ಅಂಗವಿಕಲರು, ಮಹಿಳೆಯರು ಹಾಗೂ ಮಾನಸಿಕ ರೋಗಿಗಳ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಅರ್ಹರಿಗೆ ತಲುಪಿಸುವಲ್ಲಿ ಅವರದು ದಣಿವರಿಯದ ಹೋರಾಟ. ದಾನಿಗಳ ನೆರವು ಪಡೆದು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಅಂಗವಿಕಲರು, ಮಾನಸಿಕ ರೋಗಿಗಳಿಗೆ ಅಗತ್ಯ ಪರಿಕರಗಳು, ಮಾತ್ರೆ, ಚಿಕಿತ್ಸೆಗೂ ನೆರವಾಗುತ್ತಾರೆ. ಅವರ ಸೇವೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡುವ ‘ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ’ಯೂ ಸಂದಿದೆ.