ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಸಾಧನೆಗೆ ‘ಮನಸ್ಸಿದ್ದರೆ ಮಾರ್ಗ’

Last Updated 11 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಮನಸ್ಸಿದ್ದರೆ ಮಾರ್ಗ
ಲೇ:
ಶ್ರೀಲತಾ ಎ
ಪ್ರ: ಧೃತಿ ಪ್ರಕಾಶನ

ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳ ಅನುಭವ ಕಥನವೇ ‘ಮನಸ್ಸಿದ್ದರೆ ಮಾರ್ಗ’.ಎದುರಾದ ಸಂಕಷ್ಟದ ಸಂದರ್ಭ, ಬೇರೆಯವರ ಕಷ್ಟ, ಅನುಭವಿಸಿದ ಯಾತನೆಯ ಕಾರಣದಿಂದಾಗಿ ಹುಟ್ಟಿಕೊಂಡ ಹೊಸ ಯೋಚನೆ, ಯೋಜನೆಗಳ ಕಥೆ ಇಲ್ಲಿದೆ. ಲೇಖಕಿ ಶ್ರೀಲತಾ ಎ. ಅವರು ತಾವು ಡಾಕ್ಟರೇಟ್‌ ಪದವಿಯಲ್ಲಿ ಮಂಡಿಸಿದ ‘ಎಕಾನಮಿಕ್‌ ಡೆವಲಪ್‌ಮೆಂಟ್‌ ಆಫ್‌ ಸ್ಲಮ್ಸ್‌ ಇನ್‌ ಇಂಡಿಯಾ’ ಆಂಗ್ಲ ಭಾಷೆಯ ಮಹಾಪ್ರಬಂಧದ ತುಣಕುಗಳನ್ನು ಕನ್ನಡಕ್ಕೆ ಅನುವಾದಿಸಿ ಲೇಖನದ ರೂಪ ನೀಡಿದ್ದಾರೆ.

ಕೃತಿಯಲ್ಲಿನ ‘ಕನ್ನಡಿಯೊಳಗಣ ಬಾಲಕಿ’ ಲೇಖನವು ಯುವಜನತೆಗೆ ಸ್ಫೂರ್ತಿಯ ಕಿಡಿ ಹೊತ್ತಿಸುತ್ತದೆ. ಲೇಖನಗಳು ಕೇವಲ ಪರಿಚಯಾತ್ಮಕ ಬರಹಗಳಾಗಿರದೆ ಕಾರ್ಯಸ್ವರೂಪದ ವಿಶ್ಲೇಷಣೆಯನ್ನೂ, ಮಾರ್ಗದರ್ಶನದ ಪ್ರೇರಣೆಯನ್ನೂ ಒಳಗೊಂಡಿವೆ. ಸಾಧನೆಗೈದ ವ್ಯಕ್ತಿಗಳ ಮಾತಿನ ಮುಖಾಂತರವೇ ಪ್ರತೀ ಲೇಖನದ ಆರಂಭವು ನಿರೂಪಣೆಯನ್ನು ಮತ್ತಷ್ಟು ಆಪ್ತವಾಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT