ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸುಂಧರಾ ಕದಲೂರು ಬರೆದ ಕವನ: ಅಂಥಾ ಜರೂರತ್ತು ಇರುವುದಿಲ್ಲ

Last Updated 23 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಕೆಂಬೂತದ್ದು ತಪ್ಪಿರಲಿಲ್ಲ

ಮಾತ್ಸರ್ಯದಲಿ ಹೋಲಿಸಿ
ಹಂಗಿಸಿ ನವಿಲ ರೂಪವನು
ನಾವೇ ದೊಡ್ಡದು ಮಾಡುವುದು

ಜೀವಮಾನದಲ್ಲೇ ನವಿಲ
ಕಂಡಿರದ ಕೆಂಬೂತ
ಅದಾವ ಸೊಬಗಿಗೆ ಕೊರಗಿ
ಏಕೆ ಬಾಧೆ ಪಟ್ಟೀತು

ಹೊಳಪಿನ ಪುಕ್ಕದ ರಂಗು
ನರ್ತನದ ಕಾಲ್ನಡುಗೆ;
ಗರಿಗೆದರಿ ಕುಣಿವ ಖದರು
ಕೆಂಬೂತದ ನೆಮ್ಮದಿ ತೆಗೆದೀತೇ

ಮಯೂರಕೆ ಸೌಂದರ್ಯ ಕಿರೀಟ
ತೊಡಿಸಿ, ಕೆಂಬೂತಕೆ ಅಪರಾಧಿ
ಬೇಡಿ ತೊಡಿಸಿ; ಪಾತ್ರ ಕಟ್ಟಿ ನಮ್ಮ
ತಲೆಪರದೆ ಮೇಲೆ ಕುಣಿಸಿದೆವು

ಕಡೆಗೆ ನವಿಲು ಕೆಂಬೂತ ಯಾವುದೂ
ಆಗದವರು ಮತ್ಸರದಿ ಅಯ್ಯೋ,
ಇದು ಅದರಂತಾಗಲಿಲ್ಲೆಂದು
ರೋದಿಸಿ ಮೊಸಳೆ ಕಣ್ಣೀರಿಡುವೆವು

ನವಿಲ ಬಾಳು ಕೆಂಬೂತ ಬದುಕುವ
ಜರೂರತ್ತೆಂದಿಗೂ ಇರುವುದಿಲ್ಲ.
ಹೆಣ್ಣು ಕೆಂಬೂತ ಇಷ್ಟ ಪಡುವುದು
ಗಂಡು ನವಿಲನ್ನೇನೂ ಅಲ್ಲ……

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT