ಈ ನಿರ್ಧಾರವನ್ನು ವಿದ್ವಾನ್ ಕದ್ರಿ ಗೋಪಾಲನಾಥ್ ಅವರೊಂದಿಗೆ ಹಂಚಿಕೊಂಡರು. ಆದರೆ ಕದ್ರಿ ಗೋಪಾಲನಾಥರು ಹೇಳಿದ ಮಾತಿನಿಂದ ಅವರು ತಮ್ಮ ನಿರ್ಧಾರವನ್ನು ವಾಪಸ್ ಪಡೆದರು. ‘ಆಭರಣ ತಯಾರಿಸಲು ಬೇಕಾದಷ್ಟು ಜನ ಸಿಗುತ್ತಾರೆ, ಆದರೆ ಮೋರ್ಚಿಂಗ್ ನುಡಿಸಲು ಬೇರಾರೂ ಸಿಗುವುದಿಲ್ಲ, ನೀವೇ ನುಡಿಸಬೇಕು’ ಎಂದು ಕದ್ರಿ ಗೋಪಾಲನಾಥ್ ಹೇಳಿದ್ದರು. ನಂತರ ರಾಜಶೇಖರ್ ಅವರು, ಈ ಪುಟಾಣಿ ವಾದ್ಯದಲ್ಲಿ ಏನೋ ವಿಶೇಷ ಇದೆ ಎಂದುಕೊಳ್ಳುತ್ತಾ ವಾದ್ಯದ ಆಳಕ್ಕಿಳಿಯುತ್ತಾರೆ. ಸಾಧನೆಯತ್ತ ಹೆಜ್ಜೆ ಇಡುತ್ತಾರೆ. ವಾದ್ಯಕ್ಕೆ ತಮ್ಮ ಬದುಕನ್ನು ಮುಡುಪಾಗಿಡುತ್ತಾರೆ.