<p><strong>ನೀರ್ಮಸಣ</strong></p>.<p>ನೀರ್ಮಸಣ (ನಾ). ನೀರು ಶ್ಮಶಾನ</p><p>ಮೇಘನಾದನ ಮಾತಿನಲ್ಲಿ ಕುವೆಂಪು ಅವರು ‘ನೀರ್ಮಸಣ’ ಪದ ಬಳಸಿ, ಅವನ ಸಾಹಸದ ಉದ್ಗಾರವನ್ನು ಹೀಗೆ ಅಭಿವ್ಯಕ್ತಿಸಿದ್ದಾರೆ.</p>.<p>‘ಕಡಲ್</p><p>ನೀರ್ಮಸಣವಾಗದಿರಲವರಿಗೆ, ಸಮಾಧಿಯಂ</p><p>ತನ್ನ ಮಣ್ಣೊಡಲೊಳೀ ಲಂಕೆ ರಚಿಪುದೆ ದಿಟಂ</p><p>ಶತ್ರುಗಾತ್ರಕ್ಕೆ!’ </p>.<p><strong>ಚಿತ್ತನಾರಾಚ</strong></p>.<p>ಚಿತ್ತನಾರಾಚ (ನಾ). ಚಿತ್ತವೆಂಬ ಬಾಣ</p><p>ಶ್ರೀ ರಾಮಚಂದ್ರನು ಕಡಲಿನ ಎದುರು ಪುಣ್ಯವೇದಿಕೆಯಲ್ಲಿ ಕುಳಿತು ‘ಮರಣ ಅಥವಾ ಶರಧಿಯನ್ನು ದಾಟುವುದು’ ಎಂಬ ಪ್ರತಿಜ್ಞೆಯನ್ನು ಕೈಗೊಳ್ಳುವನು. ಅವನ ರೌದ್ರವನ್ನು ತಡೆ ಎಂದು ವರುಣನು ವಿಶ್ವಕರ್ಮನಿಗೆ ಹೇಳುವನು. ರುದ್ರ ಭೀಷಣ ರಾಮನನ್ನು ಬಣ್ಣಿಸುತ್ತ ಕುವೆಂಪು ಅವರು ‘ಚಿತ್ತನಾರಾಚ’ ಪದವನ್ನು ಹೀಗೆ ಪ್ರಯೋಗಿಸಿದ್ದಾರೆ:</p>.<p>‘ಲೋಕಪ್ರಳಯಕರ ಭಯಂಕರ ಕಾರ್ಯಕ್ಕೆ</p><p>ಕೋಪಚಾಪಕೆ ಘೋರ ಚಿತ್ತನಾರಾಚಮಂ</p><p>ಸಂಧಾನಗೈವ ವಿಕಟಕ್ರಿಯಾ ನಿಕಟನಂ</p><p>ಬಳಿಸಾರ್’ </p>.<p><strong>ವಾಗಸಿಪತ್ರ</strong></p>.<p>ವಾಗಸಿಪತ್ರ (ನಾ). ಮಾತಿನ ಕತ್ತಿಯ ಅಲಗು</p><p>ಮೈಂದ ಮತ್ತು ದ್ವಿವಿದರು ರಾಘವನ ಅಪೇಕ್ಷೆ ತಿಳಿಸಲು ವಿಭೀಷಣನಲ್ಲಿಗೆ ಬರುವರು. ಮೈಂದನ ನುಡಿಗಳಿಂದ ವಿಭೀಷಣ ಘಾಸಿಗೊಳ್ಳುವನು. ಆಗ ಅವನು ಹೇಳುವ ಮಾತಿನಲ್ಲಿ ಕುವೆಂಪು ‘ವಾಗಸಿಪುತ್ರ’ ನುಡಿರಚಿಸಿ ಹೀಗೆ ಆಡಿಸಿದ್ದಾರೆ:</p>.<p>‘ಕ್ರೂರ ವಾಗಸಿಪತ್ರದಿಂದೆನ್ನ ಹೃದಯಮಂ</p><p>ಸೀಳುತಿರ್ಪ್ಪಯ್.’ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೀರ್ಮಸಣ</strong></p>.