‘ಕಾವ್ಯಕ್ಕೆ ನೋವನ್ನು ಮರೆಸುವ ಗುಣವಿದೆ’ ಎಂಬ ಮಾತೊಂದಿದೆ. ಮಾತ್ರವಲ್ಲ ಅದು ನೋವು, ಸಂಕಟ, ತವಕ, ತಲ್ಲಣ, ಭಾವಾಭಿವ್ಯಕ್ತಿಯ ಕೂಸೂ ಹೌದು. ಅದಕ್ಕೆ ಸಂಭ್ರಮ, ಸೂತಕಗಳೆಂಬ ಭೇದವಿಲ್ಲ. ತಮ್ಮೊಳಗಿನ ತುಡಿತ, ಮಿಡಿತಗಳನ್ನು, ಕಂಡ, ಕಲ್ಪಿತ ಸಂಗತಿಗಳನ್ನು ಹೆತ್ತು ಹಗುರಾದವರದೆಷ್ಟೊ. ಅದಕ್ಕೆಲ್ಲ ಕಾವ್ಯ ಮುಖ್ಯ ಭೂಮಿಕೆಯೂ ಆಗಿದೆ. ಅದು ಸಹಜೀವಿಯ ಬಹು ಆಯಾಮದ ದನಿಯೂ ಆಗಿರುವುದು ದಿಟ.