ನೆಹರೂ ಅವರ ತಂಗಿ ವಿಜಯಲಕ್ಷ್ಮೀ ಪಂಡಿತ್ ಅವರ ಪುತ್ರಿ ನಯನತಾರ. ಭಾರತೀಯ ಇಂಗ್ಲಿಷ್ ಸಾಹಿತ್ಯದ ಪ್ರಥಮ ಕಾದಂಬರಿಕಾರ್ತಿ ನಯನತಾರ ಅವರ ಕಾದಂಬರಿಗಳಲ್ಲಿ ಸ್ತ್ರೀ ಪ್ರಜ್ಞೆ, ರಾಜಕೀಯ ಪ್ರಜ್ಞೆ ಸೇರಿದಂತೆ ಹತ್ತುಹಲವು ವಿಷಯಗಳಿವೆ.ಕೃತಿಯ ಮೊದಲ ಕಾದಂಬರಿ ‘ಹೊಳೆವನು ಚಂದಿರ ಹಗಲಲ್ಲಿ’ಯಲ್ಲಿ ತಮ್ಮಅಮ್ಮ ವಿಜಯಲಕ್ಷ್ಮಿ ಪಂಡಿತ್ ಅವರ ಜೈಲು ದಿನಚರಿಯನ್ನು ನಯನತಾರ ವಿವರವಾಗಿ ಉಲ್ಲೇಖಿಸುತ್ತಾರೆ. ‘ನಯನತಾರರನ್ನು ಹತ್ತಿರದಿಂದ ಬಲ್ಲವರು ಅವರ ಕಾದಂಬರಿಗಳ ಹಲವಾರು ಪಾತ್ರಗಳು ಇದು ಆತ್ಮಕಥಾನಕವೋ ಅಂತನ್ನಿಸುವಷ್ಟು ಸಾಮ್ಯವನ್ನು ಹೊಂದಿವೆ ಅಂತಲೂ ಅಚ್ಚರಿಪಡುತ್ತಾರೆ’ ಎಂದು ಅನುವಾದಕಿಸುಕನ್ಯಾ ಅವರು ಉಲ್ಲೇಖಿಸುವುದು ಇದಕ್ಕೆ ಪೂರಕ. ರೆಹಾನಾ ತಿರುವು ಹಾಕುವ ಪ್ರತಿ ಪುಟದಲ್ಲೂ ನಯನತಾರ ಕಾಣಿಸುತ್ತಾರೆ.