ಪೂರ್ಣಚಂದ್ರ ತೇಜಸ್ವಿ ಅವರು ಮೂಡಿಗೆರೆಗೆ ಬಂದಾಗ ನಾವಿನ್ನೂ ವಿದ್ಯಾರ್ಥಿಗಳು. ಸಮಾನ ಚಿಂತನೆ, ನಿಲುವುಗಳು, ಆಶಯಗಳು ಇದ್ದ ಕಾರಣ ನಾನು ತೇಜಸ್ವಿ ಅವರ ಒಡನಾಟ ಬಂದಿತು. ಮೂಡಿಗೆರೆಗೆ ಹೋದಾಗ ವಾರಕ್ಕೊಮ್ಮೆಯಾದರೂ ಅವರನ್ನು ಭೇಟಿಯಾಗುವುದು ಇದ್ದೇ ಇತ್ತು. ಆಗೆಲ್ಲಾ ನಮ್ಮ ವಿಚಾರ ವಿನಿಮಯಗಳಲ್ಲಿ ರಾಜೇಶ್ವರಿ ಅವರು ನಮ್ಮ ಜೊತೆ ಸೇರುತ್ತಿದ್ದರು. ಹೀಗೆ ನಾವೆಲ್ಲಾ ಒಂದು ಕುಟುಂಬದ ತರಹವೇ ಇದ್ದೆವು.