‘ಬೆಂಗಳೂರ್ಸ್ ಲಾಲ್ಬಾಗ್: ಎ ಕ್ರಾನಿಕಲ್ ಆಫ್ ದಿ ಗಾರ್ಡನ್ ಆ್ಯಂಡ್ ದಿ ಸಿಟಿ’ ಹೆಸರಿನ ಈ ಕೃತಿಯನ್ನು ಕಲಾವಿದ, ಇತಿಹಾಸಕಾರ ಸುರೇಶ್ ಜಯರಾಮ್ ರಚಿಸಿದ್ದಾರೆ. ಲಾಲ್ಬಾಗ್ನ ಸಸ್ಯೋದ್ಯಾನದ ಇತಿಹಾಸ ಹಾಗೂ ಉದ್ಯಾನನಗರಿ ಬೆಂಗಳೂರಿನ ಕಥೆಯನ್ನು ಈ ಕೃತಿ ಹೊಂದಿದೆ. ಕೆಂಪೇಗೌಡರು ಆಳಿದ ಬೆಂಗಳೂರು ಹೇಗಿತ್ತು?, ಲಾಲ್ಬಾಗ್ ಒಳಗಿರುವ ಸ್ಮಾರಕಗಳು, ಇಲ್ಲಿಗೆ ಭೇಟಿ ನೀಡಿದ ಗಣ್ಯರು, ನಾನಾ ಬಗೆಯ ಗಿಡಮರಗಳು, ಹೂಹಣ್ಣುಗಳ ಪರಿಚಯ ಇದರಲ್ಲಿ ಅಡಕಗೊಂಡಿದೆ.