ಸಾಧಕರ ಅಭಿನಂದನಾ ಗ್ರಂಥಕ್ಕೆ, ಸಾಧಕರಿಗೆ 50–60 ವರ್ಷವಾದ ಸಂದರ್ಭದಲ್ಲಿ ಹೊರಬಂದ ಗ್ರಂಥಕ್ಕೆ ಹೀಗೆ ವಿವಿಧ ಸಂದರ್ಭಗಳಲ್ಲಿ ಲೇಖಕರು ಬರೆದಿದ್ದ ಲೇಖನಗಳ ಗುಚ್ಛ ಇದಾಗಿದೆ. ನಾಡಪ್ರಭು ಕೆಂಪೇಗೌಡರಿಂದ ಹಿಡಿದು ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಎಸ್.ಬಂಗಾರಪ್ಪ ಹೀಗೆ ಬೆಂಗಳೂರು ನಿರ್ಮಾಣದ ಶಿಲ್ಪಿಯಿಂದ ಹಿಡಿದು, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದವರು, ನೀರಾವರಿ ತಜ್ಞರು, ರಾಜಕೀಯ ಧುರೀಣರು, ಸಾಹಿತ್ಯ ಲೋಕದ ಜನಪ್ರಿಯರು, ದಲಿತ ಚಳವಳಿ, ಪತ್ರಿಕೋದ್ಯಮ, ಸಮಾಜ ಸೇವೆ, ಕನ್ನಡ ಪರ ಹೋರಾಟಗಾರರು, ಜನಪದ, ಚಿತ್ರಕಲೆ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಟ್ಟು ಐವತ್ತು ಸಾಧಕರ ವೈವಿಧ್ಯಮಯ ಬದುಕಿನ ಅನಾವರಣವನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.