆಂಪು ಅವರು ಪರಸ್ಪರ ಒಲಿದು ಕೂಡಿದ ನಲ್ಲ ನಲ್ಲೆಯರ ಪ್ರಣಯದ ಸುಖವನ್ನು ‘ಸಿಂಗಾರಸೊಗ’ ಪದದಿಂದ ಹೀಗೆ ಶೃಂಗರಿಸಿದ್ದಾರೆ:</p>.<p>‘ಪೆಣ್ಣೊಲಿದ ನಲ್ಲನಿರೆ, ಗಂಡೊಲಿದ ನಲ್ಲೆಯಿರೆ,</p>.<p>ಸಿರಿಬಾಳ್ತೆ ಸಿಂಗಾರ ಸೊಗಕೆ ಹೊಯಿಕೈಯಿಹುದೆ ಪೇಳ್</p>.<p>ಬದುಕಿನಲಿ?’ </p>.<p>ವ್ಯಥೆತಿಮಿರ</p>.<p>ವ್ಯಥೆತಿಮಿರ (ನಾ). ಯಾತನೆಯ ಅಂಧಕಾರ</p>.<p>ಶತ್ರುಘ್ನನೊಡನೆ ಅಯೋಧ್ಯೆಗೆ ಬಂದ ಭರತನು ತಾಯಿ ಕೈಕೆಯನ್ನು ನೋಡುತ್ತಾನೆ. ಅವಳಿದ್ದ ಸ್ಥಿತಿಯನ್ನು ಕುವೆಂಪು ಅವರು ವ್ಯಥೆತಿಮಿರ ಪರಿವೃತೆಯೆಂದು ಚಿತ್ರಿಸಿದ್ದಾರೆ. ಅದು ಅವಳ ನೋವು ಬಾಧೆಗಳೊಡನೆ ದುಃಖದಿಂದೊಡಗೂಡಿದ ಕತ್ತಲೆಯಿಂದ ಸುತ್ತುವರಿದಂತಿದ್ದುದನ್ನು ಸಮರ್ಥವಾಗಿ ಧ್ವನಿಸಿದೆ.</p>.<p>‘ವ್ಯಥೆತಿಮಿರ ಪರಿವೃತೆಯನಳ್ಕಜದಿನೀಕ್ಷಿಸುತೆ</p>.<p>ಬೆದರದೆಯೆ ಕಂದನಮ್ಮನ ಕಾಲ ಮೇಲುರುಳಿದನ್. </p>.<p>ಚೈತನ್ಯಧುನಿ</p>.<p>ಚೈತನ್ಯಧುನಿ (ನಾ). ಜೀವಂತಿಕೆಯ ಹೊಳೆ</p>.<p>ಚೈತ್ರೋದಯದ ಕಾಡಿನ ಹೃದಯದಲ್ಲಿ ಮಾಧುರ್ಯದ ಹೊಳೆ ಹರಿಯುತ್ತ ಇಡೀ ಲೋಕದ ಸಸ್ಯ ಹಾಗೂ ಜೀವಸಂಕುಲಕ್ಕೆ ಜೀವ ನೀಡಿ ಪೋಷಿಸುತ್ತದೆ. ಕುವೆಂಪು ಅವರು ಆ ನದಿಯನ್ನು ‘ಚೈತನ್ಯಧುನಿ’ ಎಂದು ಕರೆದಿದ್ದಾರೆ. ‘ನೀರು’ ಪದದ ಇನ್ನೊಂದು ಅರ್ಥ ‘ಜೀವನ’. ಅದನ್ನು ಅವರು ಹೀಗೆ ಚಿತ್ರಿಸಿದ್ದಾರೆ.</p>.<p>‘ಚೈತ್ರೋದಯದ ವಿಪಿನ ಹೃದಯದೊಳ್ ಚೈತನ್ಯ</p>.<p>ಧುನಿಯಾಗಿ ಬೇರು ಬೇರುಗಳಲ್ಲಿ ಕೊಂಬೆಯಲಿ,</p>.<p>ಪರ್ಣ ಪರ್ಣಾಂತರಂಗದಿ, ಮುದ್ದು ಮೊಗ್ಗಿನಲಿ</p>.<p>ಸೌಂದರ್ಯಮೆ ಶರೀರಮಂ ತಾಳ್ದು’</p>.<p>ದನಿಹನಿ</p>.<p>ರಾಮಸೀತೆಯರು ಪಂಚವಟಿಯಲ್ಲಿ ಅಯೋಧ್ಯೆಯನ್ನು ನೆನಪಿಸಿಕೊಳ್ಳುತ್ತ ಸಂಭಾಷಿಸುವರು. ಅವರು ಕೇಳುವ ಕ್ರೌಂಚಪಕ್ಷಿಯ ಇಂಪಾದ ಇಂಚರವನ್ನು ಕುರಿತು ರಾಮ ಹೇಳುವಾಗ, ಅದನ್ನು ಕುವೆಂಪು ಅವರು ‘ನ’ ಕಾರದ ಒಳಪ್ರಾಸದ ‘ದನಿಹನಿ’ ಪದದಿಂದ ಬಣ್ಣಿಸಿರುವರು.</p>.<p>‘ಆಹಾ!</p>.<p>ನಮ್ಮರಮನೆಯ ತೋಂಟದೊಳ್ ಕುಳಿತು ನಲಿವಂದು</p>.<p>ಈ ತೆರನ ದನಿಹನಿಯ ಸೋನೆಗಿಂತುಟೆವಲಂ</p>.<p>ಕಿವಿ ತಣಿದೆವಲ್ತೆ?’</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>