‘ಹಿಂದೂ – ಹಾಗೆಂದರೇನು?’, ‘ವರ್ಣ, ಜಾತಿ, ಕುಲಗಳು ಭರತಖಂಡದ ಧರ್ಮವೇ?’, ‘ದಾರಿ ಯಾವುದಯ್ಯ ಭಾರತೀಯರ ಕಲ್ಯಾಣಕ್ಕೆ?’, ‘ಸನ್ಯಾಸ – ಹಾಗೆಂದರೇನು?’, ‘ಸೌಹಾರ್ದವೆಂದರೆ ವೈಮನಸ್ಯವೇ?’ – ಕೃತಿಯಲ್ಲಿನ ಅಧ್ಯಾಯಗಳ ಈ ಶೀರ್ಷಿಕೆಗಳೇ ಪುಸ್ತಕದ ಉದ್ದೇಶವನ್ನೂ ಸೂಚಿಸುವಂತಿವೆ. ವಿವೇಕಾನಂದರ ಬಗ್ಗೆ ಆಸಕ್ತಿಯುಳ್ಳವರು ಮಾತ್ರವಲ್ಲದೆ, ಸಾಮಾಜಿಕ ಸ್ವಾಸ್ಥ್ಯದ ಹಂಬಲವುಳ್ಳ ಎಲ್ಲರೂ ಗಮನಿಸಬೇಕಾದ ಕೃತಿಯಿದು.