<p>ಕನ್ನಡದ ಪ್ರಮುಖ ಕಥೆಗಾರ ಹಾಗೂ ಕಾದಂಬರಿಕಾರರಾಗಿ ಗುರುತಿಸಿಕೊಂಡಿರುವ ಬಿ.ಎಲ್.ವೇಣು ಅವರ ಹದಿನಾಲ್ಕನೇ ಕಥಾಸಂಕಲನ ‘ಮಸೀದಿ ಬಾವಿ ಮತ್ತು ಇತರ ಕಥೆಗಳು’. ಈ ಕಥಾ ಸಂಕಲನದಲ್ಲಿ ಒಟ್ಟು 15 ಸಣ್ಣ ಕಥೆಗಳಿವೆ.</p>.<p>ಸಂಕಲನದ ಬಹುತೇಕ ಕಥೆಗಳು ಜಾತಿ, ಧರ್ಮಗಳ ಸಂಕೋಲೆಗಳ ಸುತ್ತಲೇ ಸುತ್ತುತ್ತವೆ. ಈ ಕಥೆಗಳ ಪಾತ್ರಗಳು ಅಲ್ಲಿಂದ ಬಿಡುಗಡೆ ಪಡೆಯಲು ನಡೆಸುವ ಹೋರಾಟಗಳೇ, ಕಥೆಗಳಾಗಿ ರೂಪುಗೊಂಡಿವೆ.</p>.<p>‘ಮಸೀದಿ ಬಾವಿ’ ಕಥೆಯು ವಿಡಂಬನಾತ್ಮಕವಾಗಿ ಧರ್ಮಗಳ ನಡುವಿನ ಕಿತ್ತಾಟವನ್ನು ತೋರಿಸಿಕೊಡುತ್ತದೆ. ಮಸೀದಿ ಬಾವಿಯಲ್ಲಿ ನಾಯಿಯೊಂದು ಬೀಳುವ ಮೂಲಕ ಆರಂಭವಾಗುವ ಕಥೆಯು, ಧರ್ಮಗಳ ಹೆಸರಲ್ಲಿ ಕೊಳೆತು ನಾರುವ ಮನುಷ್ಯ ಸಂಬಂಧಗಳನ್ನು ಸೂಚ್ಯವಾಗಿ ನಿರೂಪಿಸುತ್ತದೆ.</p>.<p>‘ಒಂದು ಸಾವಿನ ಸುತ್ತಾ’, ‘ಅಗೋಚರ’ ಕಥೆಗಳು ಧರ್ಮದ ಅಮಲಿನಲ್ಲಿರುವವರ ಸುತ್ತ ಸುತ್ತುವ ಕಥೆಗಳಾಗಿವೆ. ‘ಜೆಸಿಬಿ ಮಾಲಿಂಗ’, ‘ಅಜಗಜಾಂತರ’, ‘ನಾಳೆಗಳಿಲ್ಲದವರು’, ‘ಕರುಣಾಳು ಬಾ ಬೆಳಕೆ’ ಕಥೆಗಳು ಹಳ್ಳಿಯ ಜನರಲ್ಲಿ ಬೇರೂರಿರುವ ಜಾತೀಯತೆಯನ್ನು ತೆರೆದಿಡುತ್ತದೆ.</p>.<p>‘ಹೀಗೊಂದು ಪ್ರೇಮಾಯಣ’, ‘ಮದುವೆಯ ಈ ಬಂಧ’, ‘ಸಂಗಾತಿ’ ಕಥೆಗಳು ಪ್ರೀತಿ, ಪ್ರೇಮ, ಮದುವೆಗಳ ಕಥೆಗಳಾಗಿವೆ. ‘ಯಲಕ್ಷನ್ಗೆ ನಿಂತ್ರು ಕಾವಿ ಶೂರರು!’, ‘ಸ್ವಾಮೀಜಿ’ ಕಥೆಗಳು ಮಠಾಧೀಶರೆನಿಸಿಕೊಂಡವರ ಪುರಾಣಗಳನ್ನು ಬಿಚ್ಚಿಡುತ್ತವೆ.</p>.<p>ವಿಡಂಬನಾತ್ಮಕ ನಿರೂಪಣೆಯ ಮೂಲಕ ಪ್ರಚಲಿತ ಸಂಗತಿಗಳು ಹಾಗೂ ಸಮಕಾಲೀನ ಘಟನೆಗಳನ್ನು ಕಥಾ ವಸ್ತುಗಳನ್ನಾಗಿಸುವ ವೇಣು ಅವರ ಬರವಣಿಗೆಯಲ್ಲಿ ಓದಿಸಿಕೊಂಡು ಹೋಗುವ ಗುಣವಿದೆ. ಇಲ್ಲಿನ ಕಥೆಗಳ ಪಾತ್ರಗಳು ನಮ್ಮೊಳಗಿನ ಸಮಾಜದಿಂದಲೇ ಜೀವತಾಳಿದಂತಿವೆ.</p>.<p><strong>ಮಸೀದಿ ಬಾವಿ ಮತ್ತು ಇತರ ಕಥೆಗಳು </strong></p><p><strong>ಸಂ: ಬಿ.ಎಲ್. ವೇಣು</strong></p><p><strong>ಪ್ರ: ಗೀತಾಂಜಲಿ ಪಬ್ಲಿಕೇಷನ್ಸ್</strong></p><p><strong>ಸಂ: 9740066842 </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನ್ನಡದ ಪ್ರಮುಖ ಕಥೆಗಾರ ಹಾಗೂ ಕಾದಂಬರಿಕಾರರಾಗಿ ಗುರುತಿಸಿಕೊಂಡಿರುವ ಬಿ.