<p><strong>ತೀರ್ಥಹಳ್ಳಿ:</strong> ರಾಜ್ಯದಲ್ಲಿ ಅತೀ ಹೆಚ್ಚು ಅಡಿಕೆ ಬೆಳೆಯುವ ತಾಲ್ಲೂಕಿನ ಅಡಿಕೆ ಬೆಳೆಗಾರರಿಗೆ ಗುಟ್ಕಾ ನಿಷೇಧದ ಬರೆ ಒಂದೆಡೆಯಾದರೆ, ಮುಂದಿನ ಫಸಲನ್ನು ಉಳಿಸಿಕೊಳ್ಳವುದು ಹೇಗೆ ಎಂಬ ಚಿಂತೆ ಮತ್ತೊಂದಡೆ.<br /> <br /> ಮುಂಗಾರು ಆರಂಭವಾಗಿದ್ದು, ಮಳೆ ಒಂದೇ ಸಮ ಸುರಿದರೆ ಕೊಳೆರೋಗದಿಂದ ಮುಕ್ತಿ ಪಡೆಯುವುದು ಹೇಗೆ ಎಂದು ರೈತರು ಆತಂಕಗೊಂಡಿದ್ದಾರೆ. ಈಗಾಗಲೇ ಅಡಿಕೆ ಮೆಳೆಗಳು ಕೀಟಗಳ ಹಾವಳಿಯಿಂದ ಉದು ರುವುದನ್ನ ತಡೆಗಟ್ಟಲು ಎರಡು ಮೂರು ಬಾರಿ ಕೀಟನಾಶಕ ಸಿಂಪಡಣೆ ಮಾಡಿದ್ದಾರೆ.<br /> <br /> ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಸಾಮಾನ್ಯವಾಗಿ ಕಾಡುವ ಕೊಳೆ ರೋಗದಿಂದ ಕಂಗಾಲಾಗಿರುವ ರೈತರು ಬೆಳೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.<br /> <br /> ಒಂದು ಎಕರೆ ಅಡಿಕೆ ತೋಟಕ್ಕೆ ಕನಿಷ್ಠ 7ರಿಂದ 8 ಸಾವಿರದಷ್ಟು ಹಣ ಖರ್ಚು ಮಾಡಬೇಕಾಗಿದೆ. ಕೂಲಿಯಾಳು ಸಮಸ್ಯೆ, ಅಡಿಕೆ ಮರವನ್ನೇರಿ ಔಷಧಿ ಸಿಂಪಡಿಸುವ ಕುಶಲಕರ್ಮಿಗಳ ಕೊರತೆಯಿಂದ ನಲುಗಿರುವ ರೈತರು ಪರ್ಯಾಯ ಮಾರ್ಗ ಕಂಡುಕೊಳ್ಳವಲ್ಲಿ ವಿಫಲರಾಗಿದ್ದಾರೆ.<br /> <br /> ನೀರಿನ ನಿರ್ವಹಣೆ, ಕೊಳೆ ರೋಗಕ್ಕೆ ಔಷಧಿ ಸಿಂಪಡಣೆ, ನಂತರ ಬಲಿತ ಅಡಿಕೆಯನ್ನು ಮರದಿಂದ ಕಿತ್ತು ಸುಲಿದು ಸಂಸ್ಕರಿಸುವ ಹೊತ್ತಿಗೆ ಹೈರಾಣಾಗುವ ಬೆಳೆಗಾರರಿಗೆ ಈಗ ರಾಜ್ಯ ಸರ್ಕಾರ ಗುಟ್ಕಾ ನಿಷೇಧ ಮಾಡಿರುವುದು ಅಡಿಕೆ ಬೆಳೆಯ ಕುರಿತು ರೈತರಲ್ಲಿ ಉತ್ಸಾಹವನ್ನು ಕುಗ್ಗಿಸಿದೆ.<br /> <br /> <strong>ಮಂಗಗಳ ಹಾವಳಿ: </strong>ಮಂಗಗಳು ಅಡಿಕೆ ಮೆಳೆಯನ್ನು ಹಾಳು ಮಾಡುತ್ತಿವೆ. ಅಡಿಕೆ ಮೆಳೆಗಳು ಬೆಳೆಯುವ ಹಂತದಲ್ಲಿ ಅತ್ಯಂತ ಸೂಕ್ಷ್ಮವಾಗಿ ಇರುವುದರಿಂದ ಮಂಗಗಳ ಉಗುರು ತಾಕಿದ ಅಡಿಕೆ ಕಾಯಿ ಬೆಳೆಯುವ ಹಂತದಲ್ಲಿ ಉದುರುತ್ತವೆ. ಒಮ್ಮೆ ಮಂಗಗಳು ದಾಳಿಯಿಟ್ಟರೆ ಎರಡು ಮೂರು ಕ್ವಿಂಟಲ್ನಷ್ಟು ಬೆಳೆ ನಷ್ಟವಾಗುತ್ತದೆ.