<p>ಸಿದ್ಧಾರೂಢರ ಅಂಗಾರ, ದೇಶಕ್ಕೆಲ್ಲ ಬಂಗಾರ.. ಸಿದ್ಧಾರೂಢರ ಜೋಳಿಗೆ, ನಾಡಿಗೆಲ್ಲ ಹೋಳಿಗೆ... ಎಂಬ ಭಕ್ತರ ಜಯಘೋಷಗಳೇ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಮಹತ್ವವನ್ನು ಸಾರುತ್ತವೆ. ಶಿವರಾತ್ರಿ ಮರು ದಿನ, ಮಾರ್ಚ್ ಐದರಂದು ನಡೆಯುವ ಜಾತ್ರೆಯಲ್ಲಿ ಈ ಜಯಘೋಷಗಳು ಮತ್ತೆ ಅನುರಣಿಸಲಿವೆ.</p>.<p>ಸಿದ್ಧಾರೂಢ ಸ್ವಾಮೀಜಿ ಬೀದರ್ ಜಿಲ್ಲೆಯ ಚಳಕಾಪುರದಲ್ಲಿ 1836ರ ಮಾರ್ಚ್ 26ರಂದು ಜನಿಸಿದರು. ಚಿಕ್ಕಂದಿನಲ್ಲಿ ಸಿದ್ಧ ಎಂದು ಅವರನ್ನು ಕರೆಯಲಾಗುತ್ತಿತ್ತು. ಮನೆ ಬಿಟ್ಟು ಲೋಕಸಂಚಾರ ಆರಂಭಿಸಿದ ಅವರು, ಎಷ್ಟೋ ಜನರ ಸಂಕಷ್ಟಗಳನ್ನು ಪವಾಡಗಳ ಮೂಲಕ ಪರಿಹರಿಸಿದರು.</p>.<p>41ನೇ ವಯಸ್ಸಿನಲ್ಲಿ ಅಂದರೆ 1877ರಲ್ಲಿ ಹುಬ್ಬಳ್ಳಿಗೆ ಬಂದು ನೆಲೆ ನಿಂತರು. ಅನೇಕ ಪವಾಡಗಳನ್ನು ಮಾಡಿದ ಅವರು, 1929ರ ಆಗಸ್ಟ್ 21ರಂದು ಲಿಂಗೈಕ್ಯರಾದರು.</p>.<p><strong>ಗಾಂಧೀಜಿ, ತಿಲಕರ ಭೇಟಿ:</strong> 1918 ಬಾಲಗಂಗಾಧರ ತಿಳಕ, 1924ರಲ್ಲಿ ಮಹಾತ್ಮ ಗಾಂಧಿ ಅವರು ಹುಬ್ಬಳ್ಳಿಗೆ ಬಂದಾಗ ಸಿದ್ಧಾರೂಢರನ್ನು ಭೇಟಿಯಾಗಿದ್ದರು. ಅಸ್ಪೃಶ್ಯರೊಂದಿಗೆ ಊಟಕ್ಕೆ ಕುಳಿತಿದ್ದ ಸಿದ್ಧಾರೂಢರನ್ನು ಕಂಡು ಗಾಂಧೀಜಿ ಮೂಕವಿಸ್ಮಿತರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿದ್ಧಾರೂಢರ ಅಂಗಾರ, ದೇಶಕ್ಕೆಲ್ಲ ಬಂಗಾರ.. ಸಿದ್ಧಾರೂಢರ ಜೋಳಿಗೆ, ನಾಡಿಗೆಲ್ಲ ಹೋಳಿಗೆ... ಎಂಬ ಭಕ್ತರ ಜಯಘೋಷಗಳೇ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಮಹತ್ವವನ್ನು ಸಾರುತ್ತವೆ. ಶಿವರಾತ್ರಿ ಮರು ದಿನ, ಮಾರ್ಚ್ ಐದರಂದು ನಡೆಯುವ ಜಾತ್ರೆಯಲ್ಲಿ ಈ ಜಯಘೋಷಗಳು ಮತ್ತೆ ಅನುರಣಿಸಲಿವೆ.</p>.<p>ಸಿದ್ಧಾರೂಢ ಸ್ವಾಮೀಜಿ ಬೀದರ್ ಜಿಲ್ಲೆಯ ಚಳಕಾಪುರದಲ್ಲಿ 1836ರ ಮಾರ್ಚ್ 26ರಂದು ಜನಿಸಿದರು. ಚಿಕ್ಕಂದಿನಲ್ಲಿ ಸಿದ್ಧ ಎಂದು ಅವರನ್ನು ಕರೆಯಲಾಗುತ್ತಿತ್ತು. ಮನೆ ಬಿಟ್ಟು ಲೋಕಸಂಚಾರ ಆರಂಭಿಸಿದ ಅವರು, ಎಷ್ಟೋ ಜನರ ಸಂಕಷ್ಟಗಳನ್ನು ಪವಾಡಗಳ ಮೂಲಕ ಪರಿಹರಿಸಿದರು.</p>.<p>41ನೇ ವಯಸ್ಸಿನಲ್ಲಿ ಅಂದರೆ 1877ರಲ್ಲಿ ಹುಬ್ಬಳ್ಳಿಗೆ ಬಂದು ನೆಲೆ ನಿಂತರು. ಅನೇಕ ಪವಾಡಗಳನ್ನು ಮಾಡಿದ ಅವರು, 1929ರ ಆಗಸ್ಟ್ 21ರಂದು ಲಿಂಗೈಕ್ಯರಾದರು.</p>.<p><strong>ಗಾಂಧೀಜಿ, ತಿಲಕರ ಭೇಟಿ:</strong> 1918 ಬಾಲಗಂಗಾಧರ ತಿಳಕ, 1924ರಲ್ಲಿ ಮಹಾತ್ಮ ಗಾಂಧಿ ಅವರು ಹುಬ್ಬಳ್ಳಿಗೆ ಬಂದಾಗ ಸಿದ್ಧಾರೂಢರನ್ನು ಭೇಟಿಯಾಗಿದ್ದರು. ಅಸ್ಪೃಶ್ಯರೊಂದಿಗೆ ಊಟಕ್ಕೆ ಕುಳಿತಿದ್ದ ಸಿದ್ಧಾರೂಢರನ್ನು ಕಂಡು ಗಾಂಧೀಜಿ ಮೂಕವಿಸ್ಮಿತರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>