<p><strong>ತೀರ್ಥಹಳ್ಳಿ:</strong> `ಸಾಕಪ್ಪಾ ಸಾಕು ಈ ಊರಿನ ಸಹವಾಸ, ಮಳೆಗಾಲ ಬಂತೆಂದರೆ ನಮ್ಮ ಕಡು ವೈರಿಗೂ ಬೇಡ ಈ ಕಷ್ಟ' ಎಂದು ಮರುಗುವ ಹಡಗಿನಮಕ್ಕಿ ಗ್ರಾಮಸ್ಥರು ಗಡೆಬಡೆಹಳ್ಳಕ್ಕೆ ಯಾವಾಗ ಕಿರು ಸೇತುವೆ ನಿರ್ಮಾಣವಾಗುತ್ತದೆ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ.<br /> <br /> ತಾಲ್ಲೂಕಿನ ಬಹುತೇಕ ಹಳ್ಳಿಗಳ ಕಥೆ ಕೂಡ ಹಡಗಿನಮಕ್ಕಿ ಗ್ರಾಮಕ್ಕಿಂತ ಭಿನ್ನವಾಗಿಲ್ಲ!. ಮಲೆನಾಡಿನಲ್ಲಿ ಪ್ರತಿ ಗದ್ದೆ ಬಯಲಿನ ಅಂಚಲ್ಲಿ ಹಳ್ಳ, ಕಿರು ಹಳ್ಳಗಳು ಸಾಮಾನ್ಯವಾಗಿ ಹರಿಯುತ್ತವೆ. ಈ ಹಳ್ಳಗಳನ್ನು ದಾಟಿ ಶಾಲಾ, ಕಾಲೇಜು, ಪೇಟೆಗೆ ಹೋಗಬೇಕಾಗುತ್ತದೆ.<br /> <br /> ಮಳೆಗಾಲದಲ್ಲಿ ಸುರಿಯುವ ಮಳೆಯಿಂದಾಗಿ ಬೋರ್ಗೆರೆಯುವ ಹಳ್ಳಗಳು ತಗ್ಗಿದ ಮೇಲೆ ದಾಟಿ ಸಾಗಬೇಕಾಗುತ್ತದೆ. ಕೆಲವು ಹಳ್ಳಗಳಿಗೆ ಗ್ರಾಮಸ್ಥರೇ ಸೇರಿಕೊಂಡು ಮರದ ಕಿರು ಸೇತುವೆಯನ್ನು ನಿರ್ಮಿಸಿ ತಮ್ಮ ಮಕ್ಕಳನ್ನು ಶಾಲೆಗೆ ದಾಟಿಸಿ ಬರುತ್ತಾರೆ. ಸಂಜೆ ಶಾಲೆ ಬಿಟ್ಟ ನಂತರ ಮಕ್ಕಳನ್ನು ಈ ಕಾಲುಸಂಕದಲ್ಲಿ ನಿಧಾನಕ್ಕೆ ಕೈಹಿಡಿದು ದಾಟಿಸಿ ಕರೆ ತರುತ್ತಾರೆ. ಶಾಲೆಗೆ ಮಕ್ಕಳನ್ನು ಕಳುಹಿಸಿದ ಪೋಷಕರು ನಿರಾತಂಕವಾಗಿ ಇರುವಂತಿಲ್ಲ. ಎರಡು ಬಾರಿ ಮಕ್ಕಳನ್ನು ಪ್ರತಿ ನಿತ್ಯ ಕಾಲು ಸಂಕ ದಾಟಿಸುವ ಕೆಲಸ ಮಾಡಲೇ ಬೇಕು.<br /> <br /> ದೇವಂಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಡಗಿನಮಕ್ಕಿ ಗಡಬಡೆ ಹಳ್ಳಕ್ಕೆ ಕಳೆದ ಅನೇಕ ವರ್ಷಗಳಿಂದ ಕಿರು ಸೇತುವೆ ನಿರ್ಮಿಸಿಕೊಡಿ ಎಂಬ ಗ್ರಾಮಸ್ಥರ ಬೇಡಿಕೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಈ ಭಾಗದ ಕುಪಳ್ಳಿ, ಜಟ್ಟಿನಮಕ್ಕಿ, ಹಡಗಿನಮಕ್ಕಿ ಊರುಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಮನೆಗಳಿವೆ. ಪ್ರತಿನಿತ್ಯದ ಸಂಚಾರಕ್ಕೆ ಹಡಗಿನಮಕ್ಕಿ ಗಡಬಡೆಹಳ್ಳವನ್ನು ಜೀವ ಕೈಯಲ್ಲಿ ಹಿಡಿದು ದಾಟಬೇಕಾಗಿದೆ. ಜನಪ್ರತಿನಿಧಿಗಳು, ತಾಲ್ಲೂಕ ಆಡಳಿತ ಸ್ಪಂದಿಸದೇ ಇದ್ದುದನ್ನು ಮನಗಂಡ ಗ್ರಾಮಸ್ಥರು ಅಡಿಕೆ ಮರಗಳ ಸಹಾಯದಿಂದ ಸಾರ(ಸಂಕ) ನಿರ್ಮಿಸಿಕೊಂಡಿದ್ದಾರೆ.<br /> <br /> `ಮಳೆಗಾಲದಲ್ಲಿ ಈ ಭಾಗದ ಹಳ್ಳಿಗಳ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಬೇಸಿಗೆಯಲ್ಲಿ ಹೇಗೋ ನಡೆಯುತ್ತದೆ. ಕಿರು ಸೇತುವೆ ನಿರ್ಮಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೆ ಈವರೆವಿಗೂ ಸೇತುವೆ ನಿರ್ಮಾಣಕ್ಕೆ ಹಣ ಬಂದಿಲ್ಲ' ಎಂದು ದೇವಂಗಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ದೇವಂಗಿ ಮಹೇಶ್ ತಿಳಿಸಿದ್ದಾರೆ.<br /> <br /> `ಈ ಹಳ್ಳಕ್ಕೆ ಹಿಂದೆ ಕಲ್ಲು ಸಾರ ಇತ್ತು. ಈಗ ಅದು ಬಿದ್ದು ಹೋಗಿದೆ. ಬಡವರು ಕೂಲಿಕಾರರೇ ಹೆಚ್ಚಾಗಿರುವ ಈ ಊರಿನ ಸಂಪರ್ಕಕ್ಕೆ ಕಿರು ಸೇತುವೆಯ ಅಗತ್ಯವಿದೆ. ಗ್ರಾಮ ಪಂಚಾಯ್ತಿಗೆ ಬರುವ ಅನುದಾನದಲ್ಲಿ ಇದನ್ನು ನಿರ್ಮಿಸಲು ಸಾಧ್ಯವಾಗಿಲ್ಲ.<br /> ಸರ್ಕಾರ ಈ ಬಗ್ಗೆ ಹೆಚ್ಚು ಗಮನಹರಿಸಿ ಆದಷ್ಟು ಬೇಗ ಕಿರು ಸೇತುವೆಯನ್ನು ನಿರ್ಮಿಸಬೇಕು' ಎಂದು ದೇವಂಗಿ ಗ್ರಾಮ ಪಂಚಾಯ್ತಿ ಸದಸ್ಯೆ ರೇವತಿ ಸುಬ್ರಮಣ್ಯ ಹೇಳುತ್ತಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೀರ್ಥಹಳ್ಳಿ:</strong> `ಸಾಕಪ್ಪಾ ಸಾಕು ಈ ಊರಿನ ಸಹವಾಸ, ಮಳೆಗಾಲ ಬಂತೆಂದರೆ ನಮ್ಮ ಕಡು ವೈರಿಗೂ ಬೇಡ ಈ ಕಷ್ಟ' ಎಂದು ಮರುಗುವ ಹಡಗಿನಮಕ್ಕಿ ಗ್ರಾಮಸ್ಥರು ಗಡೆಬಡೆಹಳ್ಳಕ್ಕೆ ಯಾವಾಗ ಕಿರು ಸೇತುವೆ ನಿರ್ಮಾಣವಾಗುತ್ತದೆ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ.<br /> <br /> ತಾಲ್ಲೂಕಿನ ಬಹುತೇಕ ಹಳ್ಳಿಗಳ ಕಥೆ ಕೂಡ ಹಡಗಿನಮಕ್ಕಿ ಗ್ರಾಮಕ್ಕಿಂತ ಭಿನ್ನವಾಗಿಲ್ಲ!. ಮಲೆನಾಡಿನಲ್ಲಿ ಪ್ರತಿ ಗದ್ದೆ ಬಯಲಿನ ಅಂಚಲ್ಲಿ ಹಳ್ಳ, ಕಿರು ಹಳ್ಳಗಳು ಸಾಮಾನ್ಯವಾಗಿ ಹರಿಯುತ್ತವೆ. ಈ ಹಳ್ಳಗಳನ್ನು ದಾಟಿ ಶಾಲಾ, ಕಾಲೇಜು, ಪೇಟೆಗೆ ಹೋಗಬೇಕಾಗುತ್ತದೆ.<br /> <br /> ಮಳೆಗಾಲದಲ್ಲಿ ಸುರಿಯುವ ಮಳೆಯಿಂದಾಗಿ ಬೋರ್ಗೆರೆಯುವ ಹಳ್ಳಗಳು ತಗ್ಗಿದ ಮೇಲೆ ದಾಟಿ ಸಾಗಬೇಕಾಗುತ್ತದೆ. ಕೆಲವು ಹಳ್ಳಗಳಿಗೆ ಗ್ರಾಮಸ್ಥರೇ ಸೇರಿಕೊಂಡು ಮರದ ಕಿರು ಸೇತುವೆಯನ್ನು ನಿರ್ಮಿಸಿ ತಮ್ಮ ಮಕ್ಕಳನ್ನು ಶಾಲೆಗೆ ದಾಟಿಸಿ ಬರುತ್ತಾರೆ. ಸಂಜೆ ಶಾಲೆ ಬಿಟ್ಟ ನಂತರ ಮಕ್ಕಳನ್ನು ಈ ಕಾಲುಸಂಕದಲ್ಲಿ ನಿಧಾನಕ್ಕೆ ಕೈಹಿಡಿದು ದಾಟಿಸಿ ಕರೆ ತರುತ್ತಾರೆ. ಶಾಲೆಗೆ ಮಕ್ಕಳನ್ನು ಕಳುಹಿಸಿದ ಪೋಷಕರು ನಿರಾತಂಕವಾಗಿ ಇರುವಂತಿಲ್ಲ. ಎರಡು ಬಾರಿ ಮಕ್ಕಳನ್ನು ಪ್ರತಿ ನಿತ್ಯ ಕಾಲು ಸಂಕ ದಾಟಿಸುವ ಕೆಲಸ ಮಾಡಲೇ ಬೇಕು.<br /> <br /> ದೇವಂಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಡಗಿನಮಕ್ಕಿ ಗಡಬಡೆ ಹಳ್ಳಕ್ಕೆ ಕಳೆದ ಅನೇಕ ವರ್ಷಗಳಿಂದ ಕಿರು ಸೇತುವೆ ನಿರ್ಮಿಸಿಕೊಡಿ ಎಂಬ ಗ್ರಾಮಸ್ಥರ ಬೇಡಿಕೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಈ ಭಾಗದ ಕುಪಳ್ಳಿ, ಜಟ್ಟಿನಮಕ್ಕಿ, ಹಡಗಿನಮಕ್ಕಿ ಊರುಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಮನೆಗಳಿವೆ. ಪ್ರತಿನಿತ್ಯದ ಸಂಚಾರಕ್ಕೆ ಹಡಗಿನಮಕ್ಕಿ ಗಡಬಡೆಹಳ್ಳವನ್ನು ಜೀವ ಕೈಯಲ್ಲಿ ಹಿಡಿದು ದಾಟಬೇಕಾಗಿದೆ. ಜನಪ್ರತಿನಿಧಿಗಳು, ತಾಲ್ಲೂಕ ಆಡಳಿತ ಸ್ಪಂದಿಸದೇ ಇದ್ದುದನ್ನು ಮನಗಂಡ ಗ್ರಾಮಸ್ಥರು ಅಡಿಕೆ ಮರಗಳ ಸಹಾಯದಿಂದ ಸಾರ(ಸಂಕ) ನಿರ್ಮಿಸಿಕೊಂಡಿದ್ದಾರೆ.<br /> <br /> `ಮಳೆಗಾಲದಲ್ಲಿ ಈ ಭಾಗದ ಹಳ್ಳಿಗಳ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಬೇಸಿಗೆಯಲ್ಲಿ ಹೇಗೋ ನಡೆಯುತ್ತದೆ. ಕಿರು ಸೇತುವೆ ನಿರ್ಮಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೆ ಈವರೆವಿಗೂ ಸೇತುವೆ ನಿರ್ಮಾಣಕ್ಕೆ ಹಣ ಬಂದಿಲ್ಲ' ಎಂದು ದೇವಂಗಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ದೇವಂಗಿ ಮಹೇಶ್ ತಿಳಿಸಿದ್ದಾರೆ.<br /> <br /> `ಈ ಹಳ್ಳಕ್ಕೆ ಹಿಂದೆ ಕಲ್ಲು ಸಾರ ಇತ್ತು. ಈಗ ಅದು ಬಿದ್ದು ಹೋಗಿದೆ. ಬಡವರು ಕೂಲಿಕಾರರೇ ಹೆಚ್ಚಾಗಿರುವ ಈ ಊರಿನ ಸಂಪರ್ಕಕ್ಕೆ ಕಿರು ಸೇತುವೆಯ ಅಗತ್ಯವಿದೆ. ಗ್ರಾಮ ಪಂಚಾಯ್ತಿಗೆ ಬರುವ ಅನುದಾನದಲ್ಲಿ ಇದನ್ನು ನಿರ್ಮಿಸಲು ಸಾಧ್ಯವಾಗಿಲ್ಲ.<br /> ಸರ್ಕಾರ ಈ ಬಗ್ಗೆ ಹೆಚ್ಚು ಗಮನಹರಿಸಿ ಆದಷ್ಟು ಬೇಗ ಕಿರು ಸೇತುವೆಯನ್ನು ನಿರ್ಮಿಸಬೇಕು' ಎಂದು ದೇವಂಗಿ ಗ್ರಾಮ ಪಂಚಾಯ್ತಿ ಸದಸ್ಯೆ ರೇವತಿ ಸುಬ್ರಮಣ್ಯ ಹೇಳುತ್ತಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>