<p>ನೀರ್ಮಸಣ (ನಾ). ನೀರು ಶ್ಮಶಾನ</p><p>ಮೇಘನಾದನ ಮಾತಿನಲ್ಲಿ ಕುವೆಂಪು ಅವರು ‘ನೀರ್ಮಸಣ’ ಪದ ಬಳಸಿ, ಅವನ ಸಾಹಸದ ಉದ್ಗಾರವನ್ನು ಹೀಗೆ ಅಭಿವ್ಯಕ್ತಿಸಿದ್ದಾರೆ.</p>.<p>‘ಕಡಲ್</p><p>ನೀರ್ಮಸಣವಾಗದಿರಲವರಿಗೆ, ಸಮಾಧಿಯಂ</p><p>ತನ್ನ ಮಣ್ಣೊಡಲೊಳೀ ಲಂಕೆ ರಚಿಪುದೆ ದಿಟಂ</p><p>ಶತ್ರುಗಾತ್ರಕ್ಕೆ!’ </p>.<p><strong>ಚಿತ್ತನಾರಾಚ</strong></p>.<p>ಚಿತ್ತನಾರಾಚ (ನಾ). ಚಿತ್ತವೆಂಬ ಬಾಣ</p><p>ಶ್ರೀ ರಾಮಚಂದ್ರನು ಕಡಲಿನ ಎದುರು ಪುಣ್ಯವೇದಿಕೆಯಲ್ಲಿ ಕುಳಿತು ‘ಮರಣ ಅಥವಾ ಶರಧಿಯನ್ನು ದಾಟುವುದು’ ಎಂಬ ಪ್ರತಿಜ್ಞೆಯನ್ನು ಕೈಗೊಳ್ಳುವನು. ಅವನ ರೌದ್ರವನ್ನು ತಡೆ ಎಂದು ವರುಣನು ವಿಶ್ವಕರ್ಮನಿಗೆ ಹೇಳುವನು. ರುದ್ರ ಭೀಷಣ ರಾಮನನ್ನು ಬಣ್ಣಿಸುತ್ತ ಕುವೆಂಪು ಅವರು ‘ಚಿತ್ತನಾರಾಚ’ ಪದವನ್ನು ಹೀಗೆ ಪ್ರಯೋಗಿಸಿದ್ದಾರೆ:</p>.<p>‘ಲೋಕಪ್ರಳಯಕರ ಭಯಂಕರ ಕಾರ್ಯಕ್ಕೆ</p><p>ಕೋಪಚಾಪಕೆ ಘೋರ ಚಿತ್ತನಾರಾಚಮಂ</p><p>ಸಂಧಾನಗೈವ ವಿಕಟಕ್ರಿಯಾ ನಿಕಟನಂ</p><p>ಬಳಿಸಾರ್’ </p>.<p><strong>ವಾಗಸಿಪತ್ರ</strong></p>.<p>ವಾಗಸಿಪತ್ರ (ನಾ). ಮಾತಿನ ಕತ್ತಿಯ ಅಲಗು</p><p>ಮೈಂದ ಮತ್ತು ದ್ವಿವಿದರು ರಾಘವನ ಅಪೇಕ್ಷೆ ತಿಳಿಸಲು ವಿಭೀಷಣನಲ್ಲಿಗೆ ಬರುವರು. ಮೈಂದನ ನುಡಿಗಳಿಂದ ವಿಭೀಷಣ ಘಾಸಿಗೊಳ್ಳುವನು. ಆಗ ಅವನು ಹೇಳುವ ಮಾತಿನಲ್ಲಿ ಕುವೆಂಪು ‘ವಾಗಸಿಪುತ್ರ’ ನುಡಿರಚಿಸಿ ಹೀಗೆ ಆಡಿಸಿದ್ದಾರೆ:</p>.<p>‘ಕ್ರೂರ ವಾಗಸಿಪತ್ರದಿಂದೆನ್ನ ಹೃದಯಮಂ</p><p>ಸೀಳುತಿರ್ಪ್ಪಯ್.’ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>