<p>ಬೆಂಗಳೂರು ಹತ್ತು ದಿನಗಳ ಪುಸ್ತಕೋತ್ಸವಕ್ಕೆ ಅರಮನೆ ಮೈದಾನದಲ್ಲಿ ಅನುಮತಿ ದೊರೆಯದೇ ಇರುವುದಕ್ಕೆ ನಾಡಿನ ಸಾಹಿತಿಗಳು ಬೇಸರ ವ್ಯಕ್ತಪಡಿಸಿದ್ದು, ಅವರ ಅಭಿಪ್ರಾಯ ಇಲ್ಲಿದೆ<br /> <br /> <strong>ಮೊಟಕುಗೊಳಿಸುವುದು ಸರಿಯಲ್ಲ</strong><br /> ಪುಸ್ತಕೋತ್ಸವ ಪ್ರಾಮುಖ್ಯದ ಬಗ್ಗೆ ಸರ್ಕಾರಕ್ಕೆ ಅರಿವಿರಬೇಕು. ಇತರೆ ಭಾಷೆಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪುಸ್ತಕ ಖರೀದಿಸಿ, ಓದುವವರ ಸಂಖ್ಯೆ ಕಡಿಮೆಯಿದೆ. ಈಚಿನ ದಿನಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಪುಸ್ತಕೋತ್ಸವಗಳಿಂದಲೇ ಪುಸ್ತಕ ಖರೀದಿಸಿ, ಓದುವ ಸಂಸ್ಕೃತಿ ಬೆಳೆಯುತ್ತಿದೆ.</p>.<p>ಈ ಸಂದರ್ಭದಲ್ಲಿ ಸರ್ಕಾರವೇ ಮುಂದೆ ನಿಂತು ಉತ್ಸವವನ್ನು ಆಯೋಜನೆ ಮಾಡಬೇಕೇ ಹೊರತು, ಹೀಗೆ 10 ದಿನದ ಉತ್ಸವವನ್ನು ಮೂರೇ ದಿನಕ್ಕೆ ಮೊಟಕುಗೊಳಿಸಿದ್ದು ಸರಿಯಲ್ಲ. <br /> <strong>-ಡಾ.ಮಮತಾ ಜಿ.ಸಾಗರ್, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ.</strong><br /> <br /> <strong>ನಿರಾಸೆಯಾಗಿದೆ</strong><br /> ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದಲೂ ಜನ ಬರುತ್ತಾರೆ. ಅರಮನೆ ಮೈದಾನದಲ್ಲಿ ಹತ್ತು ದಿನಗಳ ಕಾಲ ಪುಸ್ತಕೋತ್ಸವ ನಡೆದರೂ ಜನ ಕಿಕ್ಕಿರಿದು ಸೇರುತ್ತಾರೆ. ಮಕ್ಕಳನ್ನು, ಮನೆಗೆ ಬರುವ ನೆಂಟರಿಷ್ಟರನ್ನು ಉತ್ಸವಕ್ಕೆ ಕರೆದುಕೊಂಡು ಹೋಗುವುದೇ ಒಂದು ಸಂಭ್ರಮ. ಇದಕ್ಕೆ ತಡೆ ಹಾಕಿರುವುದಕ್ಕೆ ನಿರಾಸೆಯಾಗಿದೆ.<br /> <strong>-ಪ್ರೊ.ಸಿ.ಜಯಶ್ರೀ ಕಂಬಾರ, ಕವಯತ್ರಿ.</strong></p>.<p><strong>ಸಾಂಸ್ಕೃತಿಕ ದುರಂತ</strong><br /> ಪುಸ್ತಕ ಸಂಸ್ಕೃತಿಯೇ ದೊಡ್ಡ ವಿದ್ಯಾನಿಧಿ. ವರ್ಷಕ್ಕೊಮ್ಮೆ ನಡೆಯುವ ಪುಸ್ತಕ ಜಾತ್ರೆಯಲ್ಲಿ ಸದಭಿರುಚಿಯ ಪುಸ್ತಕಗಳನ್ನು ನೋಡುವುದೇ ಒಂದು ಹಬ್ಬ. ಪುಸ್ತಕೋತ್ಸವವನ್ನು ವಾಣಿಜ್ಯ ಉದ್ದೇಶವೆಂಬ ಸೀಮಿತ ಚೌಕಟ್ಟಿನಲ್ಲಿಟ್ಟು ನೋಡುವುದು ಸರಿಯಲ್ಲ. ಹತ್ತು ದಿನಗಳ ಪುಸ್ತಕೋತ್ಸವಕ್ಕೆ ಅನುಮತಿ ದೊರೆಯದೇ ಇರುವುದು ಸಾಂಸ್ಕೃತಿಕ ದುರಂತ.<br /> <strong>-ಪ್ರೊ.ಕಮಲಾ ಹಂಪನಾ-, ಹಿರಿಯ ಸಾಹಿತಿ.<br /> <br /> ನೋವಿನ ಸಂಗತಿ</strong><br /> ಪುಸ್ತಕವೆಂದರೆ ದೊಡ್ಡ ಅರಿವಿನ ಕಣಜ. ವಿಭಿನ್ನ ಭಾಷೆಯ, ಅಭಿರುಚಿಯ ಪುಸ್ತಕಗಳನ್ನು ನೋಡುವುದೇ ಒಂದು ಚಂದ. ಪುಸ್ತಕೋತ್ಸವದಲ್ಲಿ ನಡೆಯುವ ಕವಿಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದೆ. ಈ ಬಾರಿ ಉತ್ಸವಕ್ಕೆ ಅನುಮತಿ ದೊರೆಯದೇ ಇರುವುದು ನೋವಿನ ಸಂಗತಿ.<br /> <strong>-ಸುಬ್ಬು ಹೊಲೆಯಾರ್, ಕವಿ.<br /> <br /> ಕೇವಲ ಪುಸ್ತಕ ಮಾರಾಟವಲ್ಲ..</strong><br /> ಪುಸ್ತಕೋತ್ಸವದಲ್ಲಿ ಕೇವಲ ಪುಸ್ತಕ ಮಾರಾಟ ಮಾತ್ರ ನಡೆಯುವುದಿಲ್ಲ. ಬದಲಿಗೆ ಕವಿಗೋಷ್ಠಿ, ಸಾಹಿತಿಗಳೊಂದಿಗೆ ಸಂವಾದ ನಡೆಯುತ್ತದೆ. ಇದೊಂದು ಬಗೆಯ ಸಾಹಿತ್ಯ ಜಾತ್ರೆ. ಇದಕ್ಕೆ ಅನುಮತಿ ದೊರೆಯದೇ ಇರುವುದು ಅಕ್ಷರ ಲೋಕಕ್ಕೆ ಆದ ಅಪಚಾರ--.<br /> <strong>-ಎಚ್.ಎಲ್.ಪುಷ್ಪಾ, ಸಾಹಿತಿ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು ಹತ್ತು ದಿನಗಳ ಪುಸ್ತಕೋತ್ಸವಕ್ಕೆ ಅರಮನೆ ಮೈದಾನದಲ್ಲಿ ಅನುಮತಿ ದೊರೆಯದೇ ಇರುವುದಕ್ಕೆ ನಾಡಿನ ಸಾಹಿತಿಗಳು ಬೇಸರ ವ್ಯಕ್ತಪಡಿಸಿದ್ದು, ಅವರ ಅಭಿಪ್ರಾಯ ಇಲ್ಲಿದೆ<br /> <br /> <strong>ಮೊಟಕುಗೊಳಿಸುವುದು ಸರಿಯಲ್ಲ</strong><br /> ಪುಸ್ತಕೋತ್ಸವ ಪ್ರಾಮುಖ್ಯದ ಬಗ್ಗೆ ಸರ್ಕಾರಕ್ಕೆ ಅರಿವಿರಬೇಕು. ಇತರೆ ಭಾಷೆಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪುಸ್ತಕ ಖರೀದಿಸಿ, ಓದುವವರ ಸಂಖ್ಯೆ ಕಡಿಮೆಯಿದೆ. ಈಚಿನ ದಿನಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಪುಸ್ತಕೋತ್ಸವಗಳಿಂದಲೇ ಪುಸ್ತಕ ಖರೀದಿಸಿ, ಓದುವ ಸಂಸ್ಕೃತಿ ಬೆಳೆಯುತ್ತಿದೆ.</p>.<p>ಈ ಸಂದರ್ಭದಲ್ಲಿ ಸರ್ಕಾರವೇ ಮುಂದೆ ನಿಂತು ಉತ್ಸವವನ್ನು ಆಯೋಜನೆ ಮಾಡಬೇಕೇ ಹೊರತು, ಹೀಗೆ 10 ದಿನದ ಉತ್ಸವವನ್ನು ಮೂರೇ ದಿನಕ್ಕೆ ಮೊಟಕುಗೊಳಿಸಿದ್ದು ಸರಿಯಲ್ಲ. <br /> <strong>-ಡಾ.ಮಮತಾ ಜಿ.ಸಾಗರ್, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ.</strong><br /> <br /> <strong>ನಿರಾಸೆಯಾಗಿದೆ</strong><br /> ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದಲೂ ಜನ ಬರುತ್ತಾರೆ. ಅರಮನೆ ಮೈದಾನದಲ್ಲಿ ಹತ್ತು ದಿನಗಳ ಕಾಲ ಪುಸ್ತಕೋತ್ಸವ ನಡೆದರೂ ಜನ ಕಿಕ್ಕಿರಿದು ಸೇರುತ್ತಾರೆ. ಮಕ್ಕಳನ್ನು, ಮನೆಗೆ ಬರುವ ನೆಂಟರಿಷ್ಟರನ್ನು ಉತ್ಸವಕ್ಕೆ ಕರೆದುಕೊಂಡು ಹೋಗುವುದೇ ಒಂದು ಸಂಭ್ರಮ. ಇದಕ್ಕೆ ತಡೆ ಹಾಕಿರುವುದಕ್ಕೆ ನಿರಾಸೆಯಾಗಿದೆ.<br /> <strong>-ಪ್ರೊ.ಸಿ.ಜಯಶ್ರೀ ಕಂಬಾರ, ಕವಯತ್ರಿ.</strong></p>.<p><strong>ಸಾಂಸ್ಕೃತಿಕ ದುರಂತ</strong><br /> ಪುಸ್ತಕ ಸಂಸ್ಕೃತಿಯೇ ದೊಡ್ಡ ವಿದ್ಯಾನಿಧಿ. ವರ್ಷಕ್ಕೊಮ್ಮೆ ನಡೆಯುವ ಪುಸ್ತಕ ಜಾತ್ರೆಯಲ್ಲಿ ಸದಭಿರುಚಿಯ ಪುಸ್ತಕಗಳನ್ನು ನೋಡುವುದೇ ಒಂದು ಹಬ್ಬ. ಪುಸ್ತಕೋತ್ಸವವನ್ನು ವಾಣಿಜ್ಯ ಉದ್ದೇಶವೆಂಬ ಸೀಮಿತ ಚೌಕಟ್ಟಿನಲ್ಲಿಟ್ಟು ನೋಡುವುದು ಸರಿಯಲ್ಲ. ಹತ್ತು ದಿನಗಳ ಪುಸ್ತಕೋತ್ಸವಕ್ಕೆ ಅನುಮತಿ ದೊರೆಯದೇ ಇರುವುದು ಸಾಂಸ್ಕೃತಿಕ ದುರಂತ.<br /> <strong>-ಪ್ರೊ.ಕಮಲಾ ಹಂಪನಾ-, ಹಿರಿಯ ಸಾಹಿತಿ.<br /> <br /> ನೋವಿನ ಸಂಗತಿ</strong><br /> ಪುಸ್ತಕವೆಂದರೆ ದೊಡ್ಡ ಅರಿವಿನ ಕಣಜ. ವಿಭಿನ್ನ ಭಾಷೆಯ, ಅಭಿರುಚಿಯ ಪುಸ್ತಕಗಳನ್ನು ನೋಡುವುದೇ ಒಂದು ಚಂದ. ಪುಸ್ತಕೋತ್ಸವದಲ್ಲಿ ನಡೆಯುವ ಕವಿಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದೆ. ಈ ಬಾರಿ ಉತ್ಸವಕ್ಕೆ ಅನುಮತಿ ದೊರೆಯದೇ ಇರುವುದು ನೋವಿನ ಸಂಗತಿ.<br /> <strong>-ಸುಬ್ಬು ಹೊಲೆಯಾರ್, ಕವಿ.<br /> <br /> ಕೇವಲ ಪುಸ್ತಕ ಮಾರಾಟವಲ್ಲ..</strong><br /> ಪುಸ್ತಕೋತ್ಸವದಲ್ಲಿ ಕೇವಲ ಪುಸ್ತಕ ಮಾರಾಟ ಮಾತ್ರ ನಡೆಯುವುದಿಲ್ಲ. ಬದಲಿಗೆ ಕವಿಗೋಷ್ಠಿ, ಸಾಹಿತಿಗಳೊಂದಿಗೆ ಸಂವಾದ ನಡೆಯುತ್ತದೆ. ಇದೊಂದು ಬಗೆಯ ಸಾಹಿತ್ಯ ಜಾತ್ರೆ. ಇದಕ್ಕೆ ಅನುಮತಿ ದೊರೆಯದೇ ಇರುವುದು ಅಕ್ಷರ ಲೋಕಕ್ಕೆ ಆದ ಅಪಚಾರ--.<br /> <strong>-ಎಚ್.ಎಲ್.ಪುಷ್ಪಾ, ಸಾಹಿತಿ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>