ಭರತನು ಮಾವನ ಮನೆಯಿಂದ ಹಿಂತಿರುಗಿ ಬರುವಷ್ಟರಲ್ಲಿ ತಂದೆ ದಶರಥನು ಮೃತನಾಗಿರುತ್ತಾನೆ. ತಂದೆಯ ಉಬ್ಬಿದ ಮೈಯನ್ನು ಎಳ್ಳಿನ ಎಣ್ಣೆಯ ಬಾನಿಯಿಂದ ತೆಗೆಯುವುದನ್ನು ನೋಡಿ ಅವನ ಮನ ಅಳುಕುತ್ತದೆ. ಅವನ ಮನದ ಭಾವವನ್ನು ಚಿತ್ರಿಸಿರುವ ಕವಿಯು – ಜೀವನದಲ್ಲಿ ಒಳ್ಳೆಯದನ್ನು ಬಯಸಿ ಕಲ್ಪಿಸಿಕೊಂಡಿರುವ ಬದುಕಿನ ಭವಿಷ್ಯವನ್ನು ಕಾವ್ಯಾಲಂಕಾರ ನುಡಿ ‘ಬಾಳ್ಗನಸು’ ರೂಪಿಸಿ - ಬದುಕಿನ ಜೀವದ್ರವ್ಯವನ್ನು ಕುಲುಕಾಡಿಸಿದ್ದಾರೆ.