ಕೃತಿಯ ಶೀರ್ಷಿಕೆ ಹೊತ್ತ ‘ಎಲ್ಲಿಂದಲೋ ಹಾರಿ ಬಂದು’ ಇದಕ್ಕೆ ನಿದರ್ಶನ. ಇಲ್ಲಿ ಹೈಕು ಬರೆಯಲೆಂದೇ ಕುಳಿತ ಲೇಖಕನಿಗೆ ಗುಬ್ಬಕ್ಕ ಕೇಳುವ ಪ್ರಶ್ನೆಯೊಂದನ್ನಿಟ್ಟುಕೊಂಡು ಜಗತ್ತಿನ ವಾಸ್ತವ ಸ್ಥಿತಿಯನ್ನು ಉಲ್ಲೇಖಿಸುವಂತೆ ತೋರುತ್ತದೆ. ಪಕ್ಕದ ಮನೆ ಹುಡುಗಿ, ಹೇಳಿ ಮಿ.ಮಾರ್ಕಂಡೇಯ, ಮಂಗಳವಾರ ಮಧ್ಯಾಹ್ನದ ಶೋ, ಚಂಡಮಾರುತದ ಮುನ್ಸೂಚನೆ, ನೀನು ನನ್ನನ್ನು ಕೊಲ್ಲಬೇಕು...ಹೀಗೆ ಒಂದೊಂದು ಸಣ್ಣಕಥೆ, ಗಪದ್ಯಗಳೂ ಭಿನ್ನ ವಿಷಯವನ್ನು ಇಟ್ಟುಕೊಂಡು ಹೆಣೆದ ಆಳವಾದ ಅರ್ಥವುಳ್ಳ ಬರವಣಿಗೆಗಳಾಗಿವೆ. ಅವುಗಳ ಒಳನೋಟ ಹಲವು. ಈ ರಚನೆಗಳನ್ನು ಸಾಹಿತ್ಯದ ಒಂದು ಪ್ರಕಾರಕ್ಕೆ ಸೇರಿಸುವುದು ಅಸಾಧ್ಯ. ಶೀರ್ಷಿಕೆಯೇ ರಚನೆಗಳ ಭಾಗವಾಗಿರುವ ಭಿನ್ನ ಪ್ರಯೋಗ, ನವಿರಾದ ಹಾಸ್ಯ, ಅನಿರೀಕ್ಷಿತ ಅಂತ್ಯ ಈ ರಚನೆಗಳ ವಿಶೇಷತೆ.