<br /> <br /> ಕಳೆದ ಎಂಟು-ಹತ್ತು ವರ್ಷಗಳಿಂದ ಈಚೆಗೆ ಮಂಗಳು ಅಡಿಕೆ ಮೆಳೆಗೆ ದಾಳಿ ಇಡುವ ಪ್ರವೃತ್ತಿ ಬೆಳೆಸಿಕೊಂಡಿವೆ. ಮಂಗಗಳ ಹಾವಳಿ ತಡೆಗಟ್ಟಲು ಯಾವುದೇ ಮಾರ್ಗಗಳು ಇಲ್ಲದೆ ಕೈ ಚೆಲ್ಲಿ ಕುಳಿತಿದ್ದಾರೆ. ಮಂಗಗಳ ಹಾವಳಿಯಿಂದ ಬೆಳೆ ಹಾನಿಗೆ ಅರಣ್ಯ ಇಲಾಖೆಯಿಂದ ರೈತರಿಗೆ ಪರಿಹಾರವೂ ಸಿಕ್ಕಿಲ್ಲ.<br /> <br /> ತೀರ್ಥಹಳ್ಳಿ ಅಡಿಕೆಗೆ ತನ್ನದೇ ಆದ ಮಾನ್ಯತೆ ಇದೆ. ಅತ್ಯಂತ ಮುತುವರ್ಜಿಯಿಂದ ಅಡಿಕೆ ಸಿದ್ಧಗೊಳಿಸಿ ಮಾರುಕಟ್ಟೆಗೆ ಕಳುಹಿಸಿ ವ್ಯಾಪಾರ ಮಾಡುವ ರೈತರು ತಾವು ಬೆಳೆದ ಗುಣಮಟ್ಟದ ಅಡಿಕೆ ಸಿದ್ಧಪಡಿಸಿರುವುದಕ್ಕಾಗಿಯೇ ಸಂಭ್ರಮಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೀರ್ಥಹಳ್ಳಿ:</strong> ರಾಜ್ಯದಲ್ಲಿ ಅತೀ ಹೆಚ್ಚು ಅಡಿಕೆ ಬೆಳೆಯುವ ತಾಲ್ಲೂಕಿನ ಅಡಿಕೆ ಬೆಳೆಗಾರರಿಗೆ ಗುಟ್ಕಾ ನಿಷೇಧದ ಬರೆ ಒಂದೆಡೆಯಾದರೆ, ಮುಂದಿನ ಫಸಲನ್ನು ಉಳಿಸಿಕೊಳ್ಳವುದು ಹೇಗೆ ಎಂಬ ಚಿಂತೆ ಮತ್ತೊಂದಡೆ.<br /> <br /> ಮುಂಗಾರು ಆರಂಭವಾಗಿದ್ದು, ಮಳೆ ಒಂದೇ ಸಮ ಸುರಿದರೆ ಕೊಳೆರೋಗದಿಂದ ಮುಕ್ತಿ ಪಡೆಯುವುದು ಹೇಗೆ ಎಂದು ರೈತರು ಆತಂಕಗೊಂಡಿದ್ದಾರೆ. ಈಗಾಗಲೇ ಅಡಿಕೆ ಮೆಳೆಗಳು ಕೀಟಗಳ ಹಾವಳಿಯಿಂದ ಉದು ರುವುದನ್ನ ತಡೆಗಟ್ಟಲು ಎರಡು ಮೂರು ಬಾರಿ ಕೀಟನಾಶಕ ಸಿಂಪಡಣೆ ಮಾಡಿದ್ದಾರೆ.<br /> <br /> ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಸಾಮಾನ್ಯವಾಗಿ ಕಾಡುವ ಕೊಳೆ ರೋಗದಿಂದ ಕಂಗಾಲಾಗಿರುವ ರೈತರು ಬೆಳೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.