‘ರಾಮ ಕೃಷ್ಣ ಶಿವ – ಈ ಮೂವರು ಇಂಡಿಯಾದ ಪೂರ್ಣತ್ವದ ಮೂರು ಮಹತ್ ಸ್ವಪ್ನಗಳು. ರಾಮನದ್ದು ಸೀಮಿತ ವ್ಯಕ್ತಿತ್ವದಲ್ಲಿ ಪೂರ್ಣತೆ; ಕೃಷ್ಣನದ್ದು ಸಮೃದ್ಧ ವ್ಯಕ್ತಿತ್ವದಲ್ಲಿ ಪೂರ್ಣತೆ; ಶಿವನಾದರೋ ಪ್ರಮಾಣಾತೀತ...
‘ರಾಮ ತನ್ನ ಅಧಿಕಾರದ ಸುತ್ತ ರೇಖಿತವಾಗಿದ್ದ ನಿಯಮ ಘಟನೆಗಳ ವೃತ್ತವನ್ನು ಎಂದೂ ಹೆಜ್ಜೆ ದಾಟ್ಟಿದ್ದಿಲ್ಲ ಮತ್ತು, ಅಂಥ ಕಟ್ಟಳೆಯ ಗೆರೆಗಳಿಗೆ ಪ್ರಶ್ನೆಯಿಲ್ಲದೆ ಶರಣಾಗುತ್ತಿದ್ದುದೇ ಅವನ ಜೀವನದಲ್ಲಿನ ಮೂರು ನಾಲ್ಕು ಮಹತ್ ಕಲಂಕಗಳಿಗೆ ಕಾರಣವಾಯಿತು...
‘ರಾಮ ವಕ್ತಾರನಾಗಿದ್ದಕ್ಕಿಂತ ಶ್ರೋತಾರನಾಗಿದ್ದದ್ದೇ ಹೆಚ್ಚು. ಮಾತನಾಡುವಾಗ ಎದುರಿನವರಿಗೆ ತಾಳ್ಮೆಯಿಂದ ಕಿವಿಗೊಡುವುದು ದೊಡ್ಡವರಿಗೆ ಸಹಜವೇ. ಅಷ್ಟಲ್ಲದೆ ಎಲ್ಲರ ಮಾತಿಗೂ ರಾಮ ಕಿವಿಗೊಡುತ್ತಿದ್ದ. ತನ್ನ ಕಡೆಯವರು ಮತ್ತು ಶತ್ರುಪಕ್ಷದವರು ಮಾತಿನ ಮಲ್ಲಯುದ್ಧಕ್ಕಿಳಿದಾಗ ರಾಮ ಆಸಕ್ತಿಯಿಂದ ಕೇಳುವವನಾಗಿ ನಿಲ್ಲುತ್ತಿದ್ದುದುಂಟು...