<p><strong>ನವಲಗುಂದ:</strong> ಪುರಸಭೆ ಹಾಗೂ ಕೆಎಸ್ಆರ್ಟಿಸಿ ಅಧಿಕಾರಿಗಳ ಹಗ್ಗಜಗ್ಗಾಟದಿಂದಾಗಿ ಇಲ್ಲಿಯ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ನೀರು ಹರಿದು ಹೋಗುವ ಪೈಪ್ಲೈನ್ನಲ್ಲಿ ಕೊಳೆ ತುಂಬಿದ್ದು ನಾಗರಿಕರು ದುರ್ವಾಸನೆ ಸಹಿಸುತ್ತಲೇ ಬಸ್ಗೆ ಕಾಯಬೇಕಾಗದ ಪರಿಸ್ಥಿತಿ ಉಂಟಾಗಿದೆ.<br /> <br /> ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಲವು ವರ್ಷಗಳಿಂದ ಈ ಪೈಪ್ಲೈನ್ ದುರಸ್ತಿ ಕಂಡಿಲ್ಲ. ಹೀಗಾಗಿ ಶೌಚಾಲಯದಿಂದ ಹೊರಡುವ ದುರ್ವಾಸನೆ ಕಿ.ಮೀ.ದೂರದ ವರೆಗೆ ಹರಡುತ್ತಿದೆ.<br /> <br /> ಇದು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿ ರೋಗರುಜಿನಗಳು ಹರಡುತ್ತವೆಯೋ ಎಂಬ ಆತಂಕವೂ ಜನರನ್ನು ಕಾಡುತ್ತಿದೆ. ಐಟಿಐ ಹಾಗೂ ಶಂಕರ ಮಹಾವಿದ್ಯಾಲಯ ಇದೇ ದಾರಿಯಲ್ಲಿ ಇದೆ. ಇಲ್ಲಿಗೆ ತೆರಳುವ ವಿದ್ಯಾರ್ಥಿಗಳಿಗೂ ಮೂಗು ಮುಚ್ಚಿಕೊಂಡು ಹೋಗುವ ಅನಿವಾರ್ಯತೆ. ಪ್ರಯಾಣಿಕರು ಈ ಶೌಚಾಲಯವನ್ನು ಬಳಸುವುದಂತೂ ಸಾಧ್ಯವಿಲ್ಲದ ಮಾತು.<br /> <br /> ಈ ಹಿಂದೆ ಶೌಚಾಲಯದ ದುರ್ವಾಸನೆ ತಡೆಯಲಾರದೆ ಹಲವಾರು ಸಂಘಟನೆಗಳು, ನಾಗರಿಕರು ಹೋರಾಟ ಮಾಡಿದ್ದರು. ಇದರ ಫಲವಾಗಿ ಮಾಜಿ ಶಾಸಕ ಡಾ.ಆರ್.ಬಿ. ಶಿರಿಯಣ್ಣವರ ಅವಧಿಯಲ್ಲಿ ್ಙ 10 ಲಕ್ಷ ಬಿಡುಗಡೆಯಾಗಿತ್ತು. ಆದರೆ ಕಾಮಗಾರಿಗಳು ಸರಿಯಾಗಿ ನಡೆಯದ ಕಾರಣ ದುರ್ವಾಸನೆ ಹೋಗಲಿಲ್ಲ.<br /> <br /> ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಸಂತೋಷ ಬ್ಯಾಳಿ ಅವರನ್ನು ಸಂಪರ್ಕಿಸಿದಾಗ ಈ ಜವಾಬ್ದಾರಿ ಕೆಎಸ್ಆರ್ಟಿಸಿಯದ್ದಾಗಿದೆ. ಸಮಸ್ಯೆಯನ್ನು ಅವರ ಗಮನಕ್ಕೆ ತರಲಾಗಿದೆ. ಆದರೆ ಅವರು ಈ ಕೆಲಸವನ್ನು ಪುರಸಭೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿಸಿದರು.<br /> <br /> <strong>ಅಧಿಕಾರಿಗಳಿಂದ ಯಾವುದೇ ರೀತಿಯ ಸ್ಪಂದನೆ ಇಲ್ಲ</strong><br /> </p>.<p>ಈ ದುರ್ವಾಸನೆ ಸಹಿಸಿ ಸಹಿಸಿ ಸಾಕಾಗಿದೆ. ಸೊಳ್ಳೆಗಳ ಕಾಟದಿಂದ ಮಕ್ಕಳು ರೋಗ ರುಜಿನಗಳಿಗೆ ಈಡಾಗುತ್ತಿದ್ದಾರೆ. ನಿದ್ರೆ ಬರುತ್ತಿಲ್ಲ. ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಹೇಳಿದರೆ ಸ್ಪಂದಿಸುತ್ತಿಲ್ಲ<br /> <strong>-ಶಿವಾಜಿ ಕಲಾಲ<br /> <br /> ಶೀಘ್ರ ಸ್ಪಂದಿಸಿ, ಸಮಸ್ಯೆ ಪರಿಹರಿಸಿ</strong><br /> </p>.<p>ಇದು ನಾಚಿಕೆಗೇಡಿತನದ ವಿಷಯ, ಸಾರ್ವಜನಿಕರಿಗೆ ಈ ರೀತಿಯಾಗಿ ಕಷ್ಟ ಕೊಡುತ್ತಿರುವುದರಿಂದ ಯಾರೂ ಉದ್ದಾರವಾಗಲಾರರು. ಹೀಗಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಕಡೆಗೆ ಗಮನ ಹರಿಸಬೇಕು<br /> <strong>-ಅರ್ಜುನ ಹಳೆಮನಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವಲಗುಂದ:</strong> ಪುರಸಭೆ ಹಾಗೂ ಕೆಎಸ್ಆರ್ಟಿಸಿ ಅಧಿಕಾರಿಗಳ ಹಗ್ಗಜಗ್ಗಾಟದಿಂದಾಗಿ ಇಲ್ಲಿಯ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ನೀರು ಹರಿದು ಹೋಗುವ ಪೈಪ್ಲೈನ್ನಲ್ಲಿ ಕೊಳೆ ತುಂಬಿದ್ದು ನಾಗರಿಕರು ದುರ್ವಾಸನೆ ಸಹಿಸುತ್ತಲೇ ಬಸ್ಗೆ ಕಾಯಬೇಕಾಗದ ಪರಿಸ್ಥಿತಿ ಉಂಟಾಗಿದೆ.