ಬೇರೆಯವರಿಗೆ ಅವರು ಬುದ್ಧಿ ಹೇಳುತ್ತಿದ್ದರು ಮಾತ್ರವಲ್ಲ, ಆ ವಿಷಯಗಳಲ್ಲಿ ಅವರೂ ಹಾಗೆಯೇ ನಡೆದುಕೊಳ್ಳುತ್ತಿದ್ದರು. ಹಾಗಾಗಿ ಅವರು ನಮಗೆಲ್ಲ ‘ಮಾಡೆಲ್’ ಆಗಿದ್ದರು. ಬಿ.ಕಾಂ. ಮುಗಿಸಿ ಎಲ್ಎಲ್ಬಿ ಮಾಡಲು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕಾನೂನು ಕಾಲೇಜಿಗೆ ಹೋಗಬೇಕು ಎಂದಿದ್ದೆ. ಅವರು ಇಲ್ಲಿಯೇ ಇರುವ ಜೆಎಸ್ಎಸ್ ಕಾಲೇಜಿಗೆ ಸೇರು. ಸಮಯ ಉಳಿಯುತ್ತದೆ. ಓದಲು, ಬೇರೆ ಕೆಲಸ ಮಾಡಲು ಸಹಾಯವಾಗುತ್ತೆ ಎಂದಿದ್ದರು. ಒಲ್ಲದ ಮನಸ್ಸಿನಿಂದಲೇ ಸೇರಿದ್ದೆ. ಆದರೆ, ನಂತರದಲ್ಲಿ ಓದಲು ಸಮಯ ಸಿಕ್ಕಿದ್ದರಿಂದ ಪದವಿ ಪಡೆದೆ. ಜತೆಗೆ ಪಾಪು ಅವರ ಪ್ರಪಂಚ, ವಿಶ್ವವಾಣಿಯಲ್ಲಿಯೂ ಸುದ್ದಿ ಬರೆಯುತ್ತಿದ್ದೆ. ಅವರ ದೂರದೃಷ್ಟಿಯಿಂದ ನನಗೆ ಬಹಳ ಅನುಕೂಲವಾಯಿತು.