<p>ನೂತನ ಸರ್ಕಾರ ವಿವಿಧ ಅಕಾಡೆಮಿ ಅಧ್ಯಕ್ಷರುಗಳ ರಾಜೀನಾಮೆ ಕೇಳಿರುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಲೋಕದ ಗಣ್ಯರಿಂದ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇತ್ತೀಚೆಗೆ ಯಾವುದೇ ಕ್ಷೇತ್ರವೂ ರಾಜಕೀಯದಿಂದ ಹೊರತಾಗಿಲ್ಲ. ಎಲ್ಲ ಕ್ಷೇತ್ರದ ಮುಖಂಡರೂ ಒಂದಲ್ಲಾ ಒಂದು ರೀತಿಯ ರಾಜಕೀಯ ನಂಟು ಹೊಂದಿದವರೇ.</p>.<p>ಒಂದು ಪಕ್ಷದ ಪರ ನೇರಾತಿನೇರ ಪ್ರಚಾರ ಮಾಡಿ ಮತ್ತೊಂದು ಪಕ್ಷ ಅಧಿಕಾರಕ್ಕೆ ಬಂದರೂ ಸ್ಥಾನ ಬಿಟ್ಟುಕೊಡದ ಸಾಂಸ್ಕೃತಿಕ ಪ್ರಭೃತಿಗಳು ಸರ್ಕಾರ ಹೇಳುವತನಕ ಅಧಿಕಾರಕ್ಕೆ ಏಕೆ ಅಂಟಿಕೊಳ್ಳಬೇಕು?<br /> <br /> ಅಕಾಡೆಮಿಗಳನ್ನು ಸ್ವಾಯತ್ತ ಸಂಸ್ಥೆಗಳೆಂದು ಪರಿಗಣಿಸುವ ವಿಚಾರವಂತರು ಈ ಬಗ್ಗೆ ಯೋಚಿಸಬೇಕು. ಈ ಅಕಾಡೆಮಿಗಳಿಗೆ ಸರ್ಕಾರ ನೀಡುತ್ತಿರುವ ಆರ್ಥಿಕ ಅನುದಾನವೇ ಬೆನ್ನೆಲುಬಾಗಿದೆ. ಈ ಅನುದಾನದ ಹೊರತು ಈ ಅಕಾಡೆಮಿಗಳು ಯಾವುದೇ ಸಂಪನ್ಮೂಲ ಕ್ರೋಡೀಕರಣ ಮಾಡುತ್ತಿಲ್ಲ. ಸರ್ಕಾರ ನೀಡುವ ಅನುದಾನವೂ ಜನರ ದುಡ್ಡೇ ಹೌದು. ಸರ್ಕಾರವೂ ಜನರಿಂದ ಆರಿಸಿದ್ದೇ. ಪ್ರತಿ ಸರ್ಕಾರದ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ನಿಲುವುಗಳೂ ಭಿನ್ನವಾಗಿರುತ್ತವೆ. ಅದಕ್ಕೆ ತಕ್ಕಂತಹ ವ್ಯಕ್ತಿಗಳ ಆಯ್ಕೆ ಸರ್ಕಾರದ ಹಕ್ಕು.<br /> <br /> ಒಂದು ಉದಾಹರಣೆಯನ್ನು ತಮ್ಮ ಗಮನಕ್ಕೆ ತರುತ್ತೇನೆ. ಕಾಂಗ್ರೆಸ್-ಜನತಾ ದಳ ಸಮ್ಮಿಶ್ರ ಸರ್ಕಾರದಿಂದ ನೇಮಿತರಾದವರು ಜನತಾದಳ-ಬಿಜೆಪಿ ಸಮ್ಮಿಶ್ರದಲ್ಲೂ ಮುಂದುವರಿದು, ಬಿಜೆಪಿಯ 5 ವರ್ಷಗಳಲ್ಲೂ ಮುಂದುವರಿದು ಇದೀಗ ರಾಜೀನಾಮೆ ನೀಡಲು ಸರ್ಕಾರದ ಆದೇಶಕಾಯುತ್ತಿರುವ ಸಂದರ್ಭವನ್ನು ಸಾಂಸ್ಕೃತಿಕ ಲೋಕ ಯಾವ ರೀತಿ ಅರ್ಥೈಸುತ್ತದೆ? ಆತ್ಮವಿಮರ್ಶೆ ಮಾಡಿಕೊಳ್ಳುವ ಸಹಜ ಸೌಜನ್ಯ ಮರೆತಿರುವ ಸಾಂಸ್ಕೃತಿಕ ವಲಯದ ಅಧಿಕಾರದಾಹಿಗಳನ್ನು ಕೆಳಗಿಳಿಸದಿದ್ದರೆ ಅದು ಸರ್ಕಾರದ `ಲೋಪ' ವಾಗುತ್ತದೆ. ಜನಾದೇಶ ನಿರಾಕರಿಸಿದಂತಾಗುತ್ತದೆ. <br /> <strong>-ಅನ್ನಪೂರ್ಣ ವೆಂಕಟನಂಜಪ್ಪ, ತುಮಕೂರು.