ಎಲ್.ವೇಣು ಅವರ ಹದಿನಾಲ್ಕನೇ ಕಥಾಸಂಕಲನ ‘ಮಸೀದಿ ಬಾವಿ ಮತ್ತು ಇತರ ಕಥೆಗಳು’. ಈ ಕಥಾ ಸಂಕಲನದಲ್ಲಿ ಒಟ್ಟು 15 ಸಣ್ಣ ಕಥೆಗಳಿವೆ.</p>.<p>ಸಂಕಲನದ ಬಹುತೇಕ ಕಥೆಗಳು ಜಾತಿ, ಧರ್ಮಗಳ ಸಂಕೋಲೆಗಳ ಸುತ್ತಲೇ ಸುತ್ತುತ್ತವೆ. ಈ ಕಥೆಗಳ ಪಾತ್ರಗಳು ಅಲ್ಲಿಂದ ಬಿಡುಗಡೆ ಪಡೆಯಲು ನಡೆಸುವ ಹೋರಾಟಗಳೇ, ಕಥೆಗಳಾಗಿ ರೂಪುಗೊಂಡಿವೆ.</p>.<p>‘ಮಸೀದಿ ಬಾವಿ’ ಕಥೆಯು ವಿಡಂಬನಾತ್ಮಕವಾಗಿ ಧರ್ಮಗಳ ನಡುವಿನ ಕಿತ್ತಾಟವನ್ನು ತೋರಿಸಿಕೊಡುತ್ತದೆ. ಮಸೀದಿ ಬಾವಿಯಲ್ಲಿ ನಾಯಿಯೊಂದು ಬೀಳುವ ಮೂಲಕ ಆರಂಭವಾಗುವ ಕಥೆಯು, ಧರ್ಮಗಳ ಹೆಸರಲ್ಲಿ ಕೊಳೆತು ನಾರುವ ಮನುಷ್ಯ ಸಂಬಂಧಗಳನ್ನು ಸೂಚ್ಯವಾಗಿ ನಿರೂಪಿಸುತ್ತದೆ.</p>.<p>‘ಒಂದು ಸಾವಿನ ಸುತ್ತಾ’, ‘ಅಗೋಚರ’ ಕಥೆಗಳು ಧರ್ಮದ ಅಮಲಿನಲ್ಲಿರುವವರ ಸುತ್ತ ಸುತ್ತುವ ಕಥೆಗಳಾಗಿವೆ. ‘ಜೆಸಿಬಿ ಮಾಲಿಂಗ’, ‘ಅಜಗಜಾಂತರ’, ‘ನಾಳೆಗಳಿಲ್ಲದವರು’, ‘ಕರುಣಾಳು ಬಾ ಬೆಳಕೆ’ ಕಥೆಗಳು ಹಳ್ಳಿಯ ಜನರಲ್ಲಿ ಬೇರೂರಿರುವ ಜಾತೀಯತೆಯನ್ನು ತೆರೆದಿಡುತ್ತದೆ.</p>.<p>‘ಹೀಗೊಂದು ಪ್ರೇಮಾಯಣ’, ‘ಮದುವೆಯ ಈ ಬಂಧ’, ‘ಸಂಗಾತಿ’ ಕಥೆಗಳು ಪ್ರೀತಿ, ಪ್ರೇಮ, ಮದುವೆಗಳ ಕಥೆಗಳಾಗಿವೆ. ‘ಯಲಕ್ಷನ್ಗೆ ನಿಂತ್ರು ಕಾವಿ ಶೂರರು!’, ‘ಸ್ವಾಮೀಜಿ’ ಕಥೆಗಳು ಮಠಾಧೀಶರೆನಿಸಿಕೊಂಡವರ ಪುರಾಣಗಳನ್ನು ಬಿಚ್ಚಿಡುತ್ತವೆ.</p>.<p>ವಿಡಂಬನಾತ್ಮಕ ನಿರೂಪಣೆಯ ಮೂಲಕ ಪ್ರಚಲಿತ ಸಂಗತಿಗಳು ಹಾಗೂ ಸಮಕಾಲೀನ ಘಟನೆಗಳನ್ನು ಕಥಾ ವಸ್ತುಗಳನ್ನಾಗಿಸುವ ವೇಣು ಅವರ ಬರವಣಿಗೆಯಲ್ಲಿ ಓದಿಸಿಕೊಂಡು ಹೋಗುವ ಗುಣವಿದೆ. ಇಲ್ಲಿನ ಕಥೆಗಳ ಪಾತ್ರಗಳು ನಮ್ಮೊಳಗಿನ ಸಮಾಜದಿಂದಲೇ ಜೀವತಾಳಿದಂತಿವೆ.</p>.<p><strong>ಮಸೀದಿ ಬಾವಿ ಮತ್ತು ಇತರ ಕಥೆಗಳು </strong></p><p><strong>ಸಂ: ಬಿ.ಎಲ್. ವೇಣು</strong></p><p><strong>ಪ್ರ: ಗೀತಾಂಜಲಿ ಪಬ್ಲಿಕೇಷನ್ಸ್</strong></p><p><strong>ಸಂ: 9740066842 </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>