<p><strong>ಬೆಂಗಳೂರು:</strong> `ಗ್ಲಿಂಪ್ಸಸ್ ಆಫ್ ಅವರ್ ಕಾನ್ಸ್ಟಿಟ್ಯೂಷನ್~ ಪುಸ್ತಕವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ವಜನ ಸಮಾಜ ವೇದಿಕೆಯ ಕಾರ್ಯಕರ್ತರು ನಗರದ ಟೌನ್ಹಾಲ್ ಬಳಿ ಗುರುವಾರ ಧರಣಿ ನಡೆಸಿದರು.</p>.<p>ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಬಿ.ಗೋಪಾಲ್ ಮಾತನಾಡಿ `ಈ ಪುಸ್ತಕದಲ್ಲಿ ಬೆನಗಲ್ ನರಸಿಂಹರಾವ್ ಅವರು ಸಂವಿಧಾನದ ಕರಡನ್ನು ತಯಾರಿಸಿದರು.</p>.<p>ಅದನ್ನು ಓದಲು ಬಿ.ಆರ್.ಅಂಬೇಡ್ಕರ್ ನೇತೃತ್ವದ ಸಮಿತಿಯನ್ನು ರಚಿಸಲಾಯಿತು ಎಂದು ಬರೆದಿದ್ದಾರೆ. ಆ ಕರಡನ್ನು ಓದುವುದಷ್ಟೇ ಅಂಬೇಡ್ಕರ್ ಅವರ ಕೆಲಸವಾಗಿತ್ತು ಎಂದು ಹೇಳಿರುವುದು ಹಾಸ್ಯಾಸ್ಪದ ಹಾಗೂ ಖಂಡನೀಯ~ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>`ಸಂವಿಧಾನ ಕರಡನ್ನು ರಚಿಸಲು ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ಏಳು ಜನರ ಸಮಿತಿ ರಚಿಸಲಾಗಿತ್ತು. ಆದರೆ, ಆರು ಜನ ಸಮಿತಿಯಿಂದ ದೂರ ಉಳಿದ ಕಾರಣ ಅಂಬೇಡ್ಕರ್ ಒಬ್ಬರೇ ಸಂವಿಧಾನದ ಕರಡು ರಚಿಸಿದರು ಎಂದು ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿದ್ದ ಟಿ.ಟಿ.ಕೃಷ್ಣಮಾಚಾರಿ ಅವರೇ ಹೇಳಿದ್ದಾರೆ.</p>.<p>ಇತಿಹಾಸದ ಅರಿವಿಲ್ಲದ ಪಿ.ಎ.ಕುಮಾರ್ ಹಾಗೂ ಇತರೆ ಮೂವರು ಸೇರಿಕೊಂಡು ಈ ಪುಸ್ತಕವನ್ನು ಬರೆದಿದ್ದಾರೆ. ಇಂತಹ ಪುಸ್ತಕ ಬರೆದಿದ್ದಾರೆ~ ಎಂದರು. ಇತ್ತೀಚೆಗೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕೈಪಿಡಿಯಾಗಿ ಈ ಪುಸ್ತಕವನ್ನು ಬಳಸಲಾಗಿದೆ.</p>.<p>ಹೀಗೆ ಅಂಬೇಡ್ಕರ್ ಅವರಿಗೆ ಅವಮಾನಿಸಿರುವ ಪುಸ್ತಕದ ಲೇಖಕರನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಗ್ಲಿಂಪ್ಸಸ್ ಆಫ್ ಅವರ್ ಕಾನ್ಸ್ಟಿಟ್ಯೂಷನ್~ ಪುಸ್ತಕವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ವಜನ ಸಮಾಜ ವೇದಿಕೆಯ ಕಾರ್ಯಕರ್ತರು ನಗರದ ಟೌನ್ಹಾಲ್ ಬಳಿ ಗುರುವಾರ ಧರಣಿ ನಡೆಸಿದರು.</p>.<p>ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಬಿ.ಗೋಪಾಲ್ ಮಾತನಾಡಿ `ಈ ಪುಸ್ತಕದಲ್ಲಿ ಬೆನಗಲ್ ನರಸಿಂಹರಾವ್ ಅವರು ಸಂವಿಧಾನದ ಕರಡನ್ನು ತಯಾರಿಸಿದರು.</p>.<p>ಅದನ್ನು ಓದಲು ಬಿ.ಆರ್.ಅಂಬೇಡ್ಕರ್ ನೇತೃತ್ವದ ಸಮಿತಿಯನ್ನು ರಚಿಸಲಾಯಿತು ಎಂದು ಬರೆದಿದ್ದಾರೆ. ಆ ಕರಡನ್ನು ಓದುವುದಷ್ಟೇ ಅಂಬೇಡ್ಕರ್ ಅವರ ಕೆಲಸವಾಗಿತ್ತು ಎಂದು ಹೇಳಿರುವುದು ಹಾಸ್ಯಾಸ್ಪದ ಹಾಗೂ ಖಂಡನೀಯ~ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>`ಸಂವಿಧಾನ ಕರಡನ್ನು ರಚಿಸಲು ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ಏಳು ಜನರ ಸಮಿತಿ ರಚಿಸಲಾಗಿತ್ತು. ಆದರೆ, ಆರು ಜನ ಸಮಿತಿಯಿಂದ ದೂರ ಉಳಿದ ಕಾರಣ ಅಂಬೇಡ್ಕರ್ ಒಬ್ಬರೇ ಸಂವಿಧಾನದ ಕರಡು ರಚಿಸಿದರು ಎಂದು ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿದ್ದ ಟಿ.ಟಿ.ಕೃಷ್ಣಮಾಚಾರಿ ಅವರೇ ಹೇಳಿದ್ದಾರೆ.</p>.<p>ಇತಿಹಾಸದ ಅರಿವಿಲ್ಲದ ಪಿ.ಎ.ಕುಮಾರ್ ಹಾಗೂ ಇತರೆ ಮೂವರು ಸೇರಿಕೊಂಡು ಈ ಪುಸ್ತಕವನ್ನು ಬರೆದಿದ್ದಾರೆ. ಇಂತಹ ಪುಸ್ತಕ ಬರೆದಿದ್ದಾರೆ~ ಎಂದರು. ಇತ್ತೀಚೆಗೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕೈಪಿಡಿಯಾಗಿ ಈ ಪುಸ್ತಕವನ್ನು ಬಳಸಲಾಗಿದೆ.</p>.<p>ಹೀಗೆ ಅಂಬೇಡ್ಕರ್ ಅವರಿಗೆ ಅವಮಾನಿಸಿರುವ ಪುಸ್ತಕದ ಲೇಖಕರನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>