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನೂತನ ಸರ್ಕಾರ ವಿವಿಧ ಅಕಾಡೆಮಿ ಅಧ್ಯಕ್ಷರುಗಳ ರಾಜೀನಾಮೆ ಕೇಳಿರುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಲೋಕದ ಗಣ್ಯರಿಂದ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇತ್ತೀಚೆಗೆ ಯಾವುದೇ ಕ್ಷೇತ್ರವೂ ರಾಜಕೀಯದಿಂದ ಹೊರತಾಗಿಲ್ಲ. ಎಲ್ಲ ಕ್ಷೇತ್ರದ ಮುಖಂಡರೂ ಒಂದಲ್ಲಾ ಒಂದು ರೀತಿಯ ರಾಜಕೀಯ ನಂಟು ಹೊಂದಿದವರೇ.</p>.<p>ಒಂದು ಪಕ್ಷದ ಪರ ನೇರಾತಿನೇರ ಪ್ರಚಾರ ಮಾಡಿ ಮತ್ತೊಂದು ಪಕ್ಷ ಅಧಿಕಾರಕ್ಕೆ ಬಂದರೂ ಸ್ಥಾನ ಬಿಟ್ಟುಕೊಡದ ಸಾಂಸ್ಕೃತಿಕ ಪ್ರಭೃತಿಗಳು ಸರ್ಕಾರ ಹೇಳುವತನಕ ಅಧಿಕಾರಕ್ಕೆ ಏಕೆ ಅಂಟಿಕೊಳ್ಳಬೇಕು?<br /> <br /> ಅಕಾಡೆಮಿಗಳನ್ನು ಸ್ವಾಯತ್ತ ಸಂಸ್ಥೆಗಳೆಂದು ಪರಿಗಣಿಸುವ ವಿಚಾರವಂತರು ಈ ಬಗ್ಗೆ ಯೋಚಿಸಬೇಕು. ಈ ಅಕಾಡೆಮಿಗಳಿಗೆ ಸರ್ಕಾರ ನೀಡುತ್ತಿರುವ ಆರ್ಥಿಕ ಅನುದಾನವೇ ಬೆನ್ನೆಲುಬಾಗಿದೆ. ಈ ಅನುದಾನದ ಹೊರತು ಈ ಅಕಾಡೆಮಿಗಳು ಯಾವುದೇ ಸಂಪನ್ಮೂಲ ಕ್ರೋಡೀಕರಣ ಮಾಡುತ್ತಿಲ್ಲ. ಸರ್ಕಾರ ನೀಡುವ ಅನುದಾನವೂ ಜನರ ದುಡ್ಡೇ ಹೌದು. ಸರ್ಕಾರವೂ ಜನರಿಂದ ಆರಿಸಿದ್ದೇ. ಪ್ರತಿ ಸರ್ಕಾರದ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ನಿಲುವುಗಳೂ ಭಿನ್ನವಾಗಿರುತ್ತವೆ. ಅದಕ್ಕೆ ತಕ್ಕಂತಹ ವ್ಯಕ್ತಿಗಳ ಆಯ್ಕೆ ಸರ್ಕಾರದ ಹಕ್ಕು.<br /> <br /> ಒಂದು ಉದಾಹರಣೆಯನ್ನು ತಮ್ಮ ಗಮನಕ್ಕೆ ತರುತ್ತೇನೆ. ಕಾಂಗ್ರೆಸ್-ಜನತಾ ದಳ ಸಮ್ಮಿಶ್ರ ಸರ್ಕಾರದಿಂದ ನೇಮಿತರಾದವರು ಜನತಾದಳ-ಬಿಜೆಪಿ ಸಮ್ಮಿಶ್ರದಲ್ಲೂ ಮುಂದುವರಿದು, ಬಿಜೆಪಿಯ 5 ವರ್ಷಗಳಲ್ಲೂ ಮುಂದುವರಿದು ಇದೀಗ ರಾಜೀನಾಮೆ ನೀಡಲು ಸರ್ಕಾರದ ಆದೇಶಕಾಯುತ್ತಿರುವ ಸಂದರ್ಭವನ್ನು ಸಾಂಸ್ಕೃತಿಕ ಲೋಕ ಯಾವ ರೀತಿ ಅರ್ಥೈಸುತ್ತದೆ? ಆತ್ಮವಿಮರ್ಶೆ ಮಾಡಿಕೊಳ್ಳುವ ಸಹಜ ಸೌಜನ್ಯ ಮರೆತಿರುವ ಸಾಂಸ್ಕೃತಿಕ ವಲಯದ ಅಧಿಕಾರದಾಹಿಗಳನ್ನು ಕೆಳಗಿಳಿಸದಿದ್ದರೆ ಅದು ಸರ್ಕಾರದ `ಲೋಪ' ವಾಗುತ್ತದೆ. ಜನಾದೇಶ ನಿರಾಕರಿಸಿದಂತಾಗುತ್ತದೆ. <br /> <strong>-ಅನ್ನಪೂರ್ಣ ವೆಂಕಟನಂಜಪ್ಪ, ತುಮಕೂರು.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>