<p>ಮುದ್ದೇಬಿಹಾಳ: ಪಟ್ಟಣದಲ್ಲಿ ಈಗಾಗಲೇ ಸ್ಥಾಪಿಸಿರುವ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿಯ ಉದ್ಘಾಟನೆ ಪದೇ ಪದೇ ಮುಂದಕ್ಕೆ ಹೋಗುತ್ತಿರು ವುದನ್ನು ವಿರೋಧಿಸಿ ತಾಲ್ಲೂಕಿನ ಬಹುಜನ ಸಮಾಜ ಪಕ್ಷದ ಪದಾಧಿ ಕಾರಿಗಳು ಮಂಗಳವಾರ ತಹಸೀಲದಾರರನ್ನು ಭೇಟಿ ಮಾಡಿ ಕೂಡಲೇ ಮೂರ್ತಿ ಅನಾವರಣ ಮಾಡುವಂತೆ ಆಗ್ರಹಿಸಿದರು.<br /> <br /> ಪಟ್ಟಣದ ಓಂ ಶಾಂತಿ ಭವನದ ಮುಂದೆ ಡಾ.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಯಾಗಿ ಐದು ವರ್ಷ ಗಳಾಗಿವೆ. ಆದರೆ ಇದರ ಅನಾವರಣ ಕಾರ್ಯ ಯಾವುದಾದರೂ ನೆಪಕ್ಕೆ ಮುಂದಕ್ಕೆ ಹೋಗುತ್ತಿರುವುದು ಸರಿಯಲ್ಲ. ಭಾರತದ ಹೆಮ್ಮೆಯ ಪುತ್ರನನ್ನು ಈ ರೀತಿಯಲ್ಲಿ ಮರೆಯಲ್ಲಿ ಎಷ್ಟು ದಿನ ನಿಲ್ಲಿಸುತ್ತೀರಿ ಎಂದು ಅವರು ಪ್ರಶ್ನಿಸಿದ್ದು, ಈ ಕೂಡಲೇ ಅದನ್ನು ಉದ್ಘಾಟನೆ ಮಾಡದಿದ್ದರೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಬಂದ್ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.<br /> <br /> ತಾಲ್ಲೂಕು ಬಿ.ಎಸ್.ಪಿ. ಅಧ್ಯಕ್ಷ ಕೆ.ಬಿ.ದೊಡ್ಡಮನಿ, ಕೆ.ಬಿ.ಗೌಡರ, ಬಸು ಸಿದ್ದಾಪೂರ, ಬಾಲು ಸಿದ್ದಾಪೂರ, ಪರಶುರಾಮ ಚಲವಾದಿ, ಮಾರುತಿ ಚಲವಾದಿ, ಎಸ್.ಬಿ.ಕಟ್ಟಿಮನಿ, ಎಂ.ಬಿ.ಗುಬಚಿ, ಉಮೇಶ ಆಲಕೊಪ್ಪರ, ಶಶಿಕುಮಾರ ಗುಬಚಿ, ಸಂತೋಷ ತಮಗೊಂಡ, ಐ.ಕೆ. ಸಾಸನೂರ ಮೊದಲಾದವರು ನಿಯೋಗದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುದ್ದೇಬಿಹಾಳ: ಪಟ್ಟಣದಲ್ಲಿ ಈಗಾಗಲೇ ಸ್ಥಾಪಿಸಿರುವ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿಯ ಉದ್ಘಾಟನೆ ಪದೇ ಪದೇ ಮುಂದಕ್ಕೆ ಹೋಗುತ್ತಿರು ವುದನ್ನು ವಿರೋಧಿಸಿ ತಾಲ್ಲೂಕಿನ ಬಹುಜನ ಸಮಾಜ ಪಕ್ಷದ ಪದಾಧಿ ಕಾರಿಗಳು ಮಂಗಳವಾರ ತಹಸೀಲದಾರರನ್ನು ಭೇಟಿ ಮಾಡಿ ಕೂಡಲೇ ಮೂರ್ತಿ ಅನಾವರಣ ಮಾಡುವಂತೆ ಆಗ್ರಹಿಸಿದರು.<br /> <br /> ಪಟ್ಟಣದ ಓಂ ಶಾಂತಿ ಭವನದ ಮುಂದೆ ಡಾ.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಯಾಗಿ ಐದು ವರ್ಷ ಗಳಾಗಿವೆ. ಆದರೆ ಇದರ ಅನಾವರಣ ಕಾರ್ಯ ಯಾವುದಾದರೂ ನೆಪಕ್ಕೆ ಮುಂದಕ್ಕೆ ಹೋಗುತ್ತಿರುವುದು ಸರಿಯಲ್ಲ. ಭಾರತದ ಹೆಮ್ಮೆಯ ಪುತ್ರನನ್ನು ಈ ರೀತಿಯಲ್ಲಿ ಮರೆಯಲ್ಲಿ ಎಷ್ಟು ದಿನ ನಿಲ್ಲಿಸುತ್ತೀರಿ ಎಂದು ಅವರು ಪ್ರಶ್ನಿಸಿದ್ದು, ಈ ಕೂಡಲೇ ಅದನ್ನು ಉದ್ಘಾಟನೆ ಮಾಡದಿದ್ದರೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಬಂದ್ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.<br /> <br /> ತಾಲ್ಲೂಕು ಬಿ.ಎಸ್.ಪಿ. ಅಧ್ಯಕ್ಷ ಕೆ.ಬಿ.ದೊಡ್ಡಮನಿ, ಕೆ.ಬಿ.ಗೌಡರ, ಬಸು ಸಿದ್ದಾಪೂರ, ಬಾಲು ಸಿದ್ದಾಪೂರ, ಪರಶುರಾಮ ಚಲವಾದಿ, ಮಾರುತಿ ಚಲವಾದಿ, ಎಸ್.ಬಿ.ಕಟ್ಟಿಮನಿ, ಎಂ.ಬಿ.ಗುಬಚಿ, ಉಮೇಶ ಆಲಕೊಪ್ಪರ, ಶಶಿಕುಮಾರ ಗುಬಚಿ, ಸಂತೋಷ ತಮಗೊಂಡ, ಐ.ಕೆ. ಸಾಸನೂರ ಮೊದಲಾದವರು ನಿಯೋಗದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>