<p>ದೂರುಗಳಿಲ್ಲ ಒಡೆಯ<br />ಮೈಮುರಿದು ಮಣ್ಣಲ್ಲೆ ಉಳಿದು<br />ಉಪ್ಪುಂಡ ದೇಹ ಜೀಯ<br />ಒಡೆತನ ದೂರದ ಮಾತು<br />ಗಾಳಿಯ ನೇಣು ಹಾಕಿರುವ ಕೊಲೆಪಾತಕರಿಗೆ<br />ಸದ್ಗತಿ ಕೊಡು</p>.<p>ದಯೆಯ ಮೂಲ ಹುಡುಕಿದೆ ಒಡೆಯ<br />ಜಗದ ಕೋಟಿ ಹೃದಯಗಳು<br />ಬೋರ್ಡ್ ಹಾಕಿಕೊಂಡಿವೆ ಅಲ್ಲಿ<br />ದಯೆಯ ಸುಳಿವಿರಲಿಲ್ಲ<br />ಬಡವನ ಅನ್ನದ ತಟ್ಟೆಯಲ್ಲಿ ಅದು<br />ಪ್ರಶಾಂತವಾಗಿ ನಗುತಿತ್ತು</p>.<p>ಏನ ಹೇಳಲಿ ಒಡೆಯ<br />ಈ ಒಡೆದ ಹೃದಯಗಳ ರೋಧನ<br />ಬೇಕುಗಳ ಅಗಾಧ ಮಾಯೆಯೊಳಗೆ<br />ಮಕ್ಕಳಂತೆ ಕಿತ್ತಾಡುವ ದೊಡ್ಡವರ ಸಣ್ಣತನ<br />ಉದಾರತೆಯ ಮೂಲವೆಂದು ಹೇಳುತ್ತಾರೆ<br />ತಾಯಿಯ ಹೃದಯ ಬಿಟ್ಟು ಅದು ಎಲ್ಲೂ ಕಾಣಲಿಲ್ಲ</p>.<p>ನಾನು ನಾನು ಎಂದು ಮೆರೆಯುತ್ತಾರೆ ಒಡೆಯ<br />ನೀನು ಕೊಟ್ಟ ಪ್ರಾಣ, ತನು, ಮನ<br />ಈ ಇಳೆ, ಈ ಫಲ, ಈ ಜಲ, ಗಾಳಿ ಮಣ್ಣು<br />ಯಾರು ಹೊತ್ತುತಂದಿದ್ದಾರೆ<br />ನನ್ನದೂ ನನ್ನದೆಂದು ಎಲ್ಲಾ ಬಿಟ್ಟು ಹೊರಡುತ್ತಾರೆ<br />ಕೊಡುವ ಕೈಗಳಲ್ಲಿ, ಹರಸುವ ಹೃದಯದಲ್ಲಿ<br />ಮಮತೆಯ ಕಂಗಳಲ್ಲಿ ನೀನಿರುವುದ ಕಂಡೆ</p>.<p>ಒಡೆಯ ದೂರುಗಳಿಲ್ಲ, ದುಮ್ಮಾನವಿಲ್ಲ<br />ದುಃಖವೂ ಇಲ್ಲ<br />ನೀ ಇರುವ ಜಾಗ ತಿಳಿಸಿದ ನಿನಗೆ<br />ಕೈಮುಗಿಯುವುದಿಲ್ಲ ಕ್ಷಮಿಸು<br />ನೀನಿರುವ ಜಾಗಗಳನ್ನು ವಿಸ್ತರಿಸುವ<br />ಶಕ್ತಿ ನೀಡು ಎಂದು ಬೇಡುವೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೂರುಗಳಿಲ್ಲ ಒಡೆಯ<br />ಮೈಮುರಿದು ಮಣ್ಣಲ್ಲೆ ಉಳಿದು<br />ಉಪ್ಪುಂಡ ದೇಹ ಜೀಯ<br />ಒಡೆತನ ದೂರದ ಮಾತು<br />ಗಾಳಿಯ ನೇಣು ಹಾಕಿರುವ ಕೊಲೆಪಾತಕರಿಗೆ<br />ಸದ್ಗತಿ ಕೊಡು</p>.<p>ದಯೆಯ ಮೂಲ ಹುಡುಕಿದೆ ಒಡೆಯ<br />ಜಗದ ಕೋಟಿ ಹೃದಯಗಳು<br />ಬೋರ್ಡ್ ಹಾಕಿಕೊಂಡಿವೆ ಅಲ್ಲಿ<br />ದಯೆಯ ಸುಳಿವಿರಲಿಲ್ಲ<br />ಬಡವನ ಅನ್ನದ ತಟ್ಟೆಯಲ್ಲಿ ಅದು<br />ಪ್ರಶಾಂತವಾಗಿ ನಗುತಿತ್ತು</p>.<p>ಏನ ಹೇಳಲಿ ಒಡೆಯ<br />ಈ ಒಡೆದ ಹೃದಯಗಳ ರೋಧನ<br />ಬೇಕುಗಳ ಅಗಾಧ ಮಾಯೆಯೊಳಗೆ<br />ಮಕ್ಕಳಂತೆ ಕಿತ್ತಾಡುವ ದೊಡ್ಡವರ ಸಣ್ಣತನ<br />ಉದಾರತೆಯ ಮೂಲವೆಂದು ಹೇಳುತ್ತಾರೆ<br />ತಾಯಿಯ ಹೃದಯ ಬಿಟ್ಟು ಅದು ಎಲ್ಲೂ ಕಾಣಲಿಲ್ಲ</p>.<p>ನಾನು ನಾನು ಎಂದು ಮೆರೆಯುತ್ತಾರೆ ಒಡೆಯ<br />ನೀನು ಕೊಟ್ಟ ಪ್ರಾಣ, ತನು, ಮನ<br />ಈ ಇಳೆ, ಈ ಫಲ, ಈ ಜಲ, ಗಾಳಿ ಮಣ್ಣು<br />ಯಾರು ಹೊತ್ತುತಂದಿದ್ದಾರೆ<br />ನನ್ನದೂ ನನ್ನದೆಂದು ಎಲ್ಲಾ ಬಿಟ್ಟು ಹೊರಡುತ್ತಾರೆ<br />ಕೊಡುವ ಕೈಗಳಲ್ಲಿ, ಹರಸುವ ಹೃದಯದಲ್ಲಿ<br />ಮಮತೆಯ ಕಂಗಳಲ್ಲಿ ನೀನಿರುವುದ ಕಂಡೆ</p>.<p>ಒಡೆಯ ದೂರುಗಳಿಲ್ಲ, ದುಮ್ಮಾನವಿಲ್ಲ<br />ದುಃಖವೂ ಇಲ್ಲ<br />ನೀ ಇರುವ ಜಾಗ ತಿಳಿಸಿದ ನಿನಗೆ<br />ಕೈಮುಗಿಯುವುದಿಲ್ಲ ಕ್ಷಮಿಸು<br />ನೀನಿರುವ ಜಾಗಗಳನ್ನು ವಿಸ್ತರಿಸುವ<br />ಶಕ್ತಿ ನೀಡು ಎಂದು ಬೇಡುವೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>