<p>ಒಂದು ದಿನ ಮುಂಜಾನೆ ಎದ್ದು ನೋಡಿದರೆ ದಿಢೀರನೇ ಘೋಷಣೆ</p>.<p>ಇನ್ನು ಮೇಲೆ ನೀನು ಹುಲಿಯಲ್ಲ, ನಿನ್ನನ್ನು ನೀನು ಹುಲಿಯೆಂದು ಕರೆದುಕೊಳ್ಳಲಾಗದು.</p>.<p>ಯಾರಾದರೂ ಹಾಗೆಂದು ಕರೆದರೂ ತಿರುಗಿ ನೋಡಬಾರದು</p>.<p>ನಿನ್ನ ಹುಲಿಸ್ಥಾನಕ್ಕೆ ಬಿತ್ತು ಮರ್ಮದೇಟು, ನಡೆ, ಇನ್ನು ನಿನ್ನ ಪಟ್ಟೆಗಳನ್ನು ಕಳಚಿಟ್ಟು.</p>.<p>ತಲೆಕೆರೆದುಕೊಂಡಿತು ಹುಲಿ, ಏಕಾಏಕಿ ಇದೇನಾಯಿತು ಇವರಿಗೆ, ಹಿಂದಿನ ರಾತ್ರಿ</p>.<p>ಏನು ಕುಡಿದಿದ್ದರು, ಇಳಿದಿಲ್ಲ ಅಮಲು ಇನ್ನೂ ಅಥವಾ ಹುಚ್ಚು ಹಿಡಿದಿದೆ ಖಾತ್ರಿ</p>.<p>ಅಥವಾ ತನಗೇ ತಿಳಿದಿಲ್ಲದ ಸತ್ಯವೊಂದನ್ನು ಕಂಡುಕೊಂಡರೇ ಇವರು ಎಂದುಕೊಂಡು</p>.<p>ನೋಡಿದರೆ ಛಾನಲ್ಲಿನಲ್ಲಿ ಪುಂಖಾನುಪುಖ ಪುಂಗುತ್ತಿದೆ ಒಂದು ಬಾಲ ಸುಟ್ಟ ನರಿ!</p>.<p>ಏನು ಪದಪುಂಜಗಳೂ, ವಾಕ್ಯಾವಳಿಗಳೂ, ಗತ್ತು ದೌಲತ್ತುಗಳೂ, ಏನು ಧೈರ್ಯಸ್ಥೈರ್ಯಗಳೂ!</p>.<p>ದಂಗಾಯಿತು ಹುಲಿ ಅದರ ವಾಕ್ಝರಿಗೆ. ಸತ್ಯವನ್ನು ಸುಳ್ಳಾಗಿಸುವ, ಸುಳ್ಳನ್ನೂ ಸತ್ಯವಾಗಿಸುವ ಪರಿಪಾಠಕ್ಕೆ.</p>.<p>ಕೇಳಿ ಸಾಕಾಯಿತು ಅದಕ್ಕೆ, ಉಗುರು ಹೊರಚಾಚಿ ತಲೆಕೆರೆದುಕೊಂಡು ಕ್ಷಣ ಯೋಚಿಸಿತು</p>.<p>ಮಾರ್ ದಿಯಾ ಜಾಯೆ ಯಾ ಛೋಡ್ ದಿಯಾ ಜಾಯೆ ಅಂತ ಪರಿಶೀಲಿಸಿ, ನಂತರ ತಡಿ ಸ್ವಲ್ಪ</p>.<p>ನೋಡೋಣಾ ಎದುರಾಳಿ ಸಮಬಲನೋ ಅಥವಾ ಗಠಾರದ ಇಲಿಯೋ, ಮಾತು ತಲೆಯಿಂದ</p>.<p>ಬರುತ್ತಿದೆಯೋ ಅಥವಾ ಬೇರೆ ಕಡೆಯಿಂದಲೋ ಎಂದು ಪರೀಕ್ಷಿಸಿತು. ಫಕ್ಕನೆ ನಕ್ಕುಬಿಟ್ಟಿತು</p>.<p>ಇವನು ಮೀರಸಾಧಕನ ವಂಶಸ್ಥ, ಸಮಯ ಸಾಧಕ, ಉಂಡ ಮನೆಯ ಗಳ ಹಿರಿವ ಭಂಡ</p>.<p>ನನ್ನ ಬಾಲದ ಪಟ್ಟೆ ಕೂದಲಿಗೂ ಸಮನಲ್ಲ, ತಿರಿದು ತಿನ್ನುವ ಇವನ ನಾಲಿಗೆಗೆ ಎಲುಬಿಲ್ಲ</p>.<p>ಎಂದು ಥುಕರಿಸಿ ಎದ್ದು ನಡೆಯಿತು ಹುಲಿ ಬೀದಿಯಲ್ಲಿ ಎಂದಿನ ರಾಜ ಗಾಂಭೀರ್ಯದಲ್ಲಿ.</p>.<p>ಎದುರಾಯಿತು ನರಿ ಅದೇ ತಾನೇ ಮಾನ ಸನ್ಮಾನಗಳ ಪೇಟ ಶಾಲು ಧರಿಸಿ, ಕಾಸು ಎಣಿಸಿ</p>.<p>ಮುಂದಿನ ತುಂಡಿಗಾಗಿ ಮೂಸುತ್ತ ನೆಲ ಕೆರೆಯುತ್ತ ಒಳಗೊಳಗೇ ಸಂಭ್ರಮಿಸುತ್ತ</p>.<p>ಕಾಣದೆ ಬಂದು ಡಿಕ್ಕಿ ಹೊಡಿಯಿತು ಹುಲಿಗೆ, ನೋಡಿ ಉಡುಗಿ ಜಂಘಾಬಲ ನಡುಗುತ್ತ</p>.<p>ಕ್ಷಮಿಸಿ ಖಾವಂದರೇ, ಮೈಸೂರು ಹುಲಿಗಳೇ, ಪರಕೀಯರ ಎದುರಿಸಿ ಹಿಮ್ಮೆಟ್ಟಿದ ವೀರಪ್ರತಾಪರೆ</p>.<p>ರಣದಲ್ಲಿ ಮರಣ ಹೊಂದಿದ ಅಲ್ಲ ಹೊಂದುವ ಸಮರವಿಕ್ರಮರೇ .. ತತತತ ತೊದಲಿತು ನರಿ</p>.<p>ಕೇಳುವಷ್ಟು ಕೇಳಿ ಕೊನೆಗೆ ಘರ್ಜಿಸಿತು ಹುಲಿ ಮುಚ್ಚು ಬಾಯಿ, ಹುಚ್ಚು ನರಿ, ನಡಿ ನನ್ನ ಜೊತೆಗೆ</p>.<p>ಒಂದು ಕದನಕ್ಕೆ, ಅಲ್ಲಿ ಮೈಕಿಲ್ಲ ಚಪ್ಪಾಳೆಯಿಲ್ಲ, ಬಡಿಯುತ್ತವೆ ಫಿರಂಗಿ ಗುಂಡು, ನಿಲ್ಲು ಎದೆ ಕೊಟ್ಟು.</p>.<p>ಗೋಗರೆಯಿತು ನರಿ ಅಯ್ಯೋ ಬಿಟ್ಟುಬಿಡಿ ನನ್ನ ಬಡವ ಬದುಕಿಕೊಳ್ಳುತ್ತೇನೆ ನಿಮ್ಮ ದಮ್ಮಯ್ಯ</p>.<p>ಅವರು ಕೊಟ್ಟ ಕಾಸಿಗೆ ಪುಂಗಿದ್ದೇನೆ ಇನ್ನು ಎಲ್ಲಾದರೂ ತಲೆಮರೆಸಿಕೊಳ್ಳುತ್ತೇನೆ ನಿಮಗೆ ಸಾಟಿಯೇ</p>.<p>ನಿಮ್ಮ ಪಟ್ಟೆಯ ಧೂಳಿಗೂ ಸಮರಿಲ್ಲ ನಾನೂ ನನ್ನ ನಾಯಕರೂ ಎಂದು ಅಂಜಿ ಅಂಗಲಾಚಿ</p>.<p>ಗೋಮೂತ್ರ ಸ್ವಮೂತ್ರ ಎಲ್ಲ ಪ್ರೋಕ್ಷಿಸಿಕೊಂಡು ಧರೆಗೊರಗಿತು, ಪಾಪ ಬದುಕಿದರೆ ಬೇಡಿ ತಿನ್ನುವ</p>.<p>ಒದರಿತು ಮೈ ಒಮ್ಮೆ ಹುಲಿ ಅದರ ಝಕ್ಕಿಗೆ ಉದುರಿದ ಪಟ್ಟೆಯ ರೋಮಗಳು ಹಾರಿ ಗಾಳಿಯಲ್ಲಿ</p>.<p>ಪರಪರನೆ ಸರಿದವು ಚರಿತ್ರೆಯ ಪುಟಗಳು, ಹುಲಿಗೆ ಸಾಟಿಯಿಲ್ಲ ಸತ್ಯ, ಅಷ್ಟೇ ಸತ್ಯ ಇಂದು ಮೆರೆಯುತ್ತಿದ್ದಾರೆ</p>.<p>ಸತ್ಯಕ್ಕೂ ಗುಂಡಿಟ್ಟ ವೀರೋಚಿತರು ಹುಳಿ ಮುಖದ ಪುಂಗಿದಾಸರು ಅಂದಿನಂತೆ ಇಂದೂ ಮೀರಸಾಧಕರು ಪಾತಕರು.</p>.<p>ಬೆಕ್ಕಿಗೆ ಗಂಟೆ ಕಟ್ಟಲಾಗದವರಿಗೇಕೆ ಹುಲಿಯ ಗೊಡವೆ, ಸುಮ್ಮನಿರಿ ನಿಮ್ಮ ಬಾಲ ಕಾಲನಡುವೆ ತೂರಿ.</p>.<p>ಕಲಿತಿಲ್ಲವೇ ಚರಿತ್ರೆಯ ಪಾಠ? ಕಾಲದ ಸೆಳವಿನಲ್ಲಿ</p>.<p>ಎಷ್ಟೇ ತಿದ್ದಿ ಬರೆದರೂ ಉಳಿಯುವುದು ವೀರರ ಹೆಸರು</p>.<p>ಎಷ್ಟೇ ತಿಣುಕಾಡಿದರೂ ಅಳಿಸಿಹೋಗುವುದು ನಿಮ್ಮ ಸುಳ್ಳುಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಒಂದು ದಿನ ಮುಂಜಾನೆ ಎದ್ದು ನೋಡಿದರೆ ದಿಢೀರನೇ ಘೋಷಣೆ</p>.<p>ಇನ್ನು ಮೇಲೆ ನೀನು ಹುಲಿಯಲ್ಲ, ನಿನ್ನನ್ನು ನೀನು ಹುಲಿಯೆಂದು ಕರೆದುಕೊಳ್ಳಲಾಗದು.</p>.<p>ಯಾರಾದರೂ ಹಾಗೆಂದು ಕರೆದರೂ ತಿರುಗಿ ನೋಡಬಾರದು</p>.<p>ನಿನ್ನ ಹುಲಿಸ್ಥಾನಕ್ಕೆ ಬಿತ್ತು ಮರ್ಮದೇಟು, ನಡೆ, ಇನ್ನು ನಿನ್ನ ಪಟ್ಟೆಗಳನ್ನು ಕಳಚಿಟ್ಟು.</p>.<p>ತಲೆಕೆರೆದುಕೊಂಡಿತು ಹುಲಿ, ಏಕಾಏಕಿ ಇದೇನಾಯಿತು ಇವರಿಗೆ, ಹಿಂದಿನ ರಾತ್ರಿ</p>.<p>ಏನು ಕುಡಿದಿದ್ದರು, ಇಳಿದಿಲ್ಲ ಅಮಲು ಇನ್ನೂ ಅಥವಾ ಹುಚ್ಚು ಹಿಡಿದಿದೆ ಖಾತ್ರಿ</p>.<p>ಅಥವಾ ತನಗೇ ತಿಳಿದಿಲ್ಲದ ಸತ್ಯವೊಂದನ್ನು ಕಂಡುಕೊಂಡರೇ ಇವರು ಎಂದುಕೊಂಡು</p>.<p>ನೋಡಿದರೆ ಛಾನಲ್ಲಿನಲ್ಲಿ ಪುಂಖಾನುಪುಖ ಪುಂಗುತ್ತಿದೆ ಒಂದು ಬಾಲ ಸುಟ್ಟ ನರಿ!</p>.<p>ಏನು ಪದಪುಂಜಗಳೂ, ವಾಕ್ಯಾವಳಿಗಳೂ, ಗತ್ತು ದೌಲತ್ತುಗಳೂ, ಏನು ಧೈರ್ಯಸ್ಥೈರ್ಯಗಳೂ!</p>.<p>ದಂಗಾಯಿತು ಹುಲಿ ಅದರ ವಾಕ್ಝರಿಗೆ. ಸತ್ಯವನ್ನು ಸುಳ್ಳಾಗಿಸುವ, ಸುಳ್ಳನ್ನೂ ಸತ್ಯವಾಗಿಸುವ ಪರಿಪಾಠಕ್ಕೆ.</p>.<p>ಕೇಳಿ ಸಾಕಾಯಿತು ಅದಕ್ಕೆ, ಉಗುರು ಹೊರಚಾಚಿ ತಲೆಕೆರೆದುಕೊಂಡು ಕ್ಷಣ ಯೋಚಿಸಿತು</p>.<p>ಮಾರ್ ದಿಯಾ ಜಾಯೆ ಯಾ ಛೋಡ್ ದಿಯಾ ಜಾಯೆ ಅಂತ ಪರಿಶೀಲಿಸಿ, ನಂತರ ತಡಿ ಸ್ವಲ್ಪ</p>.<p>ನೋಡೋಣಾ ಎದುರಾಳಿ ಸಮಬಲನೋ ಅಥವಾ ಗಠಾರದ ಇಲಿಯೋ, ಮಾತು ತಲೆಯಿಂದ</p>.<p>ಬರುತ್ತಿದೆಯೋ ಅಥವಾ ಬೇರೆ ಕಡೆಯಿಂದಲೋ ಎಂದು ಪರೀಕ್ಷಿಸಿತು. ಫಕ್ಕನೆ ನಕ್ಕುಬಿಟ್ಟಿತು</p>.<p>ಇವನು ಮೀರಸಾಧಕನ ವಂಶಸ್ಥ, ಸಮಯ ಸಾಧಕ, ಉಂಡ ಮನೆಯ ಗಳ ಹಿರಿವ ಭಂಡ</p>.<p>ನನ್ನ ಬಾಲದ ಪಟ್ಟೆ ಕೂದಲಿಗೂ ಸಮನಲ್ಲ, ತಿರಿದು ತಿನ್ನುವ ಇವನ ನಾಲಿಗೆಗೆ ಎಲುಬಿಲ್ಲ</p>.<p>ಎಂದು ಥುಕರಿಸಿ ಎದ್ದು ನಡೆಯಿತು ಹುಲಿ ಬೀದಿಯಲ್ಲಿ ಎಂದಿನ ರಾಜ ಗಾಂಭೀರ್ಯದಲ್ಲಿ.</p>.<p>ಎದುರಾಯಿತು ನರಿ ಅದೇ ತಾನೇ ಮಾನ ಸನ್ಮಾನಗಳ ಪೇಟ ಶಾಲು ಧರಿಸಿ, ಕಾಸು ಎಣಿಸಿ</p>.<p>ಮುಂದಿನ ತುಂಡಿಗಾಗಿ ಮೂಸುತ್ತ ನೆಲ ಕೆರೆಯುತ್ತ ಒಳಗೊಳಗೇ ಸಂಭ್ರಮಿಸುತ್ತ</p>.<p>ಕಾಣದೆ ಬಂದು ಡಿಕ್ಕಿ ಹೊಡಿಯಿತು ಹುಲಿಗೆ, ನೋಡಿ ಉಡುಗಿ ಜಂಘಾಬಲ ನಡುಗುತ್ತ</p>.<p>ಕ್ಷಮಿಸಿ ಖಾವಂದರೇ, ಮೈಸೂರು ಹುಲಿಗಳೇ, ಪರಕೀಯರ ಎದುರಿಸಿ ಹಿಮ್ಮೆಟ್ಟಿದ ವೀರಪ್ರತಾಪರೆ</p>.<p>ರಣದಲ್ಲಿ ಮರಣ ಹೊಂದಿದ ಅಲ್ಲ ಹೊಂದುವ ಸಮರವಿಕ್ರಮರೇ .. ತತತತ ತೊದಲಿತು ನರಿ</p>.<p>ಕೇಳುವಷ್ಟು ಕೇಳಿ ಕೊನೆಗೆ ಘರ್ಜಿಸಿತು ಹುಲಿ ಮುಚ್ಚು ಬಾಯಿ, ಹುಚ್ಚು ನರಿ, ನಡಿ ನನ್ನ ಜೊತೆಗೆ</p>.<p>ಒಂದು ಕದನಕ್ಕೆ, ಅಲ್ಲಿ ಮೈಕಿಲ್ಲ ಚಪ್ಪಾಳೆಯಿಲ್ಲ, ಬಡಿಯುತ್ತವೆ ಫಿರಂಗಿ ಗುಂಡು, ನಿಲ್ಲು ಎದೆ ಕೊಟ್ಟು.</p>.<p>ಗೋಗರೆಯಿತು ನರಿ ಅಯ್ಯೋ ಬಿಟ್ಟುಬಿಡಿ ನನ್ನ ಬಡವ ಬದುಕಿಕೊಳ್ಳುತ್ತೇನೆ ನಿಮ್ಮ ದಮ್ಮಯ್ಯ</p>.<p>ಅವರು ಕೊಟ್ಟ ಕಾಸಿಗೆ ಪುಂಗಿದ್ದೇನೆ ಇನ್ನು ಎಲ್ಲಾದರೂ ತಲೆಮರೆಸಿಕೊಳ್ಳುತ್ತೇನೆ ನಿಮಗೆ ಸಾಟಿಯೇ</p>.<p>ನಿಮ್ಮ ಪಟ್ಟೆಯ ಧೂಳಿಗೂ ಸಮರಿಲ್ಲ ನಾನೂ ನನ್ನ ನಾಯಕರೂ ಎಂದು ಅಂಜಿ ಅಂಗಲಾಚಿ</p>.<p>ಗೋಮೂತ್ರ ಸ್ವಮೂತ್ರ ಎಲ್ಲ ಪ್ರೋಕ್ಷಿಸಿಕೊಂಡು ಧರೆಗೊರಗಿತು, ಪಾಪ ಬದುಕಿದರೆ ಬೇಡಿ ತಿನ್ನುವ</p>.<p>ಒದರಿತು ಮೈ ಒಮ್ಮೆ ಹುಲಿ ಅದರ ಝಕ್ಕಿಗೆ ಉದುರಿದ ಪಟ್ಟೆಯ ರೋಮಗಳು ಹಾರಿ ಗಾಳಿಯಲ್ಲಿ</p>.<p>ಪರಪರನೆ ಸರಿದವು ಚರಿತ್ರೆಯ ಪುಟಗಳು, ಹುಲಿಗೆ ಸಾಟಿಯಿಲ್ಲ ಸತ್ಯ, ಅಷ್ಟೇ ಸತ್ಯ ಇಂದು ಮೆರೆಯುತ್ತಿದ್ದಾರೆ</p>.<p>ಸತ್ಯಕ್ಕೂ ಗುಂಡಿಟ್ಟ ವೀರೋಚಿತರು ಹುಳಿ ಮುಖದ ಪುಂಗಿದಾಸರು ಅಂದಿನಂತೆ ಇಂದೂ ಮೀರಸಾಧಕರು ಪಾತಕರು.</p>.<p>ಬೆಕ್ಕಿಗೆ ಗಂಟೆ ಕಟ್ಟಲಾಗದವರಿಗೇಕೆ ಹುಲಿಯ ಗೊಡವೆ, ಸುಮ್ಮನಿರಿ ನಿಮ್ಮ ಬಾಲ ಕಾಲನಡುವೆ ತೂರಿ.</p>.<p>ಕಲಿತಿಲ್ಲವೇ ಚರಿತ್ರೆಯ ಪಾಠ? ಕಾಲದ ಸೆಳವಿನಲ್ಲಿ</p>.<p>ಎಷ್ಟೇ ತಿದ್ದಿ ಬರೆದರೂ ಉಳಿಯುವುದು ವೀರರ ಹೆಸರು</p>.<p>ಎಷ್ಟೇ ತಿಣುಕಾಡಿದರೂ ಅಳಿಸಿಹೋಗುವುದು ನಿಮ್ಮ ಸುಳ್ಳುಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>