ಡಾ.ಬಾನಂದೂರು ಕೆಂಪಯ್ಯ ಏಕತಾರಿ ನುಡಿಸುತ್ತಿದ್ದರೆ ಹೃದಯ ಮಿಡಿಯುತ್ತದೆ. ಅವರ ಎತ್ತರದ ಧ್ವನಿ, ಕಂಚಿನ ಕಂಠ ಮನಸೂರೆಗೊಳ್ಳುತ್ತದೆ. ಬಿದಿರು ನಾನಾರಿಗಲ್ಲಾದವಳು, ಚಲ್ಲಿದರೂ ಮಲ್ಲೀಗೆಯಾ, ತಿಂಗಾತಿಂಗಳಿಗೆ ಚಂದಾ ನಂಜನಗೂಡು, ಎಲ್ಲೋ ಜೋಗಪ್ಪ ನಿನ್ನರಮನೆ ಮುಂತಾದ ಗೀತೆಗಳಿಗೆ ಧ್ವನಿಯಾಗಿದ್ದಾರೆ. ದೇಶವಿದೇಶಗಳಲ್ಲಿ ಈ ಹಾಡುಗಳನ್ನು ಹಾಡಿದ್ಧಾರೆ. ಬೆಂಗಳೂರು, ಧಾರವಾಡ, ಕಲಬುರ್ಗಿ, ತ್ರಿವೇಂಡ್ರಂ ಆಕಾಶವಾಣಿ, ದೂರದರ್ಶನ ಕೇಂದ್ರಗಳಲ್ಲಿ ಕೆಲಸ ಮಾಡಿರುವ ಕೆಂಪಯ್ಯ ಜಾನಪದ ಕ್ಷೇತ್ರಕ್ಕೆ ಬಲುದೊಡ್ಡ ಕೊಡುಗೆ ಕೊಟ್ಟಿದ್ದಾರೆ.