<p>ಸುಬ್ಬು ಹೊಲೆಯಾರ್<br /> ನೆಲದ ಮೇಲೆ ಇರುವೆಗಳು<br /> ಚಲಿಸುವುದನ್ನ<br /> ಮರಗಳಿಂದ ಎಲೆಗಳು ಉದುರುವುದನ್ನು<br /> ನಿಷೇಧಿಸುತ್ತೇವೆಂದು ಯಾರೂ ಹೇಳಲಾರರು</p>.<p>ನನ್ನ ಕೇರಿಯ ಮೇಲೆ ಸುರಿದ ಮಳೆಯ<br /> ನೀರು ಅಣೆಕಟ್ಟೆಗೆ ಸೇರಿ ಅದು ಪವಿತ್ರರ<br /> ಮನೆಯ ನಲ್ಲಿಯಿಂದ ತೀರ್ಥ, ಪಾಯಸವಾಗಿರುವುದು<br /> ಇದುವರೆಗೆ ಯಾರಿಗೂ ಹೇಳಿಲ್ಲ<br /> ಎನ್ನುವುದು ನನ್ನ ಆತಂಕ ಹೆಚ್ಚಿಸಿದೆ.</p>.<p>ಇವರಿಗೆ ನನ್ನ ಕೇರಿಯನ್ನ ಭೂಮಿಯಿಂದ<br /> ಕತ್ತರಿಸಲ್ಪಟ್ಟ ಹಾಗೆ ಕಾಣಿಸಬೇಕೆಂದು<br /> ನಾಲಿಗೆ ಪಸೆಯಲ್ಲಿ ಜೀವಂತ ಇರುವಾಗ<br /> ನನ್ನ ತುಟಿಗಳು ಬಿಡಿಸದಂತೆ, ತಾವಾಗೇ ಅಂಟಿಕೊಂಡಿವೆ.</p>.<p>ಚಿವುಟುತ್ತಲೇಯಿರಬೇಕು ನನ್ನ<br /> ಅಂತ ಅವರ ಮನಸ್ಸು ಹೇಳುತ್ತಲೇ ಇರುತ್ತದೆ<br /> ನನ್ನ ಹೃದಯ ಇವರನ್ನು ಕ್ಷಮಿಸಿ ಅಂತ<br /> ಪ್ರಾರ್ಥಿಸುತ್ತಲೇ ಇರುತ್ತದೆ ಮಂಡಿಯೂರಿ.</p>.<p>ನನ್ನ ವಿವರಗಳಲ್ಲಿ ಗಾಯದ<br /> ಗುರುತನ್ನ ದಾಖಲಿಸುವುದಿಲ್ಲ<br /> ಕೇರಿಯ ಕಣ್ಣೀರಿನ ಜಾರುವಿಗೆ<br /> ಶಾಯಿ ಮುಗಿದಿದೆ ಎಂದು ಪುಲಿಸ್ಟಾಪ್ನಲ್ಲಿ ಸುಳ್ಳುಹೇಳಲಾಗುವುದಿಲ್ಲ</p>.<p>ತಣ್ಣಗೆ ಸುಟ್ಟಾಗಲೆಲ್ಲಾ<br /> ನನ್ನೆದೆ ನಿಮ್ಮ ತೂಗುವ ತೊಟ್ಟಿಲಾಗುತ್ತದೆ<br /> ಹಿಮ್ಮಡಿ ತುಳಿಯುವ ನಿಮ್ಮ ಕ್ರೌರ್ಯ<br /> ನನ್ನ ಮನೆಯ ನಾಯಿಯ ಬಾಲದ ಹಾಗೆ<br /> ಹೇಳಿದರೆ ಹೇಗೆ? ನಿಮ್ಮ ಮನೆಯ<br /> ನಾಯಿಯ ಬಾಲದ ಹಾಗೆ ಎಂದು ಹೇಳಲಾದೀತೆ!</p>.