<p>ಹೊಸ ತಲೆಮಾರಿನ ಡಾ. ಎಂ.ಎಸ್. ಆಶಾದೇವಿ ಅವರು ಪ್ರಬಂಧ, ಅನುವಾದ, ಸಂಸ್ಕೃತಿ ಚಿಂತನೆ, ವಿಮರ್ಶೆಯಲ್ಲಿ ಕ್ರಿಯಾಶೀಲರು. ಇವರ `ಸ್ತ್ರೀಮತವನುತ್ತರಿಸಲಾಗದೆ?~ ಎನ್ನುವ ವಿಮರ್ಶಾ ಸಂಕಲನ 2006ರಲ್ಲಿ ಪ್ರಕಟವಾಗಿತ್ತು. ಈಗ ಎರಡನೆ ವಿಮರ್ಶಾ ಸಂಕಲನವು `ನಡುವೆ ಸುಳಿವ ಆತ್ಮ~ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿದೆ.</p>.<p>ನಿಂತಿಲ್ಲ<br /> ಹಾದು ಬರುತ್ತಲಿದೆ<br /> ಇದೇನು?<br /> ಬಳಿಯಲ್ಲೇ ಸುಳಿದಾಡುತ್ತಿದೆ<br /> ಹೊಗೆಯೊ? ದಂಡಕಾರ್ಯಣವೊ?<br /> ಹೆಜ್ಜೆ ಕಿತ್ತು, ಹೆಜ್ಜೆ ಇಟ್ಟರಷ್ಟೇ<br /> ತಲುಪಬಹುದು ತುದಿಗೆ; ಅಲ್ಲಿಗೆ<br /> ಹೋಗುತ್ತಿದ್ದೇನೆ<br /> ನಡೆಯಬೇಕಿದೆ ನಾನು ಇನ್ನೂ<br /> ನಿಮಗೆ ತಿಳಿಸಿ ಹೋಗುವಷ್ಟು<br /> ನಿರಾಳವ ಉಳಿಸಿದಿರೇನು ನೀವು?</p>.<p>ಅನಿಸುವ ಹಾಗೆ, ಮೊದಲಿಗೆ ಸಂಕಲನದ ಮುಖತೋರದ ಮುಖಪುಟವೇ ಓದುಗರನ್ನು ಜಗ್ಗಿ ಮಾತನಾಡಿಸುತ್ತದೆ. ಸಂಕಲನದ ಬರಹಗಳ ದಿಕ್ಕನ್ನು ಒಂದೇ ಭಂಗಿಯಲ್ಲಿ ಸಮರ್ಥವಾಗಿಯೂ ದಾಟಿಸುತ್ತದೆ.<br /> <br /> ಬಂಡಾಯೋತ್ತರದ ದೀರ್ಘಾವಧಿಯ ಈ ಹೊತ್ತಿನಲ್ಲಿ ಹೊರಬರುತ್ತಿರುವ `ನಡುವೆ ಸುಳಿವ ಆತ್ಮ~ ಅನೇಕ ಏಳುಬೀಳುಗಳೊಂದಿಗೆ ಸ್ತ್ರೀತ್ವದ ಮುನ್ನಡೆಯನ್ನು ಕಟ್ಟಿಕೊಡುತ್ತದೆ. <br /> <br /> ಮುಖ್ಯವಾಗಿ ಪರಂಪರೆಯ ಆಸರೆಯೊಂದಿಗೆ, ತೊಂಬತ್ತರ ದಶಕದಿಂದೀಚೆಗೆ ಏರ್ಪಟ್ಟಿರುವ ಓದು-ವಿಮರ್ಶೆಯನ್ನು ಇಲ್ಲಿನ ಬರಹಗಳು ಮಂಡಿಸುತ್ತವೆ. ಹಾಗೆ ಮಂಡಿಸುತ್ತಿರುವ ಸಂದರ್ಭದಲ್ಲಿ ಕವಿ ಎಚ್.ಎಸ್.ಶಿವಪ್ರಕಾಶ್ ಅವರ ಕಿರುಪದ್ಯವೊಂದನ್ನು ನೆನಪಿಸುತ್ತದೆ:</p>.<p>ನೀನು ಮಲಗಿದ್ದೀಯ<br /> ಮೋಡಗಳ ಕೆಳಗೆ<br /> ಗಿರಿಯ ಹಾಗೆ<br /> ನಿನ್ನೊಳಗೆ ತುಂಬಿಕೊಂಡಿವೆ<br /> ಕಾಡಹೂಗಳು<br /> ಹಸಿರು ಮುಳ್ಳು<br /> ಕ್ರೂರ ಮೃಗಗಳು<br /> ಖನಿಜಗಳು</p>.<p>ಅಕ್ಕರೆಗೆ ಬಿದ್ದವರು ಡಬ್ಬಿ ಸಣ್ಣದಾದರೂ ಅನ್ನವನು ಅದುಮಿಟ್ಟು ತುಂಬಿಸಿದಂತೆ, ಆಡಿಯೂ ಮಿಗುವ ಮಾತು ಸಂಕೋಚದಲಿ ಒಳಸೇರಿಕೊಂಡಂತೆ, ದುಃಖದ ದಡದಲ್ಲಿ ತಂಗಿರುವ ಕವಿ ಜರೂರತ್ತಿನ ಮೇಲೆ ಸುದ್ದಿಯೊಂದನ್ನು ಕಳುಹಿಸುತ್ತಿರುವಂತೆ ಭಾಸವಾಗುವ ಮೇಲಿನ ಕಿರುಪದ್ಯ, ಕಾಲದ ಪಲ್ಲಟವೊಂದನ್ನು ತನ್ನ ಹೊಟ್ಟೆಗೆ ಹಾಕಿಕೊಂಡಿದೆ. <br /> <br /> ಕವಿ ಅಡ್ರೆಸ್ ಮಾಡುತ್ತಿರುವ `ನೀನು~ ಅದು ಯಾರು? ಯಾಕಾಗಿ ಎಚ್ಚರವಾಗಿ ಎಂದು ನಿವೇದಿಸುತ್ತಿದ್ದಾರೆ? ಪದ್ಯ ಯಾಕೆ ಗ್ರಾಫ್ ಕೊಡಲು ಆಸಕ್ತವಾಗಿದೆ? ನೀನು ಖಾಲಿಯಲ್ಲ ಎಂದೇಕೆ ಒತ್ತಿ ಹೇಳುತ್ತಿದೆ.<br /> <br /> ಕರಗುವ, ಕರೆಯುವ ಆವರಣದಲ್ಲೇ ಇರುವ ಹೋರಾಟವನ್ನು ಯಾಕೆ ನೆನಪಿಸುತ್ತಿದೆ?- ಈ ಪ್ರಶ್ನೆಗಳು ಹುಟ್ಟುತ್ತವೆ. `ಅಣುಕ್ಷಣ ಚರಿತೆ~ ಕವನ ಸಂಕಲನದಲ್ಲಿನ ಈ ಕಿರುಪದ್ಯವು ತೊಂಬತ್ತರ ದಶಕದ ಕೊನೆಗೆ ಸಿಗುತ್ತದೆ. ಆ ದಶಕವು ಕನ್ನಡ ಓದುಗ ವಲಯ ವಿಸ್ತರಣೆಯಾದ ಕಾಲವೂ ಆಗಿದೆ. <br /> <br /> ಓದುಗರು ಎನ್ನುವ ಜನಸಮುದಾಯದಿಂದ ದೂರಸರಿದು ಸ್ವಂತಮನೆಯೊಳಗೇ ಬಂಧಿಯಾಗಿದ್ದ ನವ್ಯರ `ನಾವೇ ಸರಿತನದ~ ಠೇಂಕಾರ ಕ್ಷೀಣಿಸುತ್ತಿತ್ತು. ದಲಿತ - ಬಂಡಾಯ ಮೂಮೆಂಟಿನ ಬಿಸಿಯನ್ನು ಉಂಡವರು, ಆ ಬಿಸಿಯನ್ನು ದೂರದಿಂದಲೇ ಸೋಕಿಸಿಕೊಂಡವರು ತೂಕೋದ್ರಿಕ್ತ ದನಿಯಲ್ಲಿ ಆರೋಪಿಸಿಕೊಂಡು, ಹೆಬ್ಬೊತ್ತಿಗೆಗಳನ್ನು ಬರೆಯಲಾರಂಭಿಸಿದ್ದರು. <br /> <br /> ಆಗಲೇ ಸ್ತ್ರೀ ಸೇರಿದಂತೆ, ಇತರ ದಮನಿತ ಸಮುದಾಯಗಳು ಶಿವಪ್ರಕಾಶರ ಕವಿತೆಯನ್ನು ಓದುವ, ದಕ್ಕಿಸಿಕೊಳ್ಳುವ ಹಂಬಲವನ್ನು ಹೆಚ್ಚಿಸಿಕೊಂಡವು. ಈ ಪ್ರಕ್ರಿಯೆಯ ಅರಿವಿರುವ ಕವಿ ಚರಿತ್ರೆಯಲ್ಲಿ ಸೋತವರಿಗೆ, ಕಣ್ಣೆದುರಾಗುತ್ತಿರುವ ಚರಿತೆಯನ್ನು ಕಾಣಿಸುತ್ತಾರೆ. ಅಲ್ಲಿ ಗತದ ಬಗೆಗೆ ವಿಮರ್ಶೆಯೂ ಕವಿತೆಯ ಸಂರಚನೆಯಲ್ಲಿ ನಡೆಯುತ್ತದೆ. ಹಾಗಾಗಿಯೇ,</p>.<p>ಗಳಿಗೆಗಳಿಗೆಗಳ ಈ ಹಲ್ಲೆಗಳ<br /> ಕೊನೆಗಳಿಗೆ ಎಂದು ಹೇಳೆ<br /> (ಓ ಪ್ರಾಣಶಕ್ತಿದೇವಿ)</p>.<p>ಎಂದು ಕೇಳುತ್ತದೆ ಕವಿತೆ. ಇಲ್ಲಿನ ಆರ್ತಧ್ವನಿಗೆ ಚರಿತ್ರೆಯ ನೆನಪೂ ಇದೆ. ಗಾಯಗಳ ಕಲೆಯೂ ಗೊತ್ತಿದೆ; ಹುಟ್ಟುತ್ತಿರುವ ದುಗುಡದ ಗಳಿಗೆಗಳೂ ಕಾಣುತ್ತಿವೆ. ನಿಟ್ಟುಸಿರಿನ ಲೆಕ್ಕವನ್ನು ಎಣಿಸಿಯೂ, ನಿಟ್ಟುಸಿರನ್ನು ಕಳೆಯುತ್ತಿರುವವರನ್ನು ಚರಿತ್ರೆಯ ಭಿತ್ತಿಯಲ್ಲಿ ದಾಖಲಿಸುತ್ತದೆ. ಈ ಬಗೆಯ ನೋಡು ಮತ್ತು ಓದು ಸಂಕಥನವಾಗುತ್ತಾ, ಇಂದಿನ ಅಗತ್ಯವಾಗಿಯೂ ಮುಂಚೂಣಿಗೆ ಬರುತ್ತಿದೆ. <br /> <br /> ಹಾಗೆ ನೋಡಿದರೆ, ಚರಿತ್ರೆಯೇ ಇಲ್ಲದವರಿಗೆ ಅಥವಾ ಚರಿತ್ರೆಯಲ್ಲಿ ಹೆಗಲುಕೊಟ್ಟು ನೊಂದಿರುವವರಿಗೆ ಶಿವಪ್ರಕಾಶರು ಕವಿತೆಯ ಮುಖೇನ ಅಡ್ರೆಸ್ ಮಾಡುತ್ತಾ, ಎಚ್ಚರಿಸುತ್ತಾ ನಿಷ್ಠೆಯನ್ನು ತೋರಿದರೆ, ಆಶಾದೇವಿಯವರು ಪಠ್ಯಗಳ ಓದಿನ ಮೂಲಕ ಚರಿತ್ರೆಯ ಗತಿಯನ್ನು ನಿರೂಪಿಸುತ್ತಾರೆ.<br /> <br /> `ನಡುವೆ ಸುಳಿವ ಆತ್ಮ~ ಎಂಬುದು ಲಿಂಗಭೇದವಿರದ, ರಾಜಕಾರಣವಿರದ, ನಿರಾಕಾರವೂ, ಮುಕ್ತವೂ ಆದ ರೂಪಕವೊಂದರ ಹುಡುಕಾಟದ ಯತ್ನವಾಗಿದೆ. ವಚನಕಾಲ ಎದುರಿಸಿದ ತಲ್ಲಣಗಳು ಹೊಸ ಆವೃತ್ತಿಯೊಂದಿಗೆ ಅನೇಕ ವಿನ್ಯಾಸಗಳಲ್ಲಿ ಕಾಡುತ್ತಿರುವುದರಿಂದ ಶೀರ್ಷಿಕೆಯು ಒಂದು ಅಪೇಕ್ಷೆಯಾಗಿ ಓದುಗರ ಮುಂದಿದೆ.<br /> <br /> `ಸ್ತ್ರೀ ಸಂಕಥನದ ಚಹರೆಗಳು~ ಎನ್ನುವ ಉಪಶೀರ್ಷಿಕೆಯು ಒಂದು ಅಧ್ಯಯನವನ್ನು ಪರಿಚಯಿಸುತ್ತಲೇ, ಓದಬೇಕಾದ ವಿಧಾನವನ್ನು ಸೂಚಿಸುತ್ತದೆ. ಈ ಸೂಚನೆ ಚೌಕಟ್ಟಿನ ಮಿತಿಯನ್ನು ಹಾಕಿಕೊಂಡಂತಿದೆ.<br /> <br /> ಸಂಕಥನದ ಚಹರೆಗಳನ್ನು ಹುಡುಕುವ ಪ್ರಯತ್ನದ ಭಾಗವಾಗಿ ಶಿವರಾಮಕಾರಂತ, ಕುವೆಂಪು, ಬೇಂದ್ರೆ, ಜಿ.ಪಿ.ರಾಜರತ್ನಂ, ಲಂಕೇಶ್, ತೇಜಸ್ವಿ ಅವರ ಪಠ್ಯಗಳು ಪರೀಕ್ಷೆಗೆ ಒಳಗಾಗಿವೆ. ಅಲ್ಲಿ ಪಠ್ಯದೊಂದಿಗೆ ಒಡನಾಟವೂ ಆದಂತಿದೆ; ಒಂದು ಅಂತರವೂ ಸಾಧ್ಯವಾಗಿದೆ. <br /> <br /> ಆದರೆ ಮಹಿಳಾ ಸಾಹಿತ್ಯದ ಕುರಿತು ಬರೆಯುವಾಗ ಪಠ್ಯ ಇರುವಂತೆ ತೋರಿದರೂ, ಹೈಜಾಕಾಗುತ್ತವೆ. (ಈ ಮಾತನ್ನು ಲಲ್ಲೇಶ್ವರಿ, ಸೀತೆ ಕುರಿತ ಬರಹಗಳನ್ನು ಹೊರತುಪಡಿಸಿ ಹೇಳಬೇಕಿದೆ). ಮಹಿಳಾ ಲೇಖಕಿಯರ ಪಠ್ಯದಲ್ಲಿ ಈ ಕಾಲಕ್ಕೆ ಬೇಕೆನಿಸುವ ಧೋರಣೆ, ಅಗತ್ಯಗಳನ್ನು ತಾತ್ವಿಕತೆಯ ಹೆಸರಿನಲ್ಲಿ ಹುಡುಕುವ ಕಡೆಗೆ ಹೆಚ್ಚು ಒಲವನ್ನು ತೋರಿದೆ. <br /> <br /> ಹಾಗೆ ತೋರುವಾಗ ಪಠ್ಯವನ್ನು ಎದುರು ನೋಡಿದರೂ, ಲೇಖಕಿಯರ ರಕ್ಷೆಯ ಗೂಡಲ್ಲಿ ಆಶ್ರಯಿಸಲು ಮುಂದಾಗುತ್ತದೆ. (ಈ ಸಂಗತಿಯನ್ನು `ಕರ್ತೃ ಕಟ್ಟಿಕೊಳ್ಳುವುದು~ ಎನ್ನುತ್ತಾರೆ ಕೆ.ವಿ.ನಾರಾಯಣ).<br /> <br /> ಬಂಡಾಯದ ಲೇಖಕರು `ಸಾಮಾಜಿಕ ನ್ಯಾಯ~ವನ್ನು ಕೃತಿಯ ಅಭಿವ್ಯಕ್ತಿಯಲ್ಲಿ ಓದಿನಲ್ಲಿ ತಂದುಕೊಂಡರು. ಆ ದಾರಿಯಲ್ಲಿ ಕರ್ತೃವಿನ ಸಂತತಿ ಹೆಚ್ಚಿಸಿಕೊಳ್ಳಲು ಉತ್ಸಾಹ ತೋರಿದ್ದರು; ಶ್ರಮವನ್ನೂ ಹಾಕಿದ್ದರು. <br /> <br /> ಆ ರೀತಿಯಲ್ಲಿ `ನಡುವೆ ಸುಳಿವ ಆತ್ಮ~ವು `ಸಾಮಾಜಿಕ ನ್ಯಾಯ~ವನ್ನು ನೇರ ಪಾಲಿಸದೆ, ಸಂಕಥನದ ಮೂಲಕ ಅಳವಡಿಸಿಕೊಂಡಿದೆ. ಇದರ ಅಡ್ಡಪರಿಣಾಮವನ್ನು ಹಿರಿಯ ಕವಯತ್ರಿಯರ ಕವಿತೆಗಳ ವಿಮರ್ಶೆಯಲ್ಲಿ ಕಾಣಬಹುದಾಗಿದೆ.<br /> <br /> `ಬದುಕಿನ ಧಾರಣ ಶಕ್ತಿಯ ಹುಡುಕಾಟ~ವನ್ನು ಸವಿತಾ ನಾಗಭೂಷಣರ ಕವಿತೆಗಳಲ್ಲಿ ಕಂಡಿರುವ ಬರಹ ಇಲ್ಲಿದೆ. ಸವಿತಾರವರ ಮೊದಲ ಸಂಕಲನ 1987ರಲ್ಲಿ ಪ್ರಕಟವಾಗಿದೆ. <br /> <br /> ಚಳವಳಿಯ ಕಾವು, ಬೀಸು ಹೇಳಿಕೆಗಳು, ಅನೇಕ ಸಾಮಾಜಿಕ ಒತ್ತಾಯಗಳು ಇದ್ದಾಗಲೂ, `ಬಿಡಿ ನನ್ನ ಪಾಡಿಗೆ ನನ್ನನ್ನು~ ಎಂದು ತಿಳಿಸುವ ಕವಯತ್ರಿ, ತಮ್ಮ ಹಾದಿಯನ್ನು ಸ್ವತಃ ಶೋಧಿಸಿಕೊಂಡವರು.<br /> <br /> ಕೌಟುಂಬಿಕ ನೆಲೆಯಲ್ಲಿ ನಿಂತುಕೊಂಡೇ ಸ್ವಲೋಕವೊಂದನ್ನು ಸ್ಥಾಪಿಸಿಕೊಂಡದ್ದು, ಆ ನಿಟ್ಟಿನಲ್ಲಿ ಹೆಣ್ಣಿಗೆ ಪರ್ಯಾಯವನ್ನು ಕಟ್ಟಿತೋರಿಸಿದ್ದು ಸವಿತಾರ ಕಾವ್ಯದ ವಿಶಿಷ್ಟತೆಯೇ ಆಗಿದೆ. <br /> <br /> ಈ ಮಾತುಗಳನ್ನು ಅವರ ಕಾವ್ಯದ ನಯಗಾರಿಕೆ, ನಿಲುವುಗಳಿಂದ ಹೇಳಬಹುದು. ಆದರೆ `ಮುಖ್ಯ ಕವಯತ್ರಿ~ ಎಂದುಕೊಳ್ಳುವಷ್ಟು ಶಕ್ತಿಯನ್ನು ಅವರ ಕವಿತೆಗಳು ಪಡೆದಿವೆಯೆ?<br /> <br /> `ಜೀವಛಲದ ವ್ಯಾಖ್ಯಾನ~ವನ್ನು ಪ್ರತಿಭಾ ನಂದಕುಮಾರ್ ಅವರ ಕವಿತೆಗಳಲ್ಲಿ ಕಂಡುಕೊಂಡಿರುವ ಬರಹವಿದೆ. ಹೆಣ್ಣಿಗೆ ಒಳಗೂ-ಹೊರಗೂ ಎಂಬುದಿಲ್ಲ ಎಂಬ ಘಾಟಿತನದಲ್ಲಿ ಕವಿತೆ ಬರೆದ ಪ್ರತಿಭಾರವರು, ಆ ಕಾರಣದಿಂದ ಹೆಚ್ಚು ಅಥೆಂಟಿಸಿಟಿಯನ್ನು ಪಡೆದುಕೊಂಡರು.<br /> <br /> ಆದರೆ ಅವರ ಕವಿತೆಗಳು ಆಧುನಿಕ ಸ್ತ್ರೀಯ ಪ್ರಖರತೆಯನ್ನು ತೊಟ್ಟುಕೊಳ್ಳಲು ನಿರತವಾದಂತೆಲ್ಲ, ಕವಿತೆಯ ಕಟ್ಟಡವೂ, ಫಾರ್ಮ್ನೊಂದಿಗೆ ಕುಸಿಯುತ್ತಾ ಬಂದಿದೆ. ಹೀಗಿರುವಾಗ, ಇಲ್ಲಿ ಉಲ್ಲೇಖಿಸಿರುವ ಕವಿತೆಗಳನ್ನು ಆಧರಿಸಿಯೂ ಪ್ರತಿಭಾರವರ ಕವಿತೆಗಳಿಗೆ ಕೊಡಮಾಡಿರುವ ಪ್ರಾಶಸ್ತ್ಯ ಪ್ರಶ್ನಾರ್ಹವಾಗಿದೆ. <br /> <br /> ಈ ಇಬ್ಬರು ಕವಯತ್ರಿಯರ ಕವಿತೆಗಳ ಸಹಾಯದಿಂದ ಆಶಾದೇವಿಯವರು, ನಮ್ಮ ಕಾಲದ `ಪೊಯೆಟಿಕ್ಸ್~ ಅನ್ನು ಪರೋಕ್ಷವಾಗಿ ಮಂಡಿಸುತ್ತಿದ್ದಾರೆ. ನಮ್ಮ ಕಾಲದ ಪೊಯೆಟಿಕ್ಸ್ ಇಷ್ಟು ದುರ್ಬಲವಾಗಿದೆಯೇ? ಆಗಿರಬೇಕೇ?<br /> <br /> `ಹೆಣ್ಣು ಮತ್ತು ಬದುಕಿನ ಕೇಂದ್ರಗಳ ಲೇಖಕಿ~ ಎನ್ನುವ ಬರಹವು ಸಾರಾ ಅಬೂಬಕರ್ ಅವರನ್ನೇ ಉದ್ದೇಶಿಸಿದಂತಿದೆ. `ಐತಿಹಾಸಿಕ ತುರ್ತು~ ಮತ್ತು `ಸನ್ನಿವೇಶ~ವನ್ನು ಪ್ರಧಾನವೆಂದು ಭಾವಿಸುವ ಈ ಬರಹ ಸಾರಾ ಅವರ ಕೃತಿಗಳನ್ನು ನೆಪಮಾತ್ರವಾಗಿ ಇಟ್ಟುಕೊಂಡಿದೆ ಅನಿಸುತ್ತದೆ.<br /> <br /> ವೈದೇಹಿಯವರ ಕಥೆಗಳೊಂದಿಗೆ ವೀಣಾರವರ ಕಥೆಗಳನ್ನು ಸಮೀಕರಿಸಿ ಹೇಳುವುದು ಕೂಡ ಮಿಸ್ಮ್ಯಾಚ್ ಆಗಿದೆ; ಹೆಚ್ಚು ಔಪಚಾರಿಕ ಎನಿಸುತ್ತದೆ. ಇದಲ್ಲದೆ ಕೆಲವು ಸಾಂದರ್ಭಿಕ ಮುನ್ನುಡಿ ಬರಹಗಳೂ ಇವೆ. <br /> <br /> ಈ ಕೃತಿಯಲ್ಲಿ `ಸೃಷ್ಟಿ~ ಮತ್ತು `ಸ್ಥಿತಿ~ ಎಂಬ ಎರಡು ವಿಭಾಗಗಳಿವೆ. ಸ್ತ್ರೀನೋಟದ `ಸೃಷ್ಟಿ~ಯ ಭಾಗದ ಬರಹಗಳಿಗಿಂತಲೂ, ಸ್ತ್ರೀಗೆ ವ್ಯಕ್ತಿತ್ವವನ್ನು ನಿರ್ಮಿಸಿಕೊಡುವಲ್ಲಿ, ಸ್ತ್ರೀ `ಸ್ಥಿತಿ~ಯ ಭಾಗದ ಬರಹಗಳು ಶಕ್ತವಾಗಿವೆ.<br /> <strong><br /> ನಡುವೆ ಸುಳಿವ ಆತ್ಮ</strong><br /> ಲೇ: ಡಾ. ಎಂ.ಎಸ್.ಆಶಾದೇವಿ<br /> ಪು: 151; ಬೆ: ರೂ. 105<br /> ಪ್ರ: ಅಹರ್ನಿಶಿ ಪ್ರಕಾಶನ, ವಿದ್ಯಾನಗರ, ಶಿವಮೊಗ್ಗ-577 204</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸ ತಲೆಮಾರಿನ ಡಾ. ಎಂ.ಎಸ್. ಆಶಾದೇವಿ ಅವರು ಪ್ರಬಂಧ, ಅನುವಾದ, ಸಂಸ್ಕೃತಿ ಚಿಂತನೆ, ವಿಮರ್ಶೆಯಲ್ಲಿ ಕ್ರಿಯಾಶೀಲರು. ಇವರ `ಸ್ತ್ರೀಮತವನುತ್ತರಿಸಲಾಗದೆ?~ ಎನ್ನುವ ವಿಮರ್ಶಾ ಸಂಕಲನ 2006ರಲ್ಲಿ ಪ್ರಕಟವಾಗಿತ್ತು. ಈಗ ಎರಡನೆ ವಿಮರ್ಶಾ ಸಂಕಲನವು `ನಡುವೆ ಸುಳಿವ ಆತ್ಮ~ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿದೆ.</p>.<p>ನಿಂತಿಲ್ಲ<br /> ಹಾದು ಬರುತ್ತಲಿದೆ<br /> ಇದೇನು?<br /> ಬಳಿಯಲ್ಲೇ ಸುಳಿದಾಡುತ್ತಿದೆ<br /> ಹೊಗೆಯೊ? ದಂಡಕಾರ್ಯಣವೊ?<br /> ಹೆಜ್ಜೆ ಕಿತ್ತು, ಹೆಜ್ಜೆ ಇಟ್ಟರಷ್ಟೇ<br /> ತಲುಪಬಹುದು ತುದಿಗೆ; ಅಲ್ಲಿಗೆ<br /> ಹೋಗುತ್ತಿದ್ದೇನೆ<br /> ನಡೆಯಬೇಕಿದೆ ನಾನು ಇನ್ನೂ<br /> ನಿಮಗೆ ತಿಳಿಸಿ ಹೋಗುವಷ್ಟು<br /> ನಿರಾಳವ ಉಳಿಸಿದಿರೇನು ನೀವು?</p>.<p>ಅನಿಸುವ ಹಾಗೆ, ಮೊದಲಿಗೆ ಸಂಕಲನದ ಮುಖತೋರದ ಮುಖಪುಟವೇ ಓದುಗರನ್ನು ಜಗ್ಗಿ ಮಾತನಾಡಿಸುತ್ತದೆ. ಸಂಕಲನದ ಬರಹಗಳ ದಿಕ್ಕನ್ನು ಒಂದೇ ಭಂಗಿಯಲ್ಲಿ ಸಮರ್ಥವಾಗಿಯೂ ದಾಟಿಸುತ್ತದೆ.<br /> <br /> ಬಂಡಾಯೋತ್ತರದ ದೀರ್ಘಾವಧಿಯ ಈ ಹೊತ್ತಿನಲ್ಲಿ ಹೊರಬರುತ್ತಿರುವ `ನಡುವೆ ಸುಳಿವ ಆತ್ಮ~ ಅನೇಕ ಏಳುಬೀಳುಗಳೊಂದಿಗೆ ಸ್ತ್ರೀತ್ವದ ಮುನ್ನಡೆಯನ್ನು ಕಟ್ಟಿಕೊಡುತ್ತದೆ. <br /> <br /> ಮುಖ್ಯವಾಗಿ ಪರಂಪರೆಯ ಆಸರೆಯೊಂದಿಗೆ, ತೊಂಬತ್ತರ ದಶಕದಿಂದೀಚೆಗೆ ಏರ್ಪಟ್ಟಿರುವ ಓದು-ವಿಮರ್ಶೆಯನ್ನು ಇಲ್ಲಿನ ಬರಹಗಳು ಮಂಡಿಸುತ್ತವೆ. ಹಾಗೆ ಮಂಡಿಸುತ್ತಿರುವ ಸಂದರ್ಭದಲ್ಲಿ ಕವಿ ಎಚ್.ಎಸ್.ಶಿವಪ್ರಕಾಶ್ ಅವರ ಕಿರುಪದ್ಯವೊಂದನ್ನು ನೆನಪಿಸುತ್ತದೆ:</p>.<p>ನೀನು ಮಲಗಿದ್ದೀಯ<br /> ಮೋಡಗಳ ಕೆಳಗೆ<br /> ಗಿರಿಯ ಹಾಗೆ<br /> ನಿನ್ನೊಳಗೆ ತುಂಬಿಕೊಂಡಿವೆ<br /> ಕಾಡಹೂಗಳು<br /> ಹಸಿರು ಮುಳ್ಳು<br /> ಕ್ರೂರ ಮೃಗಗಳು<br /> ಖನಿಜಗಳು</p>.<p>ಅಕ್ಕರೆಗೆ ಬಿದ್ದವರು ಡಬ್ಬಿ ಸಣ್ಣದಾದರೂ ಅನ್ನವನು ಅದುಮಿಟ್ಟು ತುಂಬಿಸಿದಂತೆ, ಆಡಿಯೂ ಮಿಗುವ ಮಾತು ಸಂಕೋಚದಲಿ ಒಳಸೇರಿಕೊಂಡಂತೆ, ದುಃಖದ ದಡದಲ್ಲಿ ತಂಗಿರುವ ಕವಿ ಜರೂರತ್ತಿನ ಮೇಲೆ ಸುದ್ದಿಯೊಂದನ್ನು ಕಳುಹಿಸುತ್ತಿರುವಂತೆ ಭಾಸವಾಗುವ ಮೇಲಿನ ಕಿರುಪದ್ಯ, ಕಾಲದ ಪಲ್ಲಟವೊಂದನ್ನು ತನ್ನ ಹೊಟ್ಟೆಗೆ ಹಾಕಿಕೊಂಡಿದೆ. <br /> <br /> ಕವಿ ಅಡ್ರೆಸ್ ಮಾಡುತ್ತಿರುವ `ನೀನು~ ಅದು ಯಾರು? ಯಾಕಾಗಿ ಎಚ್ಚರವಾಗಿ ಎಂದು ನಿವೇದಿಸುತ್ತಿದ್ದಾರೆ? ಪದ್ಯ ಯಾಕೆ ಗ್ರಾಫ್ ಕೊಡಲು ಆಸಕ್ತವಾಗಿದೆ? ನೀನು ಖಾಲಿಯಲ್ಲ ಎಂದೇಕೆ ಒತ್ತಿ ಹೇಳುತ್ತಿದೆ.<br /> <br /> ಕರಗುವ, ಕರೆಯುವ ಆವರಣದಲ್ಲೇ ಇರುವ ಹೋರಾಟವನ್ನು ಯಾಕೆ ನೆನಪಿಸುತ್ತಿದೆ?- ಈ ಪ್ರಶ್ನೆಗಳು ಹುಟ್ಟುತ್ತವೆ. `ಅಣುಕ್ಷಣ ಚರಿತೆ~ ಕವನ ಸಂಕಲನದಲ್ಲಿನ ಈ ಕಿರುಪದ್ಯವು ತೊಂಬತ್ತರ ದಶಕದ ಕೊನೆಗೆ ಸಿಗುತ್ತದೆ. ಆ ದಶಕವು ಕನ್ನಡ ಓದುಗ ವಲಯ ವಿಸ್ತರಣೆಯಾದ ಕಾಲವೂ ಆಗಿದೆ. <br /> <br /> ಓದುಗರು ಎನ್ನುವ ಜನಸಮುದಾಯದಿಂದ ದೂರಸರಿದು ಸ್ವಂತಮನೆಯೊಳಗೇ ಬಂಧಿಯಾಗಿದ್ದ ನವ್ಯರ `ನಾವೇ ಸರಿತನದ~ ಠೇಂಕಾರ ಕ್ಷೀಣಿಸುತ್ತಿತ್ತು. ದಲಿತ - ಬಂಡಾಯ ಮೂಮೆಂಟಿನ ಬಿಸಿಯನ್ನು ಉಂಡವರು, ಆ ಬಿಸಿಯನ್ನು ದೂರದಿಂದಲೇ ಸೋಕಿಸಿಕೊಂಡವರು ತೂಕೋದ್ರಿಕ್ತ ದನಿಯಲ್ಲಿ ಆರೋಪಿಸಿಕೊಂಡು, ಹೆಬ್ಬೊತ್ತಿಗೆಗಳನ್ನು ಬರೆಯಲಾರಂಭಿಸಿದ್ದರು. <br /> <br /> ಆಗಲೇ ಸ್ತ್ರೀ ಸೇರಿದಂತೆ, ಇತರ ದಮನಿತ ಸಮುದಾಯಗಳು ಶಿವಪ್ರಕಾಶರ ಕವಿತೆಯನ್ನು ಓದುವ, ದಕ್ಕಿಸಿಕೊಳ್ಳುವ ಹಂಬಲವನ್ನು ಹೆಚ್ಚಿಸಿಕೊಂಡವು. ಈ ಪ್ರಕ್ರಿಯೆಯ ಅರಿವಿರುವ ಕವಿ ಚರಿತ್ರೆಯಲ್ಲಿ ಸೋತವರಿಗೆ, ಕಣ್ಣೆದುರಾಗುತ್ತಿರುವ ಚರಿತೆಯನ್ನು ಕಾಣಿಸುತ್ತಾರೆ. ಅಲ್ಲಿ ಗತದ ಬಗೆಗೆ ವಿಮರ್ಶೆಯೂ ಕವಿತೆಯ ಸಂರಚನೆಯಲ್ಲಿ ನಡೆಯುತ್ತದೆ. ಹಾಗಾಗಿಯೇ,</p>.<p>ಗಳಿಗೆಗಳಿಗೆಗಳ ಈ ಹಲ್ಲೆಗಳ<br /> ಕೊನೆಗಳಿಗೆ ಎಂದು ಹೇಳೆ<br /> (ಓ ಪ್ರಾಣಶಕ್ತಿದೇವಿ)</p>.<p>ಎಂದು ಕೇಳುತ್ತದೆ ಕವಿತೆ. ಇಲ್ಲಿನ ಆರ್ತಧ್ವನಿಗೆ ಚರಿತ್ರೆಯ ನೆನಪೂ ಇದೆ. ಗಾಯಗಳ ಕಲೆಯೂ ಗೊತ್ತಿದೆ; ಹುಟ್ಟುತ್ತಿರುವ ದುಗುಡದ ಗಳಿಗೆಗಳೂ ಕಾಣುತ್ತಿವೆ. ನಿಟ್ಟುಸಿರಿನ ಲೆಕ್ಕವನ್ನು ಎಣಿಸಿಯೂ, ನಿಟ್ಟುಸಿರನ್ನು ಕಳೆಯುತ್ತಿರುವವರನ್ನು ಚರಿತ್ರೆಯ ಭಿತ್ತಿಯಲ್ಲಿ ದಾಖಲಿಸುತ್ತದೆ. ಈ ಬಗೆಯ ನೋಡು ಮತ್ತು ಓದು ಸಂಕಥನವಾಗುತ್ತಾ, ಇಂದಿನ ಅಗತ್ಯವಾಗಿಯೂ ಮುಂಚೂಣಿಗೆ ಬರುತ್ತಿದೆ. <br /> <br /> ಹಾಗೆ ನೋಡಿದರೆ, ಚರಿತ್ರೆಯೇ ಇಲ್ಲದವರಿಗೆ ಅಥವಾ ಚರಿತ್ರೆಯಲ್ಲಿ ಹೆಗಲುಕೊಟ್ಟು ನೊಂದಿರುವವರಿಗೆ ಶಿವಪ್ರಕಾಶರು ಕವಿತೆಯ ಮುಖೇನ ಅಡ್ರೆಸ್ ಮಾಡುತ್ತಾ, ಎಚ್ಚರಿಸುತ್ತಾ ನಿಷ್ಠೆಯನ್ನು ತೋರಿದರೆ, ಆಶಾದೇವಿಯವರು ಪಠ್ಯಗಳ ಓದಿನ ಮೂಲಕ ಚರಿತ್ರೆಯ ಗತಿಯನ್ನು ನಿರೂಪಿಸುತ್ತಾರೆ.<br /> <br /> `ನಡುವೆ ಸುಳಿವ ಆತ್ಮ~ ಎಂಬುದು ಲಿಂಗಭೇದವಿರದ, ರಾಜಕಾರಣವಿರದ, ನಿರಾಕಾರವೂ, ಮುಕ್ತವೂ ಆದ ರೂಪಕವೊಂದರ ಹುಡುಕಾಟದ ಯತ್ನವಾಗಿದೆ. ವಚನಕಾಲ ಎದುರಿಸಿದ ತಲ್ಲಣಗಳು ಹೊಸ ಆವೃತ್ತಿಯೊಂದಿಗೆ ಅನೇಕ ವಿನ್ಯಾಸಗಳಲ್ಲಿ ಕಾಡುತ್ತಿರುವುದರಿಂದ ಶೀರ್ಷಿಕೆಯು ಒಂದು ಅಪೇಕ್ಷೆಯಾಗಿ ಓದುಗರ ಮುಂದಿದೆ.<br /> <br /> `ಸ್ತ್ರೀ ಸಂಕಥನದ ಚಹರೆಗಳು~ ಎನ್ನುವ ಉಪಶೀರ್ಷಿಕೆಯು ಒಂದು ಅಧ್ಯಯನವನ್ನು ಪರಿಚಯಿಸುತ್ತಲೇ, ಓದಬೇಕಾದ ವಿಧಾನವನ್ನು ಸೂಚಿಸುತ್ತದೆ. ಈ ಸೂಚನೆ ಚೌಕಟ್ಟಿನ ಮಿತಿಯನ್ನು ಹಾಕಿಕೊಂಡಂತಿದೆ.<br /> <br /> ಸಂಕಥನದ ಚಹರೆಗಳನ್ನು ಹುಡುಕುವ ಪ್ರಯತ್ನದ ಭಾಗವಾಗಿ ಶಿವರಾಮಕಾರಂತ, ಕುವೆಂಪು, ಬೇಂದ್ರೆ, ಜಿ.ಪಿ.ರಾಜರತ್ನಂ, ಲಂಕೇಶ್, ತೇಜಸ್ವಿ ಅವರ ಪಠ್ಯಗಳು ಪರೀಕ್ಷೆಗೆ ಒಳಗಾಗಿವೆ. ಅಲ್ಲಿ ಪಠ್ಯದೊಂದಿಗೆ ಒಡನಾಟವೂ ಆದಂತಿದೆ; ಒಂದು ಅಂತರವೂ ಸಾಧ್ಯವಾಗಿದೆ. <br /> <br /> ಆದರೆ ಮಹಿಳಾ ಸಾಹಿತ್ಯದ ಕುರಿತು ಬರೆಯುವಾಗ ಪಠ್ಯ ಇರುವಂತೆ ತೋರಿದರೂ, ಹೈಜಾಕಾಗುತ್ತವೆ. (ಈ ಮಾತನ್ನು ಲಲ್ಲೇಶ್ವರಿ, ಸೀತೆ ಕುರಿತ ಬರಹಗಳನ್ನು ಹೊರತುಪಡಿಸಿ ಹೇಳಬೇಕಿದೆ). ಮಹಿಳಾ ಲೇಖಕಿಯರ ಪಠ್ಯದಲ್ಲಿ ಈ ಕಾಲಕ್ಕೆ ಬೇಕೆನಿಸುವ ಧೋರಣೆ, ಅಗತ್ಯಗಳನ್ನು ತಾತ್ವಿಕತೆಯ ಹೆಸರಿನಲ್ಲಿ ಹುಡುಕುವ ಕಡೆಗೆ ಹೆಚ್ಚು ಒಲವನ್ನು ತೋರಿದೆ. <br /> <br /> ಹಾಗೆ ತೋರುವಾಗ ಪಠ್ಯವನ್ನು ಎದುರು ನೋಡಿದರೂ, ಲೇಖಕಿಯರ ರಕ್ಷೆಯ ಗೂಡಲ್ಲಿ ಆಶ್ರಯಿಸಲು ಮುಂದಾಗುತ್ತದೆ. (ಈ ಸಂಗತಿಯನ್ನು `ಕರ್ತೃ ಕಟ್ಟಿಕೊಳ್ಳುವುದು~ ಎನ್ನುತ್ತಾರೆ ಕೆ.ವಿ.ನಾರಾಯಣ).<br /> <br /> ಬಂಡಾಯದ ಲೇಖಕರು `ಸಾಮಾಜಿಕ ನ್ಯಾಯ~ವನ್ನು ಕೃತಿಯ ಅಭಿವ್ಯಕ್ತಿಯಲ್ಲಿ ಓದಿನಲ್ಲಿ ತಂದುಕೊಂಡರು. ಆ ದಾರಿಯಲ್ಲಿ ಕರ್ತೃವಿನ ಸಂತತಿ ಹೆಚ್ಚಿಸಿಕೊಳ್ಳಲು ಉತ್ಸಾಹ ತೋರಿದ್ದರು; ಶ್ರಮವನ್ನೂ ಹಾಕಿದ್ದರು. <br /> <br /> ಆ ರೀತಿಯಲ್ಲಿ `ನಡುವೆ ಸುಳಿವ ಆತ್ಮ~ವು `ಸಾಮಾಜಿಕ ನ್ಯಾಯ~ವನ್ನು ನೇರ ಪಾಲಿಸದೆ, ಸಂಕಥನದ ಮೂಲಕ ಅಳವಡಿಸಿಕೊಂಡಿದೆ. ಇದರ ಅಡ್ಡಪರಿಣಾಮವನ್ನು ಹಿರಿಯ ಕವಯತ್ರಿಯರ ಕವಿತೆಗಳ ವಿಮರ್ಶೆಯಲ್ಲಿ ಕಾಣಬಹುದಾಗಿದೆ.<br /> <br /> `ಬದುಕಿನ ಧಾರಣ ಶಕ್ತಿಯ ಹುಡುಕಾಟ~ವನ್ನು ಸವಿತಾ ನಾಗಭೂಷಣರ ಕವಿತೆಗಳಲ್ಲಿ ಕಂಡಿರುವ ಬರಹ ಇಲ್ಲಿದೆ. ಸವಿತಾರವರ ಮೊದಲ ಸಂಕಲನ 1987ರಲ್ಲಿ ಪ್ರಕಟವಾಗಿದೆ. <br /> <br /> ಚಳವಳಿಯ ಕಾವು, ಬೀಸು ಹೇಳಿಕೆಗಳು, ಅನೇಕ ಸಾಮಾಜಿಕ ಒತ್ತಾಯಗಳು ಇದ್ದಾಗಲೂ, `ಬಿಡಿ ನನ್ನ ಪಾಡಿಗೆ ನನ್ನನ್ನು~ ಎಂದು ತಿಳಿಸುವ ಕವಯತ್ರಿ, ತಮ್ಮ ಹಾದಿಯನ್ನು ಸ್ವತಃ ಶೋಧಿಸಿಕೊಂಡವರು.<br /> <br /> ಕೌಟುಂಬಿಕ ನೆಲೆಯಲ್ಲಿ ನಿಂತುಕೊಂಡೇ ಸ್ವಲೋಕವೊಂದನ್ನು ಸ್ಥಾಪಿಸಿಕೊಂಡದ್ದು, ಆ ನಿಟ್ಟಿನಲ್ಲಿ ಹೆಣ್ಣಿಗೆ ಪರ್ಯಾಯವನ್ನು ಕಟ್ಟಿತೋರಿಸಿದ್ದು ಸವಿತಾರ ಕಾವ್ಯದ ವಿಶಿಷ್ಟತೆಯೇ ಆಗಿದೆ. <br /> <br /> ಈ ಮಾತುಗಳನ್ನು ಅವರ ಕಾವ್ಯದ ನಯಗಾರಿಕೆ, ನಿಲುವುಗಳಿಂದ ಹೇಳಬಹುದು. ಆದರೆ `ಮುಖ್ಯ ಕವಯತ್ರಿ~ ಎಂದುಕೊಳ್ಳುವಷ್ಟು ಶಕ್ತಿಯನ್ನು ಅವರ ಕವಿತೆಗಳು ಪಡೆದಿವೆಯೆ?<br /> <br /> `ಜೀವಛಲದ ವ್ಯಾಖ್ಯಾನ~ವನ್ನು ಪ್ರತಿಭಾ ನಂದಕುಮಾರ್ ಅವರ ಕವಿತೆಗಳಲ್ಲಿ ಕಂಡುಕೊಂಡಿರುವ ಬರಹವಿದೆ. ಹೆಣ್ಣಿಗೆ ಒಳಗೂ-ಹೊರಗೂ ಎಂಬುದಿಲ್ಲ ಎಂಬ ಘಾಟಿತನದಲ್ಲಿ ಕವಿತೆ ಬರೆದ ಪ್ರತಿಭಾರವರು, ಆ ಕಾರಣದಿಂದ ಹೆಚ್ಚು ಅಥೆಂಟಿಸಿಟಿಯನ್ನು ಪಡೆದುಕೊಂಡರು.<br /> <br /> ಆದರೆ ಅವರ ಕವಿತೆಗಳು ಆಧುನಿಕ ಸ್ತ್ರೀಯ ಪ್ರಖರತೆಯನ್ನು ತೊಟ್ಟುಕೊಳ್ಳಲು ನಿರತವಾದಂತೆಲ್ಲ, ಕವಿತೆಯ ಕಟ್ಟಡವೂ, ಫಾರ್ಮ್ನೊಂದಿಗೆ ಕುಸಿಯುತ್ತಾ ಬಂದಿದೆ. ಹೀಗಿರುವಾಗ, ಇಲ್ಲಿ ಉಲ್ಲೇಖಿಸಿರುವ ಕವಿತೆಗಳನ್ನು ಆಧರಿಸಿಯೂ ಪ್ರತಿಭಾರವರ ಕವಿತೆಗಳಿಗೆ ಕೊಡಮಾಡಿರುವ ಪ್ರಾಶಸ್ತ್ಯ ಪ್ರಶ್ನಾರ್ಹವಾಗಿದೆ. <br /> <br /> ಈ ಇಬ್ಬರು ಕವಯತ್ರಿಯರ ಕವಿತೆಗಳ ಸಹಾಯದಿಂದ ಆಶಾದೇವಿಯವರು, ನಮ್ಮ ಕಾಲದ `ಪೊಯೆಟಿಕ್ಸ್~ ಅನ್ನು ಪರೋಕ್ಷವಾಗಿ ಮಂಡಿಸುತ್ತಿದ್ದಾರೆ. ನಮ್ಮ ಕಾಲದ ಪೊಯೆಟಿಕ್ಸ್ ಇಷ್ಟು ದುರ್ಬಲವಾಗಿದೆಯೇ? ಆಗಿರಬೇಕೇ?<br /> <br /> `ಹೆಣ್ಣು ಮತ್ತು ಬದುಕಿನ ಕೇಂದ್ರಗಳ ಲೇಖಕಿ~ ಎನ್ನುವ ಬರಹವು ಸಾರಾ ಅಬೂಬಕರ್ ಅವರನ್ನೇ ಉದ್ದೇಶಿಸಿದಂತಿದೆ. `ಐತಿಹಾಸಿಕ ತುರ್ತು~ ಮತ್ತು `ಸನ್ನಿವೇಶ~ವನ್ನು ಪ್ರಧಾನವೆಂದು ಭಾವಿಸುವ ಈ ಬರಹ ಸಾರಾ ಅವರ ಕೃತಿಗಳನ್ನು ನೆಪಮಾತ್ರವಾಗಿ ಇಟ್ಟುಕೊಂಡಿದೆ ಅನಿಸುತ್ತದೆ.<br /> <br /> ವೈದೇಹಿಯವರ ಕಥೆಗಳೊಂದಿಗೆ ವೀಣಾರವರ ಕಥೆಗಳನ್ನು ಸಮೀಕರಿಸಿ ಹೇಳುವುದು ಕೂಡ ಮಿಸ್ಮ್ಯಾಚ್ ಆಗಿದೆ; ಹೆಚ್ಚು ಔಪಚಾರಿಕ ಎನಿಸುತ್ತದೆ. ಇದಲ್ಲದೆ ಕೆಲವು ಸಾಂದರ್ಭಿಕ ಮುನ್ನುಡಿ ಬರಹಗಳೂ ಇವೆ. <br /> <br /> ಈ ಕೃತಿಯಲ್ಲಿ `ಸೃಷ್ಟಿ~ ಮತ್ತು `ಸ್ಥಿತಿ~ ಎಂಬ ಎರಡು ವಿಭಾಗಗಳಿವೆ. ಸ್ತ್ರೀನೋಟದ `ಸೃಷ್ಟಿ~ಯ ಭಾಗದ ಬರಹಗಳಿಗಿಂತಲೂ, ಸ್ತ್ರೀಗೆ ವ್ಯಕ್ತಿತ್ವವನ್ನು ನಿರ್ಮಿಸಿಕೊಡುವಲ್ಲಿ, ಸ್ತ್ರೀ `ಸ್ಥಿತಿ~ಯ ಭಾಗದ ಬರಹಗಳು ಶಕ್ತವಾಗಿವೆ.<br /> <strong><br /> ನಡುವೆ ಸುಳಿವ ಆತ್ಮ</strong><br /> ಲೇ: ಡಾ. ಎಂ.ಎಸ್.ಆಶಾದೇವಿ<br /> ಪು: 151; ಬೆ: ರೂ. 105<br /> ಪ್ರ: ಅಹರ್ನಿಶಿ ಪ್ರಕಾಶನ, ವಿದ್ಯಾನಗರ, ಶಿವಮೊಗ್ಗ-577 204</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>