ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುವೆಂಪು ಪದ ಸೃಷ್ಟಿ: ಬಾಳ್ಗನಸು

Published 2 ಮಾರ್ಚ್ 2024, 23:53 IST
Last Updated 2 ಮಾರ್ಚ್ 2024, 23:53 IST
ಅಕ್ಷರ ಗಾತ್ರ


ಬಾಳ್ಗನಸು

ಬಾಳ್ಗನಸು (ನಾ). (ಆಲಂ) ಜೀವನದಲ್ಲಿ ಒಳ್ಳೆಯದನ್ನು ಬಯಸಿ ಕಲ್ಪಿಸಿಕೊಂಡಿರುವ ಬದುಕಿನ ಭವಿಷ್ಯ.

(ಬಾಳ್ + ಕನಸು)

ಭರತನು ಮಾವನ ಮನೆಯಿಂದ ಹಿಂತಿರುಗಿ ಬರುವಷ್ಟರಲ್ಲಿ ತಂದೆ ದಶರಥನು ಮೃತನಾಗಿರುತ್ತಾನೆ. ತಂದೆಯ ಉಬ್ಬಿದ ಮೈಯನ್ನು ಎಳ್ಳಿನ ಎಣ್ಣೆಯ ಬಾನಿಯಿಂದ ತೆಗೆಯುವುದನ್ನು ನೋಡಿ ಅವನ ಮನ ಅಳುಕುತ್ತದೆ. ಅವನ ಮನದ ಭಾವವನ್ನು ಚಿತ್ರಿಸಿರುವ ಕವಿಯು – ಜೀವನದಲ್ಲಿ ಒಳ್ಳೆಯದನ್ನು ಬಯಸಿ ಕಲ್ಪಿಸಿಕೊಂಡಿರುವ ಬದುಕಿನ ಭವಿಷ್ಯವನ್ನು ಕಾವ್ಯಾಲಂಕಾರ ನುಡಿ ‘ಬಾಳ್ಗನಸು’ ರೂಪಿಸಿ - ಬದುಕಿನ ಜೀವದ್ರವ್ಯವನ್ನು ಕುಲುಕಾಡಿಸಿದ್ದಾರೆ.

ಭರತನಿಗೆ ಸಂತೋಷನಂದನ ಕಲ್ಪತರುವಿನಿಂದ ಜೋಲುವ ವಾತ್ಸಲ್ಯ ಭಾವದ ಹೆಜ್ಜೇನು ಹುಟ್ಟಿಯಂತೆ ಸುಖವಾಗಿದ್ದವನು ತಂದೆ ದಶರಥ. ಅವನು ಇಂದು ಚಟ್ಟದ ಕೆಟ್ಟಾಸೆ ಬೀಡಿನಲ್ಲಿದ್ದಾನೆ. ಅದು ಭರತನಿಗೆ ತನ್ನ ‘ಬಾಳ್ಗನಸು’ಗಳಿಗೆಲ್ಲ ಕೊನೆಯ ಸುಡುಗಾಡಿನಂತೆ ಕಾಣುತ್ತಿದೆ. ಹಾಗಿರುವಾಗ ಆ ಬಾಲಋಷಿ ಭರತನು ಆ ಶವದಲ್ಲಿ ಪಿತೃದೇವನನ್ನು ಕಾಣಲು ಸಾಧ್ಯವೆ?


ಸಂತೋಷನಂದನದ ಕಲ್ಪತರುವಿಂ ಜೋಲ್ವ

ವಾತ್ಸಲ್ಯ ಭಾವದಾ ಹೆಜ್ಜೇನು ಹುಟ್ಟಿಯೋಲ್

ಸುಖದ ಮಾರ್ಗಿದತ್ತೊ ತಾನದೆ ಇಂದು ಸೂಡಿನೊಲ್,

ಕೆಟ್ಟಾಸೆ ಬೀಡಿನೊಲ್, ಬಾಳ್‍ಗನಸುಗಳಿಗೆಲ್ಲ

ಕೊನೆಯ ಸುಡುಗಾಡಿನೊಲ್ ಕಾಣುತಿರೆ, ಬಾಲಋಷಿ

ಭರತನಾ ಶವದೊಳರಸುವನೆ ಪಿತೃದೇವನಂ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT