<p><strong>ಮಂಡ್ಯ:</strong> ಬೆಳಿಗ್ಗೆಯಿಂದ ರಾತ್ರಿವರೆಗೆ ಭಾಷಣಗಳು, ವಿಚಾರಗೋಷ್ಠಿಗಳಲ್ಲಿ ತಲ್ಲೀನರಾಗಿದ್ದ ಸಹಸ್ರಾರು ಮಂದಿಗೆ ‘ನುಡಿ ಜಾತ್ರೆಯಲ್ಲಿ ಸ್ವರ ಯಾತ್ರೆ’ ಎಂಬ ಸಂಗೀತ–ನೃತ್ಯ ಕಾರ್ಯಕ್ರಮವು ಮನರಂಜನೆಯ ರಸದೌತಣವನ್ನು ಉಣಬಡಿಸಿತು.</p><p>ರಾತ್ರಿ 8ರ ವೇಳೆಗೆ ಶುರುವಾದ ಗಾಯನ–ನೃತ್ಯ ಕಾರ್ಯಕ್ರಮ ತಡರಾತ್ರಿವರೆಗೂ ನಡೆಯಿತು. ಸಂಗೀತ ನಿರ್ದೇಶಕ ಸಾಧು ಕೋಕಿಲ ತಂಡದ ಗಾಯಕರು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.</p><p>ಕನ್ನಡ ಭಾಷೆಯ ಸೊಬಗು ಮತ್ತು ಕನ್ನಡ ನಾಡಿನ ವೈವಿಧ್ಯತೆಯನ್ನು ಬಿಂಬಿಸುವ ಹಾಡುಗಳು ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಶುಕ್ರವಾರ ಸಂಜೆ ಜನರನ್ನು ರಂಜಿಸಿತು. ಎದೆ ಝಲ್ಲೆನಿಸುವಂತ ಸಂಗೀತದ ಬೀಟ್ಗಳಿಗೆ ಜನ ಕೇಕೆ, ಚಪ್ಪಾಳೆ, ಶಿಳ್ಳೆ ಹೊಡೆದು ಸಂಭ್ರಮಿಸಿದರು.</p><p>ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣ, ಉಷಾ ಕೋಕಿಲ, ಸಾಧು ಕೋಕಿಲ ಮತ್ತಿತರರು ಚಲನಚಿತ್ರ ಗೀತೆ, ಜಾನಪದ ಶೈಲಿಯ ಗೀತೆಗಳ ಗಾಯನದ ಮೂಲಕ ಶ್ರೋತೃಗಳ ಮನಕ್ಕೆ ಮುದ ನೀಡಿದರು.</p><p>‘ಹಾಡಿದವರ ಮನವಾ ಬಲ್ಲೆ, ನೀಡಿದವರ ನಿಜವಾ ಬಲ್ಲೆ...ಸಿದ್ದಯ್ಯ ಸ್ವಾಮಿ ಬಂದ...’ ಹಾಡನ್ನು ತಾರಕ ಸ್ವರದಲ್ಲಿ ಹಾಡಿದ ಉಷಾ ಕೋಕಿಲ ಅವರು ನಂತರ ‘ನಾನು ಕೋಳಿಕೆ ರಂಗಾ...’ದ ಮೂಲಕ ಗಮನ ಸೆಳೆದರು.</p><p>ನಂತರ ಸಾಧು ಕೋಕಿಲ ಅವರು ‘ಕನ್ನಡಾ....ರೋಮಾಂಚನವೀ ಕನ್ನಡ..’ ಎಂಬ ಹಾಡಿನ ಮೂಲಕ ಕನ್ನಡಿಗರ ಹೃದಯಕ್ಕೆ ಲಗ್ಗೆ ಇರಿಸಿದರು. ರಾಜೇಶ್ ಕೃಷ್ಣ ಹಾಡಿದ ‘ಉಸಿರೇ, ಉಸಿರೇ ನೀ ಉಸಿರ ಕೊಲ್ಲಬೇಡ’ ಎಂಬ ಹಾಡಿಗೆ ಚಪ್ಪಾಳೆ ಮತ್ತು ಶಿಳ್ಳೆಗಳ ಮೂಲಕ ಜನರು ಪ್ರೋತ್ಸಾಹ ತುಂಬಿದರು.