<br /> <br /> ಒಂದು ಎಕರೆ ಅಡಿಕೆ ತೋಟಕ್ಕೆ ಕನಿಷ್ಠ 7ರಿಂದ 8 ಸಾವಿರದಷ್ಟು ಹಣ ಖರ್ಚು ಮಾಡಬೇಕಾಗಿದೆ. ಕೂಲಿಯಾಳು ಸಮಸ್ಯೆ, ಅಡಿಕೆ ಮರವನ್ನೇರಿ ಔಷಧಿ ಸಿಂಪಡಿಸುವ ಕುಶಲಕರ್ಮಿಗಳ ಕೊರತೆಯಿಂದ ನಲುಗಿರುವ ರೈತರು ಪರ್ಯಾಯ ಮಾರ್ಗ ಕಂಡುಕೊಳ್ಳವಲ್ಲಿ ವಿಫಲರಾಗಿದ್ದಾರೆ.<br /> <br /> ನೀರಿನ ನಿರ್ವಹಣೆ, ಕೊಳೆ ರೋಗಕ್ಕೆ ಔಷಧಿ ಸಿಂಪಡಣೆ, ನಂತರ ಬಲಿತ ಅಡಿಕೆಯನ್ನು ಮರದಿಂದ ಕಿತ್ತು ಸುಲಿದು ಸಂಸ್ಕರಿಸುವ ಹೊತ್ತಿಗೆ ಹೈರಾಣಾಗುವ ಬೆಳೆಗಾರರಿಗೆ ಈಗ ರಾಜ್ಯ ಸರ್ಕಾರ ಗುಟ್ಕಾ ನಿಷೇಧ ಮಾಡಿರುವುದು ಅಡಿಕೆ ಬೆಳೆಯ ಕುರಿತು ರೈತರಲ್ಲಿ ಉತ್ಸಾಹವನ್ನು ಕುಗ್ಗಿಸಿದೆ.<br /> <br /> <strong>ಮಂಗಗಳ ಹಾವಳಿ: </strong>ಮಂಗಗಳು ಅಡಿಕೆ ಮೆಳೆಯನ್ನು ಹಾಳು ಮಾಡುತ್ತಿವೆ. ಅಡಿಕೆ ಮೆಳೆಗಳು ಬೆಳೆಯುವ ಹಂತದಲ್ಲಿ ಅತ್ಯಂತ ಸೂಕ್ಷ್ಮವಾಗಿ ಇರುವುದರಿಂದ ಮಂಗಗಳ ಉಗುರು ತಾಕಿದ ಅಡಿಕೆ ಕಾಯಿ ಬೆಳೆಯುವ ಹಂತದಲ್ಲಿ ಉದುರುತ್ತವೆ. ಒಮ್ಮೆ ಮಂಗಗಳು ದಾಳಿಯಿಟ್ಟರೆ ಎರಡು ಮೂರು ಕ್ವಿಂಟಲ್ನಷ್ಟು ಬೆಳೆ ನಷ್ಟವಾಗುತ್ತದೆ.<br /> <br /> ಕಳೆದ ಎಂಟು-ಹತ್ತು ವರ್ಷಗಳಿಂದ ಈಚೆಗೆ ಮಂಗಳು ಅಡಿಕೆ ಮೆಳೆಗೆ ದಾಳಿ ಇಡುವ ಪ್ರವೃತ್ತಿ ಬೆಳೆಸಿಕೊಂಡಿವೆ. ಮಂಗಗಳ ಹಾವಳಿ ತಡೆಗಟ್ಟಲು ಯಾವುದೇ ಮಾರ್ಗಗಳು ಇಲ್ಲದೆ ಕೈ ಚೆಲ್ಲಿ ಕುಳಿತಿದ್ದಾರೆ. ಮಂಗಗಳ ಹಾವಳಿಯಿಂದ ಬೆಳೆ ಹಾನಿಗೆ ಅರಣ್ಯ ಇಲಾಖೆಯಿಂದ ರೈತರಿಗೆ ಪರಿಹಾರವೂ ಸಿಕ್ಕಿಲ್ಲ.<br /> <br /> ತೀರ್ಥಹಳ್ಳಿ ಅಡಿಕೆಗೆ ತನ್ನದೇ ಆದ ಮಾನ್ಯತೆ ಇದೆ. ಅತ್ಯಂತ ಮುತುವರ್ಜಿಯಿಂದ ಅಡಿಕೆ ಸಿದ್ಧಗೊಳಿಸಿ ಮಾರುಕಟ್ಟೆಗೆ ಕಳುಹಿಸಿ ವ್ಯಾಪಾರ ಮಾಡುವ ರೈತರು ತಾವು ಬೆಳೆದ ಗುಣಮಟ್ಟದ ಅಡಿಕೆ ಸಿದ್ಧಪಡಿಸಿರುವುದಕ್ಕಾಗಿಯೇ ಸಂಭ್ರಮಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>