ವಸುಂಧರಾ ಕದಲೂರು ಬರೆದ ಕವಿತೆ: ಒಳಪ್ರಜ್ಞೆಯ ಪ್ರಶ್ನೆಗಳು…

ಆ ನಾಲ್ಕು ಕಾಲಿನ ನಿರಾಸಕ್ತಿಗಳು
ಅಷ್ಟೇನೂ ಮುಖ್ಯವಲ್ಲದ
ಅಡ್ಡರಸ್ತೆಗಳ ನಡುವಲ್ಲಿ
ದಾರಿಗಡ್ಡ ಮಲಗಿರುತ್ತವೆ..
ಜಗದ ತುರ್ತುಗಳನು ತಲೆ ಮೇಲೆ
ಹೊತ್ತಂತೆ ಬರುವ ಗಾಡಿಗಳಿಗೆ
ಸರಕ್ಕನೆ ಬ್ರೇಕು ಹಾಕಿಸಿ ವಾಸ್ತವ
ದರ್ಶನ ಮಾಡಿಸುವ ನಡುರಸ್ತೆ
ನಿಲುಗಡೆಗಳಿವು..
ಈ ಬೀದಿಕೂಸುಗಳು, ಎಲ್ಲರ
ಅನುಕಂಪ ಯಾಚಕರು; ಸುಗ್ರಾಸ
ಬೇಡದೆ, ಸಿಕ್ಕಿದನು ತಿಂದು ಸ್ವಸ್ಥ
ಮಲಗುವ ಚಿರಂಜೀವಿಗಳು..
ಸಂತಾನ ಹರಣಕೆ ಮೈಯೊಡ್ಡುತಾ,
ಸುಖಕೆ ಮರೀಚಿಕೆಗಳಾಗುತಾ ಆಗೀಗ
ವ್ಯಗ್ರರಾಗಿಯೂ, ಬೀದಿ ರಕ್ಷಕರಾಗಿಯೂ
ನಮ್ಮೊಳ ಪ್ರಜ್ಞೆಯ ಪ್ರಶ್ನೆಗಳಾಗುವವು..
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.