</p><p>‘ಈ ವರ್ಷ ಇಷ್ಟೊಂದು ಸಂಖ್ಯೆಯ ಜನ ಸೇರಿದ ಕಾರ್ಯಕ್ರಮ ನನಗೆ ಇದೇ ಮೊದಲು’ ಎಂದು ಹೇಳಿ ರಾಜೇಶ್ ಕೃಷ್ಣನ್ ಮಂಡ್ಯದ ಜನರ ಅಭಿಮಾನಕ್ಕೆ ಧನ್ಯವಾದ ಹೇಳಿದರು. </p><p><strong>ಕನ್ನಡ ರೋಮಾಂಚನವೀ ಕನ್ನಡ..</strong></p><p>ಕಾರ್ಯಕ್ರಮದ ಆರಂಭಕ್ಕೂ ಮೊದಲು ಮಕ್ಕಳ ನೃತ್ಯ ಕಾರ್ಯಕ್ರಮದ ಮೂಲಕ ಮೊದಲ ದಿನದ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ಸಿಕ್ಕಿತು. ನಾಡಿನ ಉದ್ದಗಲದ ಸಾಂಸ್ಕೃತಿಕ ವೈಭವವನ್ನು ಮಕ್ಕಳು ನಾಟ್ಯದ ಮೂಲಕ ಪ್ರಸ್ತುತಪಡಿಸಿದರು.</p><p>ಉದ್ಘಾಟಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ವಿಧಾನ ಸಭೆಯಲ್ಲಿ ಯಾವುದೋ ಸಂಸ್ಕೃತಿಯ ಬಗ್ಗೆ ಮಾತನಾಡುತ್ತಾರೆ. ಇಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳೇ ಬೇರೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ಬೆಳಿಗ್ಗೆಯಿಂದ ರಾತ್ರಿವರೆಗೆ ಭಾಷಣಗಳು, ವಿಚಾರಗೋಷ್ಠಿಗಳಲ್ಲಿ ತಲ್ಲೀನರಾಗಿದ್ದ ಸಹಸ್ರಾರು ಮಂದಿಗೆ ‘ನುಡಿ ಜಾತ್ರೆಯಲ್ಲಿ ಸ್ವರ ಯಾತ್ರೆ’ ಎಂಬ ಸಂಗೀತ–ನೃತ್ಯ ಕಾರ್ಯಕ್ರಮವು ಮನರಂಜನೆಯ ರಸದೌತಣವನ್ನು ಉಣಬಡಿಸಿತು.</p><p>ರಾತ್ರಿ 8ರ ವೇಳೆಗೆ ಶುರುವಾದ ಗಾಯನ–ನೃತ್ಯ ಕಾರ್ಯಕ್ರಮ ತಡರಾತ್ರಿವರೆಗೂ ನಡೆಯಿತು. ಸಂಗೀತ ನಿರ್ದೇಶಕ ಸಾಧು ಕೋಕಿಲ ತಂಡದ ಗಾಯಕರು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.</p><p>ಕನ್ನಡ ಭಾಷೆಯ ಸೊಬಗು ಮತ್ತು ಕನ್ನಡ ನಾಡಿನ ವೈವಿಧ್ಯತೆಯನ್ನು ಬಿಂಬಿಸುವ ಹಾಡುಗಳು ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಶುಕ್ರವಾರ ಸಂಜೆ ಜನರನ್ನು ರಂಜಿಸಿತು. ಎದೆ ಝಲ್ಲೆನಿಸುವಂತ ಸಂಗೀತದ ಬೀಟ್ಗಳಿಗೆ ಜನ ಕೇಕೆ, ಚಪ್ಪಾಳೆ, ಶಿಳ್ಳೆ ಹೊಡೆದು ಸಂಭ್ರಮಿಸಿದರು.