ಕುವೆಂಪು ಅವರು ತನ್ನ ತಂದೆ ತಾಯಿ ತೀರಿಹೋಗಿ, ಇಬ್ಬರು ತಂಗಿಯರು ಮರಣಹೊಂದಿ ತಾವೊಬ್ಬರೆ ಆಗಿ ಉಳಿದಿರುವುದನ್ನು ನೆನೆದು ನೊಂದಾಗ ಬರೆದ ಕವನ ‘ಬಂಧುಲೂನ’. ಅವರು ತಾನು ಏಕಾಂಗಿಯಾಗಿ ದುಃಖದೀನ, ಶೋಕಲೀನ, ಹೃದಯಹೀನ, ಬಂಧುಲೂನ ಆಗಿರುವುದಕ್ಕೆ ವ್ಯಥೆಪಟ್ಟಿದ್ದಾರೆ. ತನ್ನನ್ನು ಕರುಣೆಯಿಂದ ಆಶೀರ್ವದಿಸಿ ಎಂದು ಕ್ರಮವಾಗಿ ತಂದೆ ದಾಶರಥಿ, ತಾಯಿ ಮೈಥಿಲಿ, ವೀರ ಮಾರುತಿ ಮತ್ತು ಧೀರ ಸೌಮಿತ್ರಿಯನ್ನು ಪ್ರಾರ್ಥಿಸಿದ್ದಾರೆ. ಹೀಗೆ ಪ್ರಾರ್ಥಿಸುವಾಗ ವಿಶಿಷ್ಟ ಪದ ‘ಬಂಧುಲೂನ’ ಸೃಷ್ಟಿಸಿ ಬಂಧುಗಳಿಂದ ತುಂಡರಿಸಿದವನು ತಾನು ಎಂದು ವ್ಯಥೆಪಟ್ಟಿದ್ದಾರೆ.