<p>ರಿಂಗ್ಟೋನಿನಲ್ಲಿ ಅಂಬೇಡ್ಕರ್ ಹೆಸರು ಕೇಳಿಸಿಕೊಳ್ಳದ<br /> ನನ್ನ ಕೊಂದವರ ಹೆಸರಿನಲ್ಲಿ<br /> ಮುಕ್ಕೋಟಿ ದೇವರ ಹೆಸರಿರಬಹುದೆ ಗೆಳೆಯ!<br /> ಆತ್ಮಚರಿತ್ರೆಯ ಕೊನೆಯ ಅಧ್ಯಾಯದಲ್ಲಿ<br /> ಇವರನ್ನ ಪಂಚಾಮೃತದಲ್ಲಿ ಮೀಯಿಸುತ್ತೇನೆ!<br /> ಆಗಲಾದರೂ ಇವರ ಮೈ ಸಿಹಿಯಾಗಲೆಂದು.<br /> <br /> ಲೋಕ ಎಷ್ಟು ಹಗುರಾಗಿದೆ.<br /> ಗಿಡದ ಹೂ ತೇಲಾಡಿದ ಹಾಗೆ<br /> ಚಿಟ್ಟೆ ಹಾರಾಡಿದ ಹಾಗೆ<br /> ಇನ್ನೂ ಹಗುರಾಗಬೇಕು ಗಾಳಿಯಲ್ಲಿ.</p>.<p>ಮಹಾ ಭೀಮರಾವ್ ಹುಟ್ಟಿದ ದಿನ<br /> ಮೌನದೊಳಗಿನ ಮೌನವಾಗಬೇಕೆಂದು<br /> ಅವರನ್ನು ಕೇಳಿಸಿಕೊಳ್ಳಲು<br /> ಕೆಲವರು ಉಸಿರಾಡುವುದನ್ನು ನೋಡಲು<br /> ಇನ್ನಷ್ಟು ಸಹನೆಯಿಂದ...</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುಬ್ಬು ಹೊಲೆಯಾರ್<br /> ನೆಲದ ಮೇಲೆ ಇರುವೆಗಳು<br /> ಚಲಿಸುವುದನ್ನ<br /> ಮರಗಳಿಂದ ಎಲೆಗಳು ಉದುರುವುದನ್ನು<br /> ನಿಷೇಧಿಸುತ್ತೇವೆಂದು ಯಾರೂ ಹೇಳಲಾರರು</p>.<p>ನನ್ನ ಕೇರಿಯ ಮೇಲೆ ಸುರಿದ ಮಳೆಯ<br /> ನೀರು ಅಣೆಕಟ್ಟೆಗೆ ಸೇರಿ ಅದು ಪವಿತ್ರರ<br /> ಮನೆಯ ನಲ್ಲಿಯಿಂದ ತೀರ್ಥ, ಪಾಯಸವಾಗಿರುವುದು<br /> ಇದುವರೆಗೆ ಯಾರಿಗೂ ಹೇಳಿಲ್ಲ<br /> ಎನ್ನುವುದು ನನ್ನ ಆತಂಕ ಹೆಚ್ಚಿಸಿದೆ.</p>.<p>ಇವರಿಗೆ ನನ್ನ ಕೇರಿಯನ್ನ ಭೂಮಿಯಿಂದ<br /> ಕತ್ತರಿಸಲ್ಪಟ್ಟ ಹಾಗೆ ಕಾಣಿಸಬೇಕೆಂದು<br /> ನಾಲಿಗೆ ಪಸೆಯಲ್ಲಿ ಜೀವಂತ ಇರುವಾಗ<br /> ನನ್ನ ತುಟಿಗಳು ಬಿಡಿಸದಂತೆ, ತಾವಾಗೇ ಅಂಟಿಕೊಂಡಿವೆ.</p>.<p>ಚಿವುಟುತ್ತಲೇಯಿರಬೇಕು ನನ್ನ<br /> ಅಂತ ಅವರ ಮನಸ್ಸು ಹೇಳುತ್ತಲೇ ಇರುತ್ತದೆ<br /> ನನ್ನ ಹೃದಯ ಇವರನ್ನು ಕ್ಷಮಿಸಿ ಅಂತ<br /> ಪ್ರಾರ್ಥಿಸುತ್ತಲೇ ಇರುತ್ತದೆ ಮಂಡಿಯೂರಿ.</p>.<p>ನನ್ನ ವಿವರಗಳಲ್ಲಿ ಗಾಯದ<br /> ಗುರುತನ್ನ ದಾಖಲಿಸುವುದಿಲ್ಲ<br /> ಕೇರಿಯ ಕಣ್ಣೀರಿನ ಜಾರುವಿಗೆ<br /> ಶಾಯಿ ಮುಗಿದಿದೆ ಎಂದು ಪುಲಿಸ್ಟಾಪ್ನಲ್ಲಿ ಸುಳ್ಳುಹೇಳಲಾಗುವುದಿಲ್ಲ</p>.<p>ತಣ್ಣಗೆ ಸುಟ್ಟಾಗಲೆಲ್ಲಾ<br /> ನನ್ನೆದೆ ನಿಮ್ಮ ತೂಗುವ ತೊಟ್ಟಿಲಾಗುತ್ತದೆ<br /> ಹಿಮ್ಮಡಿ ತುಳಿಯುವ ನಿಮ್ಮ ಕ್ರೌರ್ಯ<br /> ನನ್ನ ಮನೆಯ ನಾಯಿಯ ಬಾಲದ ಹಾಗೆ<br /> ಹೇಳಿದರೆ ಹೇಗೆ? ನಿಮ್ಮ ಮನೆಯ<br /> ನಾಯಿಯ ಬಾಲದ ಹಾಗೆ ಎಂದು ಹೇಳಲಾದೀತೆ!</p>.<p>ರಿಂಗ್ಟೋನಿನಲ್ಲಿ ಅಂಬೇಡ್ಕರ್ ಹೆಸರು ಕೇಳಿಸಿಕೊಳ್ಳದ<br /> ನನ್ನ ಕೊಂದವರ ಹೆಸರಿನಲ್ಲಿ<br /> ಮುಕ್ಕೋಟಿ ದೇವರ ಹೆಸರಿರಬಹುದೆ ಗೆಳೆಯ!<br /> ಆತ್ಮಚರಿತ್ರೆಯ ಕೊನೆಯ ಅಧ್ಯಾಯದಲ್ಲಿ<br /> ಇವರನ್ನ ಪಂಚಾಮೃತದಲ್ಲಿ ಮೀಯಿಸುತ್ತೇನೆ!<br /> ಆಗಲಾದರೂ ಇವರ ಮೈ ಸಿಹಿಯಾಗಲೆಂದು.<br /> <br /> ಲೋಕ ಎಷ್ಟು ಹಗುರಾಗಿದೆ.<br /> ಗಿಡದ ಹೂ ತೇಲಾಡಿದ ಹಾಗೆ<br /> ಚಿಟ್ಟೆ ಹಾರಾಡಿದ ಹಾಗೆ<br /> ಇನ್ನೂ ಹಗುರಾಗಬೇಕು ಗಾಳಿಯಲ್ಲಿ.</p>.<p>ಮಹಾ ಭೀಮರಾವ್ ಹುಟ್ಟಿದ ದಿನ<br /> ಮೌನದೊಳಗಿನ ಮೌನವಾಗಬೇಕೆಂದು<br /> ಅವರನ್ನು ಕೇಳಿಸಿಕೊಳ್ಳಲು<br /> ಕೆಲವರು ಉಸಿರಾಡುವುದನ್ನು ನೋಡಲು<br /> ಇನ್ನಷ್ಟು ಸಹನೆಯಿಂದ...</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>