</p><p>ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣ, ಉಷಾ ಕೋಕಿಲ, ಸಾಧು ಕೋಕಿಲ ಮತ್ತಿತರರು ಚಲನಚಿತ್ರ ಗೀತೆ, ಜಾನಪದ ಶೈಲಿಯ ಗೀತೆಗಳ ಗಾಯನದ ಮೂಲಕ ಶ್ರೋತೃಗಳ ಮನಕ್ಕೆ ಮುದ ನೀಡಿದರು.</p><p>‘ಹಾಡಿದವರ ಮನವಾ ಬಲ್ಲೆ, ನೀಡಿದವರ ನಿಜವಾ ಬಲ್ಲೆ...ಸಿದ್ದಯ್ಯ ಸ್ವಾಮಿ ಬಂದ...’ ಹಾಡನ್ನು ತಾರಕ ಸ್ವರದಲ್ಲಿ ಹಾಡಿದ ಉಷಾ ಕೋಕಿಲ ಅವರು ನಂತರ ‘ನಾನು ಕೋಳಿಕೆ ರಂಗಾ...’ದ ಮೂಲಕ ಗಮನ ಸೆಳೆದರು.</p><p>ನಂತರ ಸಾಧು ಕೋಕಿಲ ಅವರು ‘ಕನ್ನಡಾ....ರೋಮಾಂಚನವೀ ಕನ್ನಡ..’ ಎಂಬ ಹಾಡಿನ ಮೂಲಕ ಕನ್ನಡಿಗರ ಹೃದಯಕ್ಕೆ ಲಗ್ಗೆ ಇರಿಸಿದರು. ರಾಜೇಶ್ ಕೃಷ್ಣ ಹಾಡಿದ ‘ಉಸಿರೇ, ಉಸಿರೇ ನೀ ಉಸಿರ ಕೊಲ್ಲಬೇಡ’ ಎಂಬ ಹಾಡಿಗೆ ಚಪ್ಪಾಳೆ ಮತ್ತು ಶಿಳ್ಳೆಗಳ ಮೂಲಕ ಜನರು ಪ್ರೋತ್ಸಾಹ ತುಂಬಿದರು.</p><p>‘ಈ ವರ್ಷ ಇಷ್ಟೊಂದು ಸಂಖ್ಯೆಯ ಜನ ಸೇರಿದ ಕಾರ್ಯಕ್ರಮ ನನಗೆ ಇದೇ ಮೊದಲು’ ಎಂದು ಹೇಳಿ ರಾಜೇಶ್ ಕೃಷ್ಣನ್ ಮಂಡ್ಯದ ಜನರ ಅಭಿಮಾನಕ್ಕೆ ಧನ್ಯವಾದ ಹೇಳಿದರು. </p><p><strong>ಕನ್ನಡ ರೋಮಾಂಚನವೀ ಕನ್ನಡ..</strong></p><p>ಕಾರ್ಯಕ್ರಮದ ಆರಂಭಕ್ಕೂ ಮೊದಲು ಮಕ್ಕಳ ನೃತ್ಯ ಕಾರ್ಯಕ್ರಮದ ಮೂಲಕ ಮೊದಲ ದಿನದ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ಸಿಕ್ಕಿತು. ನಾಡಿನ ಉದ್ದಗಲದ ಸಾಂಸ್ಕೃತಿಕ ವೈಭವವನ್ನು ಮಕ್ಕಳು ನಾಟ್ಯದ ಮೂಲಕ ಪ್ರಸ್ತುತಪಡಿಸಿದರು.</p><p>ಉದ್ಘಾಟಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ವಿಧಾನ ಸಭೆಯಲ್ಲಿ ಯಾವುದೋ ಸಂಸ್ಕೃತಿಯ ಬಗ್ಗೆ ಮಾತನಾಡುತ್ತಾರೆ. ಇಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳೇ ಬೇರೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>