<p>ವಿದ್ಯಾರ್ಥಿಗಳ ಕೊರತೆಯ ನೆಪದಲ್ಲಿ ಸರ್ಕಾರಿ ಶಾಲೆ ವಿಲೀನ ಪ್ರಕ್ರಿಯೆಗೆ ನಮ್ಮ ಅಂಗನವಾಡಿಗಳೂ ಕಾರಣ. <br /> <br /> ಮೂಲಭೂತ ಸೌಕರ್ಯಗಳಿಲ್ಲದ ಕಟ್ಟಡಗಳು, ಕಲಿಕಾ ಪರಿಸರದ ಕೊರತೆ ಮತ್ತು ಸಾಂಪ್ರದಾಯಿಕ ಬೋಧನಾ ವಿಧಾನಗಳಿಂದ ನಮ್ಮ ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಕಳೆಗುಂದಿದೆ.<br /> <br /> ರಾಜ್ಯ ಸರ್ಕಾರ `ಗುಣಾತ್ಮಕ ಶಿಕ್ಷಣಕ್ಕೆ ಕ್ರಿಯಾಶೀಲ ಆಡಳಿತ~ ಎಂಬ ತತ್ವದಡಿ ಕಿರಿಯ, ಹಿರಿಯ ಪ್ರಾಥಮಿಕ, ಮತ್ತು ಪ್ರೌಢಶಾಲೆಗಳಲ್ಲಿ ವಿಶೇಷ ಬದಲಾವಣೆ ಮಾಡುತ್ತಿದೆ.</p>.<p>ಆದರೆ ಗ್ರಾಮೀಣ ಮಕ್ಕಳ ಶಿಕ್ಷಣದ ಆರಂಭಿಕ ಹಂತವಾದ ಅಂಗನವಾಡಿಗಳನ್ನು ಸಂಪೂರ್ಣ ನಿರ್ಲಕ್ಷ್ಯಿಸಿದೆ. ಇದು ಸರಿಯಾಗಿ ಅಡಿಪಾಯ ಹಾಕದೆ ಬೃಹತ್ ಕಟ್ಟಡ ಕಟ್ಟಲು ಹೊರಟಂತಿದೆ.</p>.<p>ಸರ್ಕಾರ ಈ ಹಂತದ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಕೆಲಸಕ್ಕೆ ಮುಂದಾಗಲಿ. ಸೌಲಭ್ಯಗಳಿರುವ ಕಟ್ಟಡ, ಮಕ್ಕಳ ಮನೋವಿಕಾಸಕ್ಕೆ ಬೇಕಾಗುವ ಸಾಮಗ್ರಿಗಳು, ಉತ್ತಮ ವಿದ್ಯಾರ್ಹತೆ, ತರಬೇತಿ ಪಡೆದ ಶಿಕ್ಷಕಿಯರ ನೇಮಕ, ಅವರಿಗೆ ಆಕರ್ಷಕ ವೇತನ ನೀಡುವ ಕಡೆಗೆ ಗಮನ ಕೊಡಬೇಕು.</p>.<p>ಅಂಗನವಾಡಿ ಎಂಬ ಹೆಸರಿಗೆ ಬದಲು `ಸರ್ಕಾರಿ ಮಾದರಿ ನರ್ಸರಿ ಶಾಲೆ~ ಎಂದು ಮರುನಾಮಕರಣ ಮಾಡಬೇಕು.<br /> <br /> ಈ ಬದಲಾವಣೆಗಳನ್ನು ಮಾಡಿದರೆ ಪೂರ್ವ ಪ್ರಾಥಮಿಕ ಹಂತದ ಸರ್ಕಾರಿ ಶಿಕ್ಷಣ ವ್ಯವಸ್ಥೆ ಬಲಗೊಳ್ಳುತ್ತದೆ. ಪಾಲಕರು ಖಾಸಗಿ ಶಾಲೆಗಳನ್ನು ಹುಡುಕಿಕೊಂಡು ಹೋಗುವ ಬದಲು ಗುಣಾತ್ಮಕ ಸರ್ಕಾರಿ ನರ್ಸರಿ ಶಾಲೆಗಳತ್ತ ಮುಖ ಮಾಡುತ್ತಾರೆ.<br /> <br /> ಈಗ ಪಾಲಕರು ಖಾಸಗಿ ನರ್ಸರಿ ಶಾಲೆಗಳ ಆಡಂಬರಕ್ಕೆ ಮಾರುಹೋಗಿ ತಮ್ಮ ಮಕ್ಕಳನ್ನು ಆ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. <br /> <br /> ಒಮ್ಮೆ ಈ ಶಾಲೆಗೆ ಸೇರಿದ ಮಗುವನ್ನು 7ನೆಯ ತರಗತಿ ಮುಗಿಯುವವರೆಗೆ ಬೇರೆ ಕಡೆ ದಾಖಲಾಗಲು ಆ ಶಾಲೆಗಳು ಅವಕಾಶ ಕೊಡುವುದಿಲ್ಲ. <br /> <br /> ಮೊದಲ ಹಂತದಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಆಕರ್ಷಿಸಿದರೆ ಶಿಕ್ಷಣ ಗುಣಮಟ್ಟ ಸುಧಾರಿಸುತ್ತದೆ. ಶಾಲೆಗಳನ್ನು ಮುಚ್ಚುವ ಸಮಸ್ಯೆ ಬರುವುದಿಲ್ಲ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿದ್ಯಾರ್ಥಿಗಳ ಕೊರತೆಯ ನೆಪದಲ್ಲಿ ಸರ್ಕಾರಿ ಶಾಲೆ ವಿಲೀನ ಪ್ರಕ್ರಿಯೆಗೆ ನಮ್ಮ ಅಂಗನವಾಡಿಗಳೂ ಕಾರಣ. <br /> <br /> ಮೂಲಭೂತ ಸೌಕರ್ಯಗಳಿಲ್ಲದ ಕಟ್ಟಡಗಳು, ಕಲಿಕಾ ಪರಿಸರದ ಕೊರತೆ ಮತ್ತು ಸಾಂಪ್ರದಾಯಿಕ ಬೋಧನಾ ವಿಧಾನಗಳಿಂದ ನಮ್ಮ ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಕಳೆಗುಂದಿದೆ.<br /> <br /> ರಾಜ್ಯ ಸರ್ಕಾರ `ಗುಣಾತ್ಮಕ ಶಿಕ್ಷಣಕ್ಕೆ ಕ್ರಿಯಾಶೀಲ ಆಡಳಿತ~ ಎಂಬ ತತ್ವದಡಿ ಕಿರಿಯ, ಹಿರಿಯ ಪ್ರಾಥಮಿಕ, ಮತ್ತು ಪ್ರೌಢಶಾಲೆಗಳಲ್ಲಿ ವಿಶೇಷ ಬದಲಾವಣೆ ಮಾಡುತ್ತಿದೆ.</p>.<p>ಆದರೆ ಗ್ರಾಮೀಣ ಮಕ್ಕಳ ಶಿಕ್ಷಣದ ಆರಂಭಿಕ ಹಂತವಾದ ಅಂಗನವಾಡಿಗಳನ್ನು ಸಂಪೂರ್ಣ ನಿರ್ಲಕ್ಷ್ಯಿಸಿದೆ. ಇದು ಸರಿಯಾಗಿ ಅಡಿಪಾಯ ಹಾಕದೆ ಬೃಹತ್ ಕಟ್ಟಡ ಕಟ್ಟಲು ಹೊರಟಂತಿದೆ.</p>.<p>ಸರ್ಕಾರ ಈ ಹಂತದ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಕೆಲಸಕ್ಕೆ ಮುಂದಾಗಲಿ. ಸೌಲಭ್ಯಗಳಿರುವ ಕಟ್ಟಡ, ಮಕ್ಕಳ ಮನೋವಿಕಾಸಕ್ಕೆ ಬೇಕಾಗುವ ಸಾಮಗ್ರಿಗಳು, ಉತ್ತಮ ವಿದ್ಯಾರ್ಹತೆ, ತರಬೇತಿ ಪಡೆದ ಶಿಕ್ಷಕಿಯರ ನೇಮಕ, ಅವರಿಗೆ ಆಕರ್ಷಕ ವೇತನ ನೀಡುವ ಕಡೆಗೆ ಗಮನ ಕೊಡಬೇಕು.</p>.<p>ಅಂಗನವಾಡಿ ಎಂಬ ಹೆಸರಿಗೆ ಬದಲು `ಸರ್ಕಾರಿ ಮಾದರಿ ನರ್ಸರಿ ಶಾಲೆ~ ಎಂದು ಮರುನಾಮಕರಣ ಮಾಡಬೇಕು.<br /> <br /> ಈ ಬದಲಾವಣೆಗಳನ್ನು ಮಾಡಿದರೆ ಪೂರ್ವ ಪ್ರಾಥಮಿಕ ಹಂತದ ಸರ್ಕಾರಿ ಶಿಕ್ಷಣ ವ್ಯವಸ್ಥೆ ಬಲಗೊಳ್ಳುತ್ತದೆ. ಪಾಲಕರು ಖಾಸಗಿ ಶಾಲೆಗಳನ್ನು ಹುಡುಕಿಕೊಂಡು ಹೋಗುವ ಬದಲು ಗುಣಾತ್ಮಕ ಸರ್ಕಾರಿ ನರ್ಸರಿ ಶಾಲೆಗಳತ್ತ ಮುಖ ಮಾಡುತ್ತಾರೆ.<br /> <br /> ಈಗ ಪಾಲಕರು ಖಾಸಗಿ ನರ್ಸರಿ ಶಾಲೆಗಳ ಆಡಂಬರಕ್ಕೆ ಮಾರುಹೋಗಿ ತಮ್ಮ ಮಕ್ಕಳನ್ನು ಆ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. <br /> <br /> ಒಮ್ಮೆ ಈ ಶಾಲೆಗೆ ಸೇರಿದ ಮಗುವನ್ನು 7ನೆಯ ತರಗತಿ ಮುಗಿಯುವವರೆಗೆ ಬೇರೆ ಕಡೆ ದಾಖಲಾಗಲು ಆ ಶಾಲೆಗಳು ಅವಕಾಶ ಕೊಡುವುದಿಲ್ಲ. <br /> <br /> ಮೊದಲ ಹಂತದಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಆಕರ್ಷಿಸಿದರೆ ಶಿಕ್ಷಣ ಗುಣಮಟ್ಟ ಸುಧಾರಿಸುತ್ತದೆ. ಶಾಲೆಗಳನ್ನು ಮುಚ್ಚುವ ಸಮಸ್ಯೆ ಬರುವುದಿಲ್ಲ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>