<p>`ಬರಹ ಸಂಸ್ಕೃತಿ~ಯನ್ನು ಉಳಿಸಿ - ಬೆಳೆಸುವ ಸಲುವಾಗಿ ನಾನು ಕಳೆದ ಹನ್ನೆರಡು ವರ್ಷಗಳಿಂದ `ಪತ್ರ-ಸಂಸ್ಕೃತಿ~ ಎಂಬ ಸಂಘಟನೆಯನ್ನು ಆರಂಭಿಸಿ ಮಾನವೀಯ ಮೌಲ್ಯ ಹಾಗೂ ಸಂಬಂಧಗಳನ್ನು ಬೆಸೆವ ಕಾರ್ಯದಲ್ಲಿ ನಿರತನಾಗಿದ್ದೇನೆ.<br /> <br /> ಆದರೆ ಇತ್ತೀಚೆಗೆ ನಾವು ಅಂಚೆ ಡಬ್ಬಿಗೆ ಹಾಕಿದ ಪತ್ರಗಳು ಮತ್ತು ಪತ್ರಿಕೆಗಳು ವಿಳಾಸದಾರರಿಗೆ ಸರಿಯಾಗಿ ತಲುಪುತ್ತಿಲ್ಲ. ಈ ಬಗ್ಗೆ ನನಗೆ ಅನೇಕ ದೂರುಗಳು ಬಂದಿವೆ. <br /> <br /> ಇಷ್ಟೇ ಅಲ್ಲದೆ ಅಲ್ಲಲ್ಲಿ ತೂಗು ಹಾಕಲಾಗಿದ್ದ ಅಂಚೆ ಪೆಟ್ಟಿಗೆಗಳೂ ನಾಪತ್ತೆಯಾಗುತ್ತಿವೆ. ಇದರಿಂದ ಪತ್ರಗಳು ವಿಳಾಸದಾರರಿಗೆ ತಲುಪುವುದಾದರೂ ಹೇಗೆ? ಪತ್ರ ಸಂಸ್ಕೃತಿ ನಾಶದಿಂದ ಬರವಣಿಗೆಮೂಲೆಗುಂಪಾಗುತ್ತಿದೆ. ಬರಹದಿಂದ ನಮ್ಮ ಭಾಷೆ ಬೆಳೆಯುತ್ತದೆ. ವಿಚಾರ ವಿನಿಮಯದಿಂದ ಜ್ಞಾನವೃದ್ಧಿಯಾಗುತ್ತದೆ. <br /> <br /> ಆದ್ದರಿಂದ ಪತ್ರಗಳನ್ನು ಸರಿಯಾಗಿ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಅಂಚೆ ಇಲಾಖೆ ನಿರ್ವಹಿಸಬೇಕು. ಕನಿಷ್ಠ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಾದರೂ ಅಂಚೆ ಡಬ್ಬಿಗಳನ್ನು ಇಡಲು ಅಂಚೆ ಇಲಾಖೆಯವರು ಕ್ರಮಕೈಗೊಳ್ಳಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಬರಹ ಸಂಸ್ಕೃತಿ~ಯನ್ನು ಉಳಿಸಿ - ಬೆಳೆಸುವ ಸಲುವಾಗಿ ನಾನು ಕಳೆದ ಹನ್ನೆರಡು ವರ್ಷಗಳಿಂದ `ಪತ್ರ-ಸಂಸ್ಕೃತಿ~ ಎಂಬ ಸಂಘಟನೆಯನ್ನು ಆರಂಭಿಸಿ ಮಾನವೀಯ ಮೌಲ್ಯ ಹಾಗೂ ಸಂಬಂಧಗಳನ್ನು ಬೆಸೆವ ಕಾರ್ಯದಲ್ಲಿ ನಿರತನಾಗಿದ್ದೇನೆ.<br /> <br /> ಆದರೆ ಇತ್ತೀಚೆಗೆ ನಾವು ಅಂಚೆ ಡಬ್ಬಿಗೆ ಹಾಕಿದ ಪತ್ರಗಳು ಮತ್ತು ಪತ್ರಿಕೆಗಳು ವಿಳಾಸದಾರರಿಗೆ ಸರಿಯಾಗಿ ತಲುಪುತ್ತಿಲ್ಲ. ಈ ಬಗ್ಗೆ ನನಗೆ ಅನೇಕ ದೂರುಗಳು ಬಂದಿವೆ. <br /> <br /> ಇಷ್ಟೇ ಅಲ್ಲದೆ ಅಲ್ಲಲ್ಲಿ ತೂಗು ಹಾಕಲಾಗಿದ್ದ ಅಂಚೆ ಪೆಟ್ಟಿಗೆಗಳೂ ನಾಪತ್ತೆಯಾಗುತ್ತಿವೆ. ಇದರಿಂದ ಪತ್ರಗಳು ವಿಳಾಸದಾರರಿಗೆ ತಲುಪುವುದಾದರೂ ಹೇಗೆ? ಪತ್ರ ಸಂಸ್ಕೃತಿ ನಾಶದಿಂದ ಬರವಣಿಗೆಮೂಲೆಗುಂಪಾಗುತ್ತಿದೆ. ಬರಹದಿಂದ ನಮ್ಮ ಭಾಷೆ ಬೆಳೆಯುತ್ತದೆ. ವಿಚಾರ ವಿನಿಮಯದಿಂದ ಜ್ಞಾನವೃದ್ಧಿಯಾಗುತ್ತದೆ. <br /> <br /> ಆದ್ದರಿಂದ ಪತ್ರಗಳನ್ನು ಸರಿಯಾಗಿ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಅಂಚೆ ಇಲಾಖೆ ನಿರ್ವಹಿಸಬೇಕು. ಕನಿಷ್ಠ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಾದರೂ ಅಂಚೆ ಡಬ್ಬಿಗಳನ್ನು ಇಡಲು ಅಂಚೆ ಇಲಾಖೆಯವರು ಕ್ರಮಕೈಗೊಳ್ಳಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>