<br /> <br /> ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಲವು ವರ್ಷಗಳಿಂದ ಈ ಪೈಪ್ಲೈನ್ ದುರಸ್ತಿ ಕಂಡಿಲ್ಲ. ಹೀಗಾಗಿ ಶೌಚಾಲಯದಿಂದ ಹೊರಡುವ ದುರ್ವಾಸನೆ ಕಿ.ಮೀ.ದೂರದ ವರೆಗೆ ಹರಡುತ್ತಿದೆ.<br /> <br /> ಇದು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿ ರೋಗರುಜಿನಗಳು ಹರಡುತ್ತವೆಯೋ ಎಂಬ ಆತಂಕವೂ ಜನರನ್ನು ಕಾಡುತ್ತಿದೆ. ಐಟಿಐ ಹಾಗೂ ಶಂಕರ ಮಹಾವಿದ್ಯಾಲಯ ಇದೇ ದಾರಿಯಲ್ಲಿ ಇದೆ. ಇಲ್ಲಿಗೆ ತೆರಳುವ ವಿದ್ಯಾರ್ಥಿಗಳಿಗೂ ಮೂಗು ಮುಚ್ಚಿಕೊಂಡು ಹೋಗುವ ಅನಿವಾರ್ಯತೆ. ಪ್ರಯಾಣಿಕರು ಈ ಶೌಚಾಲಯವನ್ನು ಬಳಸುವುದಂತೂ ಸಾಧ್ಯವಿಲ್ಲದ ಮಾತು.<br /> <br /> ಈ ಹಿಂದೆ ಶೌಚಾಲಯದ ದುರ್ವಾಸನೆ ತಡೆಯಲಾರದೆ ಹಲವಾರು ಸಂಘಟನೆಗಳು, ನಾಗರಿಕರು ಹೋರಾಟ ಮಾಡಿದ್ದರು. ಇದರ ಫಲವಾಗಿ ಮಾಜಿ ಶಾಸಕ ಡಾ.ಆರ್.ಬಿ. ಶಿರಿಯಣ್ಣವರ ಅವಧಿಯಲ್ಲಿ ್ಙ 10 ಲಕ್ಷ ಬಿಡುಗಡೆಯಾಗಿತ್ತು. ಆದರೆ ಕಾಮಗಾರಿಗಳು ಸರಿಯಾಗಿ ನಡೆಯದ ಕಾರಣ ದುರ್ವಾಸನೆ ಹೋಗಲಿಲ್ಲ.<br /> <br /> ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಸಂತೋಷ ಬ್ಯಾಳಿ ಅವರನ್ನು ಸಂಪರ್ಕಿಸಿದಾಗ ಈ ಜವಾಬ್ದಾರಿ ಕೆಎಸ್ಆರ್ಟಿಸಿಯದ್ದಾಗಿದೆ. ಸಮಸ್ಯೆಯನ್ನು ಅವರ ಗಮನಕ್ಕೆ ತರಲಾಗಿದೆ. ಆದರೆ ಅವರು ಈ ಕೆಲಸವನ್ನು ಪುರಸಭೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿಸಿದರು.<br /> <br /> <strong>ಅಧಿಕಾರಿಗಳಿಂದ ಯಾವುದೇ ರೀತಿಯ ಸ್ಪಂದನೆ ಇಲ್ಲ</strong><br /> </p>.<p>ಈ ದುರ್ವಾಸನೆ ಸಹಿಸಿ ಸಹಿಸಿ ಸಾಕಾಗಿದೆ. ಸೊಳ್ಳೆಗಳ ಕಾಟದಿಂದ ಮಕ್ಕಳು ರೋಗ ರುಜಿನಗಳಿಗೆ ಈಡಾಗುತ್ತಿದ್ದಾರೆ. ನಿದ್ರೆ ಬರುತ್ತಿಲ್ಲ. ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಹೇಳಿದರೆ ಸ್ಪಂದಿಸುತ್ತಿಲ್ಲ<br /> <strong>-ಶಿವಾಜಿ ಕಲಾಲ<br /> <br /> ಶೀಘ್ರ ಸ್ಪಂದಿಸಿ, ಸಮಸ್ಯೆ ಪರಿಹರಿಸಿ</strong><br /> </p>.<p>ಇದು ನಾಚಿಕೆಗೇಡಿತನದ ವಿಷಯ, ಸಾರ್ವಜನಿಕರಿಗೆ ಈ ರೀತಿಯಾಗಿ ಕಷ್ಟ ಕೊಡುತ್ತಿರುವುದರಿಂದ ಯಾರೂ ಉದ್ದಾರವಾಗಲಾರರು. ಹೀಗಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಕಡೆಗೆ ಗಮನ ಹರಿಸಬೇಕು<br /> <strong>-ಅರ್ಜುನ ಹಳೆಮನಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>