ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳ ಅನುಭವ ಕಥನವೇ ‘ಮನಸ್ಸಿದ್ದರೆ ಮಾರ್ಗ’.ಎದುರಾದ ಸಂಕಷ್ಟದ ಸಂದರ್ಭ, ಬೇರೆಯವರ ಕಷ್ಟ, ಅನುಭವಿಸಿದ ಯಾತನೆಯ ಕಾರಣದಿಂದಾಗಿ ಹುಟ್ಟಿಕೊಂಡ ಹೊಸ ಯೋಚನೆ, ಯೋಜನೆಗಳ ಕಥೆ ಇಲ್ಲಿದೆ. ಲೇಖಕಿ ಶ್ರೀಲತಾ ಎ. ಅವರು ತಾವು ಡಾಕ್ಟರೇಟ್ ಪದವಿಯಲ್ಲಿ ಮಂಡಿಸಿದ ‘ಎಕಾನಮಿಕ್ ಡೆವಲಪ್ಮೆಂಟ್ ಆಫ್ ಸ್ಲಮ್ಸ್ ಇನ್ ಇಂಡಿಯಾ’ ಆಂಗ್ಲ ಭಾಷೆಯ ಮಹಾಪ್ರಬಂಧದ ತುಣಕುಗಳನ್ನು ಕನ್ನಡಕ್ಕೆ ಅನುವಾದಿಸಿ ಲೇಖನದ ರೂಪ ನೀಡಿದ್